Ad Widget

ಅದೋಗತಿ ತಲುಪಿದ ಸುಳ್ಯ ನಗರ ವ್ಯಾಪ್ತಿಯ ಕುದ್ಪಾಜೆ ರಸ್ತೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುದ್ಪಾಜೆ ರಸ್ತೆ ಕೆಲವೆಡೆ ಡಾಮರು ಕಾಣದೇ ಹಾಗೂ ಕೆಲವೆಡೆ ಹಾಕಿದ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ದುಸ್ಥರವಾಗಿದೆ. ಈ ರಸ್ತೆಗೆ ಸುಮಾರು 27ವರ್ಷಗಳ ಹಿಂದೆ ಹಾಕಿದ ಡಾಮರು ಎದ್ದು ಹೋಗಿದೆ. ಮತ್ತೆ ಯಾರು ಕೂಡ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿ ಸುಮಾರು 33 ಮನೆಗಳಿದ್ದು ವಾಹನ...

ಮೊಗ್ರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ 48 ದಿನ ಗಣಪತಿ ಹವನ

ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಮಾ.17 ರಿಂದ ಆರಂಭಗೊಂಡಿತು. ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ....
Ad Widget

ಗುತ್ತಿಗಾರು : ಮನೆ ಮನೆ ಯಕ್ಷಗಾನ ಪ್ರದರ್ಶನ

https://youtu.be/xxYWgrNqtsE ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ ಹಾಗೂ ಚೌಕಿಮನೆ ಪಂಜ ಇದರ ಜಂಟಿ ಸಹಯೋಗದೊಂದಿಗೆ ಮನೆ ಮನೆ ಯಕ್ಷಗಾನ ಪ್ರದರ್ಶನ ಗುತ್ತಿಗಾರು ಗ್ರಾಮದ ವಿವಿಧೆಡೆ ಆರಂಭಗೊಂಡಿದೆ. ಈ ತಿರುಗಾಟದ ಯಕ್ಷಗಾನ ತಂಡ ಕಳೆದ ಆರು ವರ್ಷಗಳಿಂದ 'ಸಂಸ್ಕಾರದಿಂದ ಸಂಸ್ಕೃತಿಯ ಉಳಿವಿಗಾಗಿ' ಯಕ್ಷಗಾನ ಪ್ರದರ್ಶನ ನೀಡುತ್ತಿದೆ.

ರಂಗಭೂಮಿಯನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ ರಂಗಮನೆ ಬಹುಭಾಷಾ ನಾಟಕೋತ್ಸವದಲ್ಲಿ ಮುಖ್ಯ ಮಂತ್ರಿ ಚಂದ್ರು

ಆಧುನಿಕ ಮಾಧ್ಯಮಗಳು ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿಯನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಬದ್ಧತೆಯಿಂದ ರಂಗಭೂಮಿಯನ್ನೇ ಬದುಕಾಗಿಸಿಕೊಂಡು ದುಡಿಯುತ್ತಿರುವ ಜೀವನರಾಂ ಓರ್ವ ಮಹಾನ್ ಸಾಧಕ' ಎಂದು ಹಿರಿಯ ರಂಗ ಕರ್ಮಿ, ಚಲನ ಚಿತ್ರ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಸುಳ್ಯದ...

ಕೊಲ್ಲಮೊಗ್ರು : ಸೋಲಾರ್ ಬೀದಿ ದೀಪ ಅಳವಡಿಕೆ

ತಾಲೂಕು ಪಂಚಾಯತ್ ಅನುದಾನದಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಬಾಗಿಲು ನಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಉದಯ ಕೊಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು. ✍ಉಲ್ಲಾಸ್ ಕಜ್ಜೋಡಿ
error: Content is protected !!