Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಸರ್ಕಾರ ಬಿಡುಗಡೆ ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಈ ಹಿಂದೆ ಸರಕಾರ ನೇಮಿಸಿದ್ದಅಭಿವೃದ್ಧಿ ಸಮಿತಿಯ ಕೆಲ ಸದಸ್ಯರನ್ನು ಉಳಿಸಿಕೊಂಡು ಹೊಸದಾಗಿ ನಾಲ್ಕು ಮಂದಿ ಸದಸ್ಯರ ಸೇರ್ಪಡೆಗೊಳಿಸಿ 9 ಮಂದಿಯ ವ್ಯವಸ್ಥಾಪನ ಸಮಿತಿ ರಚಿಸಿ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮಾ.5...

ನಿನಾದ ತಂಟೆಪ್ಪಾಡಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶದ ಮಾಹಿತಿ

ಕಳಂಜ ಗ್ರಾಮದ ನಿನಾದ ತಂಟೆಪ್ಪಾಡಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶದ ಮಾಹಿತಿ ಮತ್ತು ನೀವು ಹೇಗೆ ಪತ್ರಕರ್ತರು ಅಥವಾ ನಿರೂಪಕರಾಗಬಹುದು ಎನ್ನುವ ಉಚಿತ ತರಬೇತಿ ಕಾರ್ಯಕ್ರಮವು ಮಾರ್ಚ್ 14 ರ ಭಾನುವಾರದಂದು ನಡೆಯಲಿದೆ. ತರಬೇತಿಯನ್ನು ವಿಜಯಟೈಮ್ಸ್ ಮುಖ್ಯ ಸಂಪಾದಕರಾದ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಹಾಗೂ ಡಿಜಿಟಲ್ ಮೀಡಿಯಾ ಎಕ್ಸ್ ಪರ್ಟ್ ಶ್ರೀ ಅಲ್ವಿನ್ ಮೆಂಡೋನ್ಸಾ ಅವರು...
Ad Widget

ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿ ಗಳಿಗೆ ನ್ಯಾಯಕ್ಕಾಗಿ NSUI ಸುಳ್ಯ ಅಭಿಯಾನ

ಸುಳ್ಯ : 2019-20 ನೇ ಸಾಲಿನ ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿ ಗಳ ವಿಶೇಷ ಗಣತಿಯನ್ನು ಮಾಡಿ . ವಿದ್ಯಾರ್ಥಿ ಗಳಿಗೆ ನ್ಯಾಯ ಒದಗಿಸುವ ಸಲುವಾಗಿ‌ NSUI ಸುಳ್ಯ ಅಭಿಯಾನ ಕೈಗೊಂಡಿದೆ. ವಿದ್ಯಾರ್ಥಿ ವೇತನ ದೊರೆಯದ ವಿದ್ಯಾರ್ಥಿ ಈ ಸರ್ವೆ ಅಲ್ಲಿ ಬಾಗವಹಿಸಿ ತಮ್ಮ ಮಾಹಿತಿ ಯನ್ನು ನೋಂದಾವಣೆ ಮಾಡಲು ಕೋರಲಾಗಿದೆ.ಈ ಎಲ್ಲಾ ಮಾಹಿತಿಯನ್ನು NSUI...

ಶೇಣಿ : ಪೋಷಾಣ್ ಅಭಿಯಾನ ಕಾರ್ಯಕ್ರಮ

ಗರ್ಭಿಣಿ ತಾಯಂದಿರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಶೇಣಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಅಶೋಕ ಚೂಂತಾರು, ಸೀತಾ ಹೆಚ್. ಮೀನಾಕ್ಷಿ ಚೂಂತಾರು ನಿವೃತ ಫಾರೆಸ್ಟರ್ ಗುಡ್ಡಪ್ಪ ಗೌಡ ದೇರಾಜೆ, ಆಶಾ ಕಾರ್ಯಕರ್ತೆ ರತ್ನವತಿ ಶೇಣಿ, ಅಂಗನವಾಡಿ ಕಾರ್ಯಕರ್ತೆ ಧರ್ಮಾವತಿ ದೇರಾಜೆ, ಸಹಾಯಕಿ ಗೀತಾಕುಮಾರಿ ಉಪಸ್ಥಿತರಿದ್ದರು. ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿಯನ್ನು...

ಐನೆಕಿದು : ರಸ್ತೆ ಅಭಿವೃದ್ಧಿಗೆ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಚಾಲನೆ

ಸುಬ್ರಹ್ಮಣ್ಯ ತಾ.ಪಂ.ವ್ಯಾಪ್ತಿಯ ಐನೆಕಿದು ಕುಡುಮುಂಡೂರು ರಸ್ತೆ ಅಭಿವೃದ್ಧಿಗೆ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಲಲಿತ, ಗ್ರಾ.ಪಂ.ಸದಸ್ಯ ಗಿರೀಶ್ ಆಚಾರ್ಯ, ಶ್ರೀಮತಿ ಭಾರತಿ, ಗುತ್ತಿಗಾರು ತಾ.ಪಂ‌.ಸದಸ್ಯೆ ಯಶೋಧ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕೂಜುಗೋಡು, ಸೋಮಸುಂದರ ಕೂಜುಗೋಡು, ಹೊನ್ನಯ್ಯ ಗೌಡ ಕಟ್ಟೆಮನೆ, ಗುಣವರ್ಧನ ಕೆದಿಲ, ಸೀತಾರಾಮ ಮಾಸ್ತರ್, ಜಯಪ್ರಕಾಶ್ ಕೂಜುಗೋಡು,...

ನಯನ(ನಳಿನಿ)- ಹರಿಪ್ರಸಾದ್ ಕಲ್ಲಾಜೆ ಶುಭವಿವಾಹ

ಮರ್ಕಂಜ ಗ್ರಾಮದ (ಮಿತ್ತಡ್ಕ) ಪಿಲಿಕಜೆ ಮನೆ ಕುಶಾಲಪ್ಪ ಗೌಡರ ಪುತ್ರಿ ನಯನ (ನಳಿನಿ)ಯವರ ವಿವಾಹವು ನಾಲ್ಕೂರು ಗ್ರಾಮದ ಪುಣೇರಿ ಕಲ್ಲಾಜೆ ಮನೆ ಸೀತಾರಾಮ ಗೌಡರ ಪುತ್ರ ಹರಿಪ್ರಸಾದ್ ರೊಂದಿಗೆ ಫೆ.21 ರಂದು ಮರಕತ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಿದ್ಧಿಧಾತ್ರಿ ಸಭಾಭವನದಲ್ಲಿ ನಡೆಯಿತು.

ಎಲಿಮಲೆ : ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಮಾ5 ರಂದು ಎಲಿಮಲೆಯ ದೇವಚಳ್ಳ ಮಾ.ಹಿ. ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದರು. ಪ್ರಾಥಮಿಕ ಹಾಗೂ ಪ್ರೌಡಶಾಲೆಯಲ್ಲಿ ನಡೆಯುತ್ತಿರುವ ಉತ್ತಮ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆ ಶತಮಾನೋತ್ಸವದ ಸಂಭ್ರಮ ನಡೆಯಲಿರುವುದರಿಂದ ವಿಶೇಷ ಅನುದಾನ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು. ಖಂಡಿತವಾಗಿ ಕೊಡುತ್ತೇನೆ...

ಪೆರುವಾಜೆ ಶ್ರೀ ಜಲದುರ್ಗಾದೇವಿ ಸನ್ನಿಧಿಯಲ್ಲಿ ಏಕಾಹ ಭಜನೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ಸನ್ನಿಧಿಯಲ್ಲಿ ಏಕಾಹ ಭಜನೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಮಾ. 5ರ ಶುಕ್ರವಾರ ಸೂರ್ಯೋದಯದಿಂದ ಮಾ.6ರ ಶನಿವಾರ ಸೂರ್ಯೋದಯದ ತನಕ ನಡೆಯಲಿದ್ದುಇಂದು ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯವರಿಂದ...

ಇದೀಗ ನಿಂತಿಕಲ್ಲಿನಲ್ಲಿ ಪ್ರಪ್ರಥಮ ಬಾರಿಗೆ ಆರಂಭವಾಗುತ್ತಿದೆ ಲಕ್ಕೀ ಡ್ರಾ ಯೋಜನೆ

ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ ನಿಂತಿಕಲ್ಲಿನಲ್ಲೇ ಪ್ರಪ್ರಥಮ ಬಾರಿಗೆ 'ಲಕ್ಕೀ ಡ್ರಾ' ಎಂಬ ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ಯೋಜನೆಯು ಮಾ. 14ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲಬಹುದಾಗಿದೆ. ಈ...
error: Content is protected !!