Ad Widget

ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ – ಸಭಾ ಕಾರ್ಯಕ್ರಮ

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಇಂದು ಆರಂಭಗೊಂಡಿತು.ಇಂದು ಬೆಳಿಗ್ಗೆ ಗೊನೆ ಮುಹೂರ್ತ, ಜಾಗದ ಪಂಜುರ್ಲಿಗೆ ತಂಬಿಲ, ಸಂಜೆ ಗುಳಿಗ ದೈವದ ಎಣ್ಣೆ ಬೂಳ್ಯ ನಡೆದು ಗುಳಿಗ ದೈವದ ನೇಮೋತ್ಸವ ನಡೆಯಿತು. ಆ ಬಳಿಕ ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ...

ಅಡಿಕೆಗೆ 25 ಕೋಟಿ ರೂ ಪ್ಯಾಕೇಜ್ : ಟೀಕೆ ಬಿಟ್ಟು ಮುಕ್ತ ಮನಸ್ಸಿನಿಂದ ಸ್ವಾಗತಿಸಿ – ಬಿಜೆಪಿ

ಕರ್ನಾಟಕ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಅಡಿಕೆಯ ಹಳದಿರೋಗ ಕುರಿತ ಸಂಶೋಧನೆಗೆ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ ಕವಾಗಿ 25 ಕೋಟಿ ರೂ ಪ್ಯಾಕೇಜನ್ನು ಘೋಷಿಸಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ಯಾಕೇಜ್ ನ ರೂಪುರೇಷೆ ಸಿದ್ಧವಾಗುವ ಮೊದಲೇ ಅದರೊಳಗೆ ಹುಳುಕು ಹುಡುಕುವ ಕೆಲಸವನ್ನು ಬಿಟ್ಟು ರಾಜ್ಯದಲ್ಲಿ ಮೊದಲ...
Ad Widget

ರಾಷ್ಟ್ರೀಯ ಪ್ರಾಕೃತ ಪರೀಕ್ಷೆಯಲ್ಲಿ ವೈಷ್ಣವಿ ರೋಹಿತಾಶ್ವ ಮೋಟ್ನೂರುರವರಿಗೆ ಚಿನ್ನದ ಪದಕ

ರಾಷ್ಟ್ರೀಯ ಪ್ರಾಕೃತ ವಿದ್ಯಾಪೀಠ(ರಿ), ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಧವಳತೀರ್ಥ, ಶ್ರವಣಬೆಳಗೊಳ ಇವರು ನಡೆಸಿದ ಪ್ರಾಕೃತ ಪರೀಕ್ಷೆಯಲ್ಲಿ ವೈಷ್ಣವಿ ರೋಹಿತಾಶ್ವ ಮೋಟ್ನೂರುರವರಿಗೆ ಚಿನ್ನದ ಪದಕ ಲಭಿಸಿದೆ. ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮಾ.14ರಂದು ಪ್ರದಾನ ಮಾಡಲಾಯಿತು.ವೈಷ್ಣವಿ ಗುತ್ತಿಗಾರು ಗ್ರಾಮದ ವಳಲಂಬೆ...

ಸಂಪಾಜೆ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಡಿಕೆ ಹಳದಿರೋಗ ವಿರುದ್ಧ ಹೋರಾಟ ಸಭೆ 

ಮಲೆನಾಡು ಜನಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಡಿಕೆ ಹಳದಿ ರೋಗ ಹೋರಾಟ ಸಮಿತಿ ಸಭೆ ಮಾ. 13 ರಂದು ಕಲ್ಲುಗುಂಡಿ ಸಮನ್ವಯ ಸಹಕಾರಿ ಸಭಾಭವನದಲ್ಲಿ ಜರಗಿತು.ಅಡಿಕೆ ಹಳದಿ ರೋಗ ಬಾಧಿತ ಸಂತ್ರಸ್ತ ಕೃಷಿಕರನ್ನುದ್ದೇಶಿಸಿ ಮಾತನಾಡಿದ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ಸತತ 40ವರ್ಷಗಳಿಂದ ಹೋರಾಟ ನಡೆಸುತಿದ್ದರು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಗೆ ಭಯವಿಲ್ಲವೆಂದಾದರೆ ನಾವು...

ಸಂಪಾಜೆ : ಕುಡಿಯುವ ನೀರಿನ ಟ್ಯಾಂಕ್ ಶುಚಿತ್ವ

ಎಸ್ಡಿಪಿಐ ಸಂಪಾಜೆ ವತಿಯಿಂದ ಸಂಪಾಜೆ (ದ. ಕ) ಗ್ರಾಮ ಪಂಚಾಯತ್ ಚುನಾವಣೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿದ್ದ ಶರೀಫ್ ಸೆಟ್ಯಡ್ಕ ನೇತೃತ್ವದಲ್ಲಿ ಕಡೆಪಾಲ ಆಲಿಗುಡ್ಡೆಯ ಕುಡಿಯುವ ನೀರಿನ ಟ್ಯಾಂಕ್ ಶುಚಿತ್ವ ಕಾರ್ಯ ಶ್ರಮದಾನದ ಮೂಲಕ ಮಾ.14 ರಂದು ನಡೆಯಿತು.ಈ ಸಂಧರ್ಭದಲ್ಲಿ ಎಸ್ಡಿಪಿಐ ಸಂಪಾಜೆ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್, ಸದಸ್ಯ ಮರ್ಜೂಕ್ ಕಡೆಪಾಲ ಹಾಗೂ ಸ್ಥಳೀಯರಾದ ಅಜಿತ್ ಯಾದವ್,...

ಗೌಡ ಸಂಘದ ವಾರ್ಷಿಕ ಸಮ್ಮಿಲನ – ಅಭಿನಂದನಾ ಕಾರ್ಯಕ್ರಮ, ದಾನಿಗಳ ಭಾವಚಿತ್ರ ಅನಾವರಣ

ಸುಳ್ಯದ ಗೌಡರ ಯುವ ಸೇವಾ ಸಂಘ, ಬೆಳ್ಳಿ ಹಬ್ಬ ಆಚರಣಾ ಸಮಿತಿ, ಗೌಡ ಮಹಿಳಾ ಘಟಕ – ಗೌಡ ತರುಣ ಘಟಕ ಇದರ ಆಶ್ರಯದಲ್ಲಿ ವಾರ್ಷಿಕ ಸಮ್ಮಿಲನ – ಸತ್ಯನಾರಾಯಣ ದೇವರ ಪೂಜೆ, ಅಭಿನಂದನಾ ಕಾರ್ಯಕ್ರಮ ಹಾಗೂ ದಾನಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮ ಮಾ.14 ರಂದು ಸುಳ್ಯದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಆದಿಚುಂಚನಗಿರಿ...

ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಕಾಂಪೌಂಡ್ ಕಾಮಗಾರಿಯ ಗುದ್ದಲಿ ಪೂಜೆ

ಭಾವೈಕ್ಯ ಯುವಕ ಮಂಡಲ (ರಿ.) ಪೆರುವಾಜೆ ಇದರ ಆವರಣಕ್ಕೆ ಕಾಂಪೌಂಡ್ ಮಾಡಲು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ವಿಶೇಷ ಅನುದಾನ ದೊರೆತಿದ್ದು ಇದರ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು (ಮಾ.14) ನಡೆಯಿತು. ಗುದ್ದಲಿ ಪೂಜೆಯನ್ನು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ ಪೆರುವಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ...

ಭಜರಂಗದಳ ಸಂಚಾಲಕರಾಗಿ ಸಂದೀಪ್ ವಳಲಂಬೆ – ಗೋ ರಕ್ಷಾ ಪ್ರಮುಖ್ ಅರವಿಂದ್

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ಸಂಚಾಲಕರಾಗಿ ಸಂದೀಪ್ ಮೊಟ್ಟೆಮನೆ ವಳಲಂಬೆ ಹಾಗೂ ಗೋ ರಕ್ಷಾ ಪ್ರಮುಖ್ ಅರವಿಂದ್ ರವರು ಆಯ್ಕೆಯಾಗಿದ್ದಾರೆ.
error: Content is protected !!