Ad Widget

ಪೆರುವಾಜೆ ಗ್ರಾಮದಲ್ಲಿ ಚಿರತೆ ಓಡಾಟ : ಗ್ರಾಮಸ್ಥರು ಎಚ್ಚರ ವಹಿಸುವಂತೆ ಸೂಚನೆ

ಪೆರುವಾಜೆ ಗ್ರಾಮದ ಅರ್ನಾಡಿ ಹತ್ತಿರ ಚಿರತೆಯೊಂದು ಓಡಾಟ ನಡೆಸಿದ ವಿಚಾರ ತಿಳಿದುಬಂದಿದೆ. ಗ್ರಾಮಸ್ಥರು ಜಾಗರೂಕರಾಗಿದ್ದು ರಾತ್ರಿ ಪ್ರಯಾಣ, ತೋಟಗಳಿಗೆ ರಾತ್ರಿ ನೀರು ಬಿಡುವ ಕೃಷಿಕರು ಎಚ್ಚರ ವಹಿಸುವಂತೆ ಹಾಗೂ ಚಿರತೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಬೆಳ್ಳಾರೆ ಶಾಖೆಯ ಉಪವಲಯಾರಣ್ಯಾಧಿಕಾರಿ ಪ್ರಸಾದ್.ಕೆ.ಜೆ ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ : 9480108532, 9480527590.

ಜ.22 : ಅಜ್ಜಾವರ ಗ್ರಾ.ಪಂ.ನ ವಿಶೇಷ ಗ್ರಾಮಸಭೆ

ಭಾರತ ಸರಕಾರದ ವತಿಯಿಂದ ಗ್ರಾಮೀಣ ವಸತಿಪ್ರದೇಶದ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸ್ವಾಮಿತ್ವ ಯೋಜನೆಯಡಿ ಅಳತೆಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜ.22 ರಂದು ಪೂರ್ವಾಹ್ನ 11.00 ಗಂಟೆಗೆ ಸರಿಯಾಗಿ ಅಜ್ಜಾವರ ಗ್ರಾ.ಪಂ.ನ ರಾಜೀವ ಗಾಂಧಿ ಸೇವಾ ಕೇಂದ್ರ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆಯನ್ನು ಕರೆಯಲಾಗಿದೆ. ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು, ಸ್ತ್ರೀಶಕ್ತಿ,...
Ad Widget
error: Content is protected !!