Ad Widget

ಕಾರ್ತಿಕ್ ದೇವ – ಕಾವ್ಯ ವಿವಾಹ ನಿಶ್ಚಿತಾರ್ಥ

ದೇವಚಳ್ಳ ಗ್ರಾಮದ ದೇವ ಆನಂದ ಬೆಳ್ಚಪ್ಪಾಡ ರವರ ಪುತ್ರ ಸಂಪಾಜೆ ವಲಯ ಅರಣ್ಯ ಇಲಾಖಾ ಸಿಬ್ಬಂದಿ ಕಾರ್ತಿಕ್ ರ ವಿವಾಹ ನಿಶ್ಚಿತಾರ್ಥವು ಎಣ್ಮೂರು ಗ್ರಾಮದ ನಿಂತಿಕಲ್ಲು ನಾರಾಯಣ ಬೆಳ್ಚಪ್ಪಾಡ ರವರ ಪುತ್ರಿ ಪುತ್ರಿ ಕಾವ್ಯರೊಂದಿಗೆ ಜ.3 ರಂದು ವಧುವಿನ ಮನೆಯಲ್ಲಿ ನಡೆಯಿತು.

ಕೆವಿಜಿ ಸುಳ್ಯ ಹಬ್ಬದ ಆಮಂತ್ರಣ ಬಿಡುಗಡೆ – ವಿದ್ಯಾರ್ಥಿಗಳ ಸ್ಪರ್ಧೆಗಳ ಉದ್ಘಾಟನೆ

ಸುಳ್ಯದ ಅಮರ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳ ಉದ್ಘಾಟನೆಯು ಜ 3 ರಂದು ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆಯಿತು.ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಜ.23 ರಂದು ನಡೆಯಲಿರುವ ಕೆ.ವಿ.ಜಿ.ಸುಳ್ಯ ಹಬ್ಬದ ಆಮಂತ್ರಣವನ್ನು ಸಮಿತಿಯ...
Ad Widget

ಪಾಣತ್ತೂರು: ಖಾಸಗಿ ಬಸ್ ಪಲ್ಟಿ – ಮದುವೆಯ ಬೀಗರ ಊಟಕ್ಕೆ ತೆರಳುತ್ತಿದ್ದ ಏಳು ಮಂದಿ ದುರ್ಮರಣ – ಸುಳ್ಯದ ವ್ಯಕ್ತಿ ಮೃತ್ಯು

ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಏಳು ಜನರು ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಹಲವಾರು ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.ಕೇರಳ ಕರ್ನಾಟಕ ಗಡಿಯ ಪಾಣತ್ತೂರು ಸಮೀಪದ ಗಡಿಗುಡ್ಡೆ ಎಂಬಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈಶ್ವರಮಂಗಲದಿಂದ...

ಗುತ್ತಿಗಾರು : ಲಾಸ್ಯ ಕಲಾ ಶಾಲೆಯಲ್ಲಿ ನೃತ್ಯ ತರಬೇತಿ ಆರಂಭ

ಗುತ್ತಿಗಾರಿನ ಲಾಸ್ಯ ಕಲಾ ಶಾಲೆಯಲ್ಲಿ ಜ.3 ರಿಂದ ಪ್ರತಿ ಆದಿತ್ಯವಾರ ನೃತ್ಯ ತರಗತಿಗಳು ಆರಂಭವಾಗಲಿದೆ. ಆಸಕ್ತರು ದೂರವಾಣಿ ಮುಖಾಂತರ (ಮೊ: 94805 30310) ಸಂಪರ್ಕಿಸಬಹುದು ಎಂದು ಶಿಕ್ಷಕಿ ಶ್ರೀಮತಿ ರೇಶ್ಮಾ ಕಡ್ಯ ತಿಳಿಸಿದ್ದಾರೆ.

ನೆಲ್ಲೂರುಕೆಮ್ರಾಜೆ : ಮಂಟಮೆ ಶಿರಾಡಿ ದೇವಸ್ಥಾನದಲ್ಲಿ ಶ್ರಮದಾನ

ನೆಲ್ಲೂರುಕೆಮ್ರಾಜೆ ಗ್ರಾಮದ ಪಂಚಸ್ಥಾಪನೆಗೆ ಒಳಪಟ್ಟ ಮಂಟಮೆ ಶ್ರೀ ಶಿರಾಡಿ ದೇವಸ್ಥಾನ ಇದರ ಪ್ರತಿಷ್ಟ ಕಲಶೋತ್ಸವ ಕಾರ್ಯಕ್ರಮ ಅಂಗವಾಗಿ ನಾರ್ಣಕಜೆ,ದಾಸನಕಜೆ,ಸುಳ್ಳಿ ಭಾಗದ ಭಕ್ತಾಭಿಮಾನಿಗಳ ವತಿಯಿಂದ ಜ.3 ಶ್ರಮದಾನ ನಡೆಯಿತು.ಈ ಶ್ರಮದಾನದಲ್ಲಿ ಜಯಪ್ರಸಾದ್ ಸುಳ್ಳಿ, ಕೃಷ್ಣ ನಾರ್ಣಕಜೆ,ಬಾಬು ದಾಸನಕಜೆ , ಮಾಧವ ದಾಸನಕಜೆ, ಬಾಬು ನಾರ್ಣಕಜೆ, ಪ್ರಭಾಕರ ಸುಳ್ಳಿ, ಪ್ರಶಾಂತ ದಾಸನಕಜೆ, ಪುರುಷೋತ್ತಮ ನಾರ್ಣಕಜೆ, ಕುಶಾಲಪ್ಪ ದಾಸನಕಜೆ, ಶಿವ...
error: Content is protected !!