Ad Widget

ಅಂಗಾರರಿಗೆ ಸಚಿವ ಸಂಪುಟ ಸ್ಥಾನ ಹಿನ್ನೆಲೆ : ಬಾಳಿಲದಲ್ಲಿ ಸಂಭ್ರಮಾಚರಣೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಬಾಳಿಲ - ಮುಪ್ಪೇರ್ಯ ಬಿಜೆಪಿ ಕಾರ್ಯಕರ್ತರು ಬಾಳಿಲದಲ್ಲಿ ಸಂಭ್ರಮಾಚರಣೆ ನಡೆಸಿದರು. ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಪಾಜೆ : ಬಿಜೆಪಿ ಸಂಭ್ರಮಾಚರಣೆ

ಸಂಪಾಜೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ ಆಚರಣೆ ನಡೆಯಿತು.
Ad Widget

ಸುಬ್ರಹ್ಮಣ್ಯ : ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಶಾಸಕ ಅಂಗಾರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಯಲ್ಲಿ ಕುಕ್ಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ನೂತನ ಸಚಿವರಿಗೆ ಜಯಕಾರ ಮೊಳಗಿಸಿದರು

ಅರಂತೋಡು : ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅರಂತೋಡಿನ ಬಿಜೆಪಿ ಕಾರ್ಯಕರ್ತರು ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಂದ್ರ ಮರ್ಕಂಜ, ಪುಷ್ಪಾಧರ ಕೋಡಂಕೇರಿ, ಬಿಜೆಪಿ ಕಾರ್ಯಕರ್ತರದ ರೋಹಿತ್ ಕಲ್ಲುಗದ್ದೆ, ವಿಜಯಕುಮಾರ್ ಶುಂಠಿಯಡ್ಕ, ನವೀನ...

ಸಚಿವರಾದ ಅಂಗಾರ – ಕೊಲ್ಲಮೊಗ್ರದಲ್ಲಿ ಕಾರ್ಯಕರ್ತರ ಸಂಭ್ರಮ

ಸತತ 28 ವರ್ಷಗಳಿಂದ ಶಾಸಕರಾಗಿದ್ದ ಅಂಗಾರರಿಗೆ ಸಚಿವ ಸ್ಥಾನ ಸಿಕ್ಕಿರುವುದು ಕಾರ್ಯಕರ್ತರಿಗೆ ಸಂಭ್ರಮ ತಂದುಕೊಟ್ಟಿದೆ. ಕೊಲ್ಲಮೊಗ್ರ ಪೇಟೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಂಹಿ ಹಂಚಿ ಸಂಭ್ರಮಾಚರಿಸಿದರು. ಈ ವೇಳೆ ತಾ.ಪಂ. ಹಾಗೂ ಗ್ರಾ.ಪಂ ಸದಸ್ಯ ಉದಯ ಕೊಪ್ಪಡ್ಕ, ಬಿ.ಜೆ.ಪಿ ಬೂತ್ ಕಾರ್ಯದರ್ಶಿ ಉದಯ ಶಿವಾಲ ಹಾಗೂ ಮನೋಜ್ ಪೆರ್ನಾಜೆ ಶೇಖರಪ್ಪ ಬೆಂಡೋಡಿ ಮತ್ತು ಕಾರ್ಯಕರ್ತರಿದ್ದರು.

ಸಚಿವರಾಗಿ ಅಂಗಾರ ಪ್ರಮಾಣವಚನ – ಸುಳ್ಯದಲ್ಲಿ ಸಂಭ್ರಮಾಚರಣೆ

ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು ಸುಳ್ಯ ಶಾಸಕ ಅಂಗಾರರವರು ಸಚಿವವಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಅಪರಾಹ್ನ 4 ಗಂಟೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜ್ಯಪಾಲರು ಪ್ರತಿಜ್ಞಾವಿಧಿ ಭೋದಿಸಿದರು. ದೇವರ ಹೆಸರಿನಲ್ಲಿ ಅಂಗಾರರವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಅರ್ಹವಾಗಿದೆ ಸಚಿವ ಸ್ಥಾನ ಒದಗಿ ಬಂದಿರುವುದು ಸುಳ್ಯದ ಬಿಜೆಪಿ...

ಅಂಗಾರ ಸಚಿವರಾಗುತ್ತಿರುವ ಖುಷಿಯಲ್ಲಿ ಆಲೆಟ್ಟಿ ಬಿಜೆಪಿ ಸಂಭ್ರಮಾಚರಣೆ

ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಸೋಲಿಲ್ಲದ ಸರದಾರ ರಾಗಿರುವ ಎಸ್.ಅಂಗಾರ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಪ್ರಪ್ರಥಮ ಬಾರಿಗೆ ನೂತನ ಸಚಿವರಾಗಿ ಇಂದು ಅಪರಾಹ್ನ 3.50 ಕ್ಕೆ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಆಲೆಟ್ಟಿ ಬಿಜೆಪಿ ವತಿಯಿಂದ ಆಲೆಟ್ಟಿಯಲ್ಲಿ ಸಂಭ್ರಮಾಚರಣೆಯನ್ನು 6:00 ಗಂಟೆಗೆ ನಡೆಸಲು...

ಅಂಗಾರ ನಮ್ಮ ಬಂಗಾರ : ಸಚಿವರಾಗುತ್ತಿರುವ ಅಂಗಾರರಿಗೆ ಮುಖಂಡರಿಂದ ಅಭಿನಂದನೆ

ಸುಳ್ಯದಲ್ಲಿ ಆರು ಬಾರಿ ಶಾಸಕರಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿ ಇದೀಗ ನೂತನ ಸಚಿವರಾಗುತ್ತಿರುವ ಶಾಸಕ ಅಂಗಾರರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪಕ್ಷದ ಕೆಲ ಪ್ರಮುಖರು,ಅಭಿಮಾನಿಗಳು ಇಂದು ಬೆಂಗಳೂರಿಗೆ ತಲುಪಿದ್ದು ನೂತನ ಸಚಿವರಾಗಲಿರುವ ಅಂಗಾರರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ರೈತ ಮೋರ್ಛಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್...

ರಾಜ್ಯ ಸಚಿವ ಸಂಪುಟ ವಿಸ್ತರಣೆ – ಶಾಸಕ ಅಂಗಾರರಿಗೆ ಒಲಿಯಲಿದೆ ಮುಜರಾಯಿ ಖಾತೆ!

ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಲಿದ್ದು ಮಂತ್ರಿಗಿರಿ ಸಿಗುವ ಲೀಸ್ಟ್ ನಲ್ಲಿ ಸುಳ್ಯ ಶಾಸಕ ಅಂಗಾರರ ಹೆಸರು ಮುಂಚೂಣಿಯಲ್ಲಿದ್ದು ಅಧಿಕೃತ ಘೋಷಣೆ ಆಗಬೇಕಿದೆ.‌ ಇಂದು ಅಪರಾಹ್ನ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಮುಜರಾಯಿ ಖಾತೆ ನೀಡುತ್ತಾರೆನ್ನುವ ಮಾತುಗಳು ಕೇಳಿ ಬರುತ್ತಿದೆ.
error: Content is protected !!