Ad Widget

ಸುಬ್ರಹ್ಮಣ್ಯ : ಜೇಸಿರತ್ನ ಪುರಸ್ಕಾರಕ್ಕೆ ಭಾಜನರಾದ ಜೇಸಿ ರವಿ ಕಕ್ಕೆಪದವು

ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020 ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿ ನೂರಾರು ಜನರಿಗೆ ಅನ್ನದಾತರಾಗಿರುವ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು ಕಲಿಕಾ ಸಾಮಾಗ್ರಿಗಳನ್ನು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿ ನೀಡುವುದು, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹಲವು...

ಮರ್ಕಂಜ : ಮರವೇರಿ ಕುಳಿತ ಅಪರಿಚಿತ ವ್ಯಕ್ತಿ

ಮರ್ಕಂಜದ ದೊಡ್ಡಿಹಿತ್ಲು ಸಮೀಪ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮರವೇರಿ ಕುಳಿತ ಘಟನೆ ಇಂದು ನಡೆದಿದೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಯಾರು, ಮರವೇರಲು ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ದಳವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
Ad Widget

ಧನ್ಯಶ್ರೀ – ಸನತ್ ಕುಮಾರ್ ಶುಭವಿವಾಹ

ಅಮರ ಮುಡ್ನೂರು ಗ್ರಾಮದ ಪೈಲಾರು ಪಡ್ಪುಮನೆ ಶ್ರೀಮತಿ ಕುಸುಮ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರಿ ಧನ್ಯಶ್ರೀ ಯ ವಿವಾಹವು ಪುತ್ತೂರು ತಾ. ಬಲ್ನಾಡು ಗ್ರಾಮದ ಕೋಡಿಯಡ್ಕ ಗಂಗಾಧರ ಗೌಡರ ಪುತ್ರ ಸನತ್ ಕುಮಾರ್ ರೊಂದಿಗೆ ಜ.3 ರಂದು ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರ ಕಾರ್ಯಕ್ರಮ ವಧುವಿನ ಮನೆಯಲ್ಲಿ ನಡೆಯಿತು.
error: Content is protected !!