ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಆಪ್ತ ಸಹಾಯಕರಾಗಿ ಅವಿನಾಶ್ ಬಿ.ಆರ್. ನೇಮಕ.

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಇವರ ಆಪ್ತ ಸಹಾಯಕರಾಗಿ ಅವಿನಾಶ್ ಬಿ.ಆರ್. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಒಳಮೊಗ್ರ ಗ್ರಾಮ ಪಂಚಾಯತ್, ಪುತ್ತೂರು ತಾಲ್ಲೂಕು, ಇವರನ್ನು ಮಾನ್ಯ ಶಾಸಕರ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿ ಸಂದೀಪ್ ವಿ. ಬೆಟ್‌ಸೂರ್ ಅಧೀನ ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಸಚಿವಾಲಯ ಇವರು ಆದೇಶದಲ್ಲಿ ತಿಳಿಸಿದ್ದಾರೆ.

ನ.17-18 ರಂದು ಸುಳ್ಯದಲ್ಲಿ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ 8 ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾಟ- ಪೋಸ್ಟರ್ ಬಿಡುಗಡೆ.

ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ನ.17 ಮತ್ತು 18ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಪ್ರಭು ಮೈದಾನದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ೧೦ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಪೋಸ್ಟರ್...
Ad Widget

ಸುಳ್ಯ ತೋಟಗಾರಿಕಾ ಇಲಾಖೆ ಹಿರಿಯ ಸಹಾಯ ನಿರ್ದೇಶಕ ರಮೇಶ್ ವರ್ಗಾವಣೆ.

ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯ‌ ನಿರ್ದೇಶಕರಾಗಿದ್ದ ರಮೇಶ್ ರವರಿಗೆ ವರ್ಗಾವಣೆಯಾಗಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿರುವ ಶ್ರೀಮತಿ ಸುಹಾನರಿಗೆ ಸುಳ್ಯದ ಪ್ರಭಾರವನ್ನು‌ ವಹಿಸಲಾಗಿದೆ. ರಮೇಶ್ ರವರು‌ ನಾಲ್ಕು ತಿಂಗಳ ಹಿಂದೆ ಸುಳ್ಯಕ್ಕೆ ಆಗಮಿಸಿದ್ದರು. ಇದೀಗ ಅವರು ಬಳ್ಳಾರಿಯ ಹೊಸಪೇಟೆ ತಾಲೂಕಿಗೆ ನಿಯುಕ್ತಿಯಾಗಿದ್ದಾರೆ.

ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವದ ಪೂರ್ವ ಭಾವಿಯಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಗುದ್ದಲಿ ಪೂಜೆ ನೆರವೇರಿಸಿ, ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ದಿನಾಂಕ 13 ಸೆಪ್ಟೆಂಬರ್ 2023ರಂದು ಚಾಲನೆಯನ್ನು ನೀಡಿದರು. ಪ್ರತಿಯೊಬ್ಬರಿಗೂ ತಂದೆ ತಾಯಿಯ ಋಣ, ವಿದ್ಯಾ ಬುದ್ಧಿಯನ್ನು ಕಲಿಸಿದ ಗುರುಗಳ ಋಣ...

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಗಾಣಿಗ ಸಮ್ಮಿಲನ , ಕ್ರೀಡೋತ್ಸವ.

ಪಾಟಾಳಿಯಾನೆ ಗಾಣಿಗ ಸಮಾಜ ಸೇವ ಸಂಘ (ರಿ) ಸುಳ್ಯ ಇದರ ವಾರ್ಷಿಕ ಮಹಾಸಭೆ ಮತ್ತು ಗಾಣಿಗ ಸಮ್ಮಿಲನ ಕಾರ್ಯಕ್ರಮವು ಅ-೧ರಂದು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ತಿಳಿಸಿದರು. ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾನಾಡುತ್ತಾ ಕಾರ್ಯಕ್ರಮಗಳ ವಿವರವನ್ನು ನೀಡಿದರು. ವಾರ್ಷಿಕ ಮಹಾಸಭೆ ಆರೋಗ್ಯನಿಧಿ ವಿತರಣೆಪ್ರತಿಭಾ...

ಗುತ್ತಿಗಾರು : ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ – ಬಾಲಕರ ವಾಲಿಬಾಲ್ ತಂಡ ರನ್ನರ್

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಸೆ. 13ರಂದು ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕಿಯರ ತಂಡವು ಫೈನಲ್ ಪಂದ್ಯದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡವನ್ನು...

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಾವಿತ್ರಿ ಕಣೆಮರಡ್ಕ ಆಯ್ಕೆ.

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಅ:೧೦ ರಂದು ಹಾವೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಾವಿತ್ರಿ ಕಣೆಮರಡ್ಕ ಯಾಗಿದ್ದಾರೆ ನೂತನ ಸಮಿತಿ ಅಧ್ಯಕ್ಷರಾಗಿ ಸತ್ಯನಾರಾಯಣ್ ನೇಮಕವಾಗಿದ್ದಾರೆ ಈ ಪ್ರಕ್ರಿಯೆಯು ಚುನಾವಣಾ ಮುಖೇನ ನಡೆದಿದೆ ಎಂದು ತಿಳಿದುಬಂದಿದೆ.

ಕಾಂತಮಂಗಲ : ಗಂಡನೊಟ್ಟಿಗೆ ಜಗಳವಾಡಿ ನದಿಗೆ ಹಾರಲು ಹೋದ ಮಹಿಳೆ –  ಸೇತುವೆ ಬಳಿ ಹೈಡ್ರಾಮ

ಗಂಡನೊಟ್ಟಿಗೆ ಜಗಳವಾಡಿ ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆ ನದಿಗೆ ಹಾರಲು ಹೋಗಿ ರಾದ್ಧಾಂತ ಮಾಡಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಸಂಬಂಧಿಕರು ನೀರಿಗೆ ಹಾರಿದ್ದಾರೆ ಎಂದು ಹೇಳಿದ ಮಹಿಳೆಯೋರ್ವರು ಕಾಂತಮಂಗಲ  ಸೇತುವೆ ಬಳಿ  ರೋಧಿಸುತ್ತಿರುವುದನ್ನು  ಕಂಡು ಸ್ಥಳೀಯರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಫೋನ್ ಮಾಡಿ ತಿಳಿಸಿದ್ದರು. ರಾದ್ಧಾಂತ ಎಬ್ಬಿಸಿದ ಮಹಿಳೆಯನ್ನು ಸರಿಯಾಗಿ ವಿಚಾರಿಸಿದಾಗ ಜಗಳವಾಗಿರುವ ವಿಷಯ ತಿಳಿದುಬಂತು....

ನಕಲಿಗಳಿಂದ ಸುಳ್ಯ ಬಿಜೆಪಿಗೆ ನೈತಿಕತೆಯ ಪಾಠ ಅಗತ್ಯವಿಲ್ಲ ಲ- ಬಿಜೆಪಿ ಮಂಡಲ.

ರಾಜ್ಯದಲ್ಲಿ ಎಸ್ಸಿ,ಎಸ್‌ಟಿ ಸಮುದಾಯಕ್ಕೆ ಮೀಸಲಿರಿಸಿದ್ದ 11,000 ಕೋಟಿ ರೂಪಾಯಿ ಅನುದಾನವನ್ನು ಕಸಿದು ರಾಜ್ಯ ಸರಕಾರ ತನ್ನ ಬಿಟ್ಟಿಭಾಗ್ಯದ ಕೂಪಕ್ಕೆ ತುಂಬಿಸಿದೆ.ರಾಜ್ಯದ ಬಡವರು, ಶೋಷಿತರಿಗೆ ಮೀಸಲಿರಿಸಿದ ಹಣ ಲೂಟಿ ಮಾಡಿದ ಲಜ್ಜೆಗಟ್ಟ ಕಾಂಗ್ರೆಸ್ಸಿನ ಬಡವರ ಕಾಳಜಿಯ ಡಂಬಾಚಾರ ಬಯಲಾಗಿದೆ, ಮೊದಲು ನಿಮ್ಮ ಕಾಂಗ್ರೆಸ್ ನ ಬಡಾಯಿ ರಾಜ್ಯ ನಾಯಕರಿಗೆ ಬಡವರ ಕಾಳಜಿ, ಸಾಮಾಜಿಕ ಉದ್ದಾರದ ಪಾಠ ಮಾಡಿ...

ಗೂನಡ್ಕದ ವರದರಾಜ್ ಮನೆಗೆ ವಿ ಹೆಚ್ ಪಿ ಭಜರಂಗದಳ ಮುಖಂಡರ ನಿಯೋಗ ಭೇಟಿ, ಗೋ ಕಳ್ಳರನ್ನು ಪತ್ತೆ ಹಚ್ಚಲು ಆಗ್ರಹ.

ಗೂನಡ್ಕದಲ್ಲಿ ನಿನ್ನೆ ತಡರಾತ್ರಿ ಗೋಕಳ್ಳತನವಾದ ಗೂನಡ್ಕದ ವರದರಾಜ್ ಸಂಕೇಶ್ ರವರ ಮನೆಗೆ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ, ಬಜರಂಗದಳ ತಾಲೂಕು ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿಯ ಉಪಾಧ್ಯಕ್ಷ ರಜತ್ ಅಡ್ಕಾರ್ , ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲತ್ತಡ್ಕ. ವಿಶ್ವ ಹಿಂದೂ...
Loading posts...

All posts loaded

No more posts

error: Content is protected !!