ಎಲಿಮಲೆ :  ಬಸ್ ನಿಲ್ದಾಣದ ಒಳಗೆ ಕಸದ ರಾಶಿಗೆ ಬೆಂಕಿ ಹಾಕಿ ಅನಾಗರಿಕತೆ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎತ್ತಿನಹೊಳೆ ಬಸ್ ನಿಲ್ದಾಣದಲ್ಲಿ ಕಸದ ರಾಶಿ ತುಂಬಿದ್ದು ಕಾಡುಬಳ್ಳಿ ಹಬ್ಬಿದೆ. ಅಲ್ಲಿಯೇ ಒಂದು ಮೂಲೆಯಲ್ಲಿ ಕಸದ ರಾಶಿಗೆ ಬೆಂಕಿ ಹಾಕಿದ್ದು  ಅನಾಗರಿಕತೆ ಎದ್ದು ಕಾಣುತ್ತಿದೆ. ಬಸ್ ನಿಲ್ದಾಣದ ಎದುರು ಭಾಗದಲ್ಲಿ ಇಂಡಸ್ಟ್ರಿ ಕಾರ್ಮಿಕರು ಸ್ವಚ್ಚತೆ ಮಾಡಿ ಸಾಮಾಜಿಕ ಕಳಕಳಿ ತೋರುತ್ತಾರೆ. ಬಸ್ ನಿಲ್ದಾಣದ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯತ್...

ಪಂಚ ಗ್ಯಾರಂಟಿ ಯೋಜನೆಯಿಂದ ಕಂಗಾಲಾದ ಬಿಜೆಪಿ – ಸುಳ್ಯದಲ್ಲಿ ಆಗಿರುವ ಕಾಮಗಾರಿ ಹರೀಶ್ ಕಂಜಿಪಿಲಿಯವರು ಮನೆಯ ಅಡಿಕೆ ಮಾರಿ ಮಾಡಿದ್ದಾರೆಯೇ ? –  ಪತ್ರಿಕಾ ಹೇಳಿಕೆ ನೀಡಿದ ಕಾಂಗ್ರೆಸ್ 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಬಲ್ ಇಂಜಿನ್ ಸರಕಾರದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಬಿಜೆಪಿಯವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಮುಂದಿನ...
Ad Widget

ಅರಂತೋಡು : ಪಂಚಾಯತ್ ಮುಂಭಾಗ ಚರಂಡಿಯ ಸ್ಲಾಬ್ ಕುಸಿತ – ಪಾದಚಾರಿಗಳಿಗೆ ಸಂಕಷ್ಟ

ಅರಂತೋಡು ಗ್ರಾಮ ಪಂಚಾಯತ್ ನಿಂದ ಕೂಗಳತೆ ದೂರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಪುಟ್ ಪಾತ್ ಮಲ್ಲಿಕಾ ಹೋಟೆಲ್‌ ಮುಂಬಾಗದಲ್ಲಿ ಕುಸಿತಗೊಂಡಿದ್ದು, ಇಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರಡಯಾಗುತ್ತಿದೆ. ಹಲವು ಸಮಯಗಳಿಂದ ಮುರಿದು ಬಿದ್ದಿರುವ ಸ್ಲಾಬ್ ಅನ್ನು ಇನ್ನಾದರೂ ಎಚ್ಚೆತ್ತು ಗ್ರಾಮ ಪಂಚಾಯತ್ ಮತ್ತು ಹೆದ್ದಾರಿ ಪ್ರಾಧಿಕಾರವು ಸರಿ ಪಡಿಸುವುದೇ ಎಂದು ಕಾದು ನೋಡಬೇಕಿದೆ.

ಸುಳ್ಯ ಪೋಲೀಸ್ ಠಾಣೆಯಲ್ಲಿ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಸಮಿತಿಗಳ ಸಭೆ – ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ ಠಾಣಾಧಿಕಾರಿ

ಸುಳ್ಯದಲ್ಲಿ ಶನಿವಾರ ನಡೆಯಲಿರುವ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಆಚರಣೆ ಹಿನ್ನಲೆಯಲ್ಲಿ ಸಮಿತಿಗಳ ಪ್ರಮುಖರ ಸಭೆಯನ್ನು ಸುಳ್ಯ ಆರಕ್ಷಕ ಠಾಣೆ ಸುಳ್ಯದಲ್ಲಿ ಜರುಗಿತು‌. ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರಜೋಗಿ ,ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಈರಯ್ಯ ದಂತೂರು ನೇತೃತ್ವದಲ್ಲಿ ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು...

ಲೇಖನ : ಜೀವನದಲ್ಲಿ “ನಂಬಿಕೆ” ತುಂಬಾ ಅಮೂಲ್ಯವಾದದ್ದು…

ಜೀವನದಲ್ಲಿ ಕೆಲವೊಮ್ಮೆ ನಾವು ಎಲ್ಲರ ಮೇಲೆಯೂ ಕಣ್ಣುಮುಚ್ಚಿ ನಂಬಿಕೆ ಇಡುತ್ತಿರುತ್ತೇವೆ. ನಾವು ನಂಬಿಕೆ ಇಡುವ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಅರ್ಹರಾ…? ಅಂತ ನಾವು ಯೋಚಿಸುವುದೇ ಇಲ್ಲ. ಆದರೆ ಯಾವತ್ತಾದರೂ ಒಂದು ದಿನ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಮೋಸ ಮಾಡಿ ಹೊರಟುಹೋದರೆ ನಂಬಿ ಮೋಸ ಹೋದ ನಾವು ದುಃಖಿಸುತ್ತಾ ಕೂರಬೇಕಾಗುತ್ತದೆ. ಅದಕ್ಕಾಗಿಯೇ ಹಿರಿಯರು ಒಂದು...

ಕುಕ್ಕೆ ದೇವಳಕ್ಕೆ ಬೃಹತ್ ಗಾತ್ರದ ಫ್ಯಾನುಗಳ ಕೊಡುಗೆ

ಕುಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎಸಿಪಿ ಕಂಪನಿಯ ಎರಡು ಬೃಹದಾಕಾರದ ಸೀಲಿಂಗ್ ಫ್ಯಾನ್(HVLS) ಗಳನ್ನು ಕೊಡುಗೆಯಾಗಿ ಶ್ರೀ ದೇವಳಕ್ಕೆ ಗುರುವಾರ ನೀಡಿರುತ್ತಾರೆ. ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ...

ಸುಬ್ರಹ್ಮಣ್ಯ : ಕ್ವಾಲಿಸ್ ಕಾರು ಬೆಂಕಿಗೆ ಆಹುತಿ

ಕುಕ್ಕೆ ಸುಬ್ರಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲೆಯ ಸಮೀಪ ಕ್ವಾಲಿಸ್ ಕಾರು ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗೆ ಆಹುತಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿದ್ದ ಕುಟುಂಬ ಒಂದು ಆದಿ ಸುಬ್ರಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಯ ಮುಂಭಾಗ ಕಾರು ನಿಲ್ಲಿಸಿದ್ದರು. ಕಾರಿನಲ್ಲಿ ಆಚಾನಕ್ಕಾಗಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಕಾರಿನ ಸಂಪೂರ್ಣ...

ಗುತ್ತಿಗಾರು : ಅಮರ ಸಂಜೀವಿನಿ ಒಕ್ಕೂಟದ ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಸಂಘದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಅಮರ ಸಂಜೀವಿನಿ ಒಕ್ಕೂಟದ ವತಿಯಿಂದ ಶಂಖಪಾಲ ಸ್ತ್ರೀ ಶಕ್ತಿ, ಶಂಖಶ್ರೀ ಸ್ತ್ರೀ ಶಕ್ತಿ, ಶ್ರೀ ದುರ್ಗಾ ಸ್ತ್ರೀ ಶಕ್ತಿ, ಯಶಸ್ವಿ ಸಂಜೀವಿನಿ, ಬಾಂಧವ್ಯ ಸಂಜೀವಿನಿ, ಚಿಗುರು ಸಂಜೀವಿನಿ ಸಂಘದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಮರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ, ಎಲ್.ಸಿ.ಆರ್.ಪಿ ಗಳು, ಪಶುಸಖಿ, ಕೃಷಿ ಸಖಿ...

ಅಜ್ಜಾವರದಲ್ಲಿ ಚಿರತೆ ಸಾವು ಪ್ರಕರಣ, ಆರೋಪಿತರಿಗೆ ಷರತ್ತುಬದ್ಧ ಜಾಮೀನು ಮಂಜೂರು.

ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಚಿರತೆ ಸಾವು ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿತರಿಗೆ ಮಂಗಳೂರಿನ 6 ನೇ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ದೊರಕಿದೆ. ಪಡ್ಡಂಬೈಲಿನಲ್ಲಿ ಆ.29 ರಂದು‌ ಉರುಳಿಗೆ ಚಿರತೆಯೊಂದು ಬಿದ್ದು ಮೃತಪಟ್ಟಿತ್ತು. ಉರುಳಿಟ್ಟು ಚಿರತೆ ಸಾವಿಗೆ ಕಾರಣರಾದರೆಂಬ ಆರೋಪದಲ್ಲಿ ಸ್ಥಳ ಮಾಲಿಕರಾದ ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂಬುವವರ ವಿರುದ್ದ ಅರಣ್ಯಾಧಿಕಾರಿಗಳು...

ಸೆ‌.15 ರಂದು ಸುಬ್ರಹ್ಮಣ್ಯದ ಕೆ‌.ಎಸ್ .ಎಸ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬ್ಲಡ್ ಬ್ಯಾಂಕ್ ಮಂಗಳೂರು ಬೃಹತ್ ರಕ್ತದಾನ ಶಿಭಿರ ಸೆ‌.15 ರಂದು ಕೆ‌.ಎಸ್ .ಎಸ್ ಕಾಲೇಜಿನಲ್ಲಿ ನಡೆಯಲಿದೆ. ಸಮಾರಂಭವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ...
Loading posts...

All posts loaded

No more posts

error: Content is protected !!