ದಿ.ತೇಜಾವತಿ ಕುಶಾಲಪ್ಪ ಪಟೇಲ್ ಕೇವಳ ಅವರಿಗೆ ನುಡಿ ನಮನ ಕಾರ್ಯಕ್ರಮ

ಮಡಪ್ಪಾಡಿ ಗ್ರಾಮದ ಕೇವಳ ಮನೆತನದ ದಿ.ಕುಶಾಲಪ್ಪ ಪಟೇಲ್ ಅವರ ಪತ್ನಿ ಶ್ರೀಮತಿ ತೇಜಾವತಿ ಕುಶಾಲಪ್ಪ ಪಟೇಲ್ ಅವರ ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಸ.17ರಂದು ಪಟೇಲ್ ಮನೆ ಕೇವಳದಲ್ಲಿ ನಡೆಯಿತು.ತೇಜಾವತಿಯವರ ಆದರ್ಶ ಬಾಳ್ವೆಯ ಕುರಿತು ಕುಟುಂಬದವರಾದ ಸೋಮಶೇಖರ ಕೇವಳ  ಹಾಗೂ ಮೃತರ ಪುತ್ರ ಸೈನಿಕ್ ಸ್ಕೂಲ್ ವಿಜಯಪುರದ ನಿವೃತ್ತ ಉಪನ್ಯಾಸಕ ದಾಮೋದರ ಕೇವಳ ತಮ್ಮ...

ಮುರುಳ್ಯ : ರಿಕ್ಷಾ ತಂಗುದಾಣ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರ ವಿಶೇಷ ಅನುದಾನದಲ್ಲಿ ಮುರುಳ್ಯ ಶಾಂತಿನಗರದಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣದ ಉದ್ಘಾಟನೆ ಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ವೇದಿಕೆಯಲ್ಲಿ ವನಿತಾ ಸುವರ್ಣ, ಜಾನಕಿ ಮುರುಳ್ಯ, ಡಾ. ಮಂಜುನಾಥ್, ವಸಂತ ನಡುಬೈಲು, ರವಿ ತೋಟ ಹಾಗೂ ರಿಕ್ಷಾ ಚಾಲಕರು, ಮಾಲಕರು, ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
Ad Widget

ಪೆರಾಜೆ ಸೊಸೈಟಿಗೆ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ನಿಂದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 2022-23ನೇ ಸಾಲಿನಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭಾಜನವಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2022-23ನೇ ಸಾಲಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಕೊಡಂದೇರ ಗಣಪತಿಯವರು...

ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆ ಅತ್ಯಗತ್ಯ : ಶ್ರೀವತ್ಸ ಬೆಂಗಳೂರು

ಸುಬ್ರಹ್ಮಣ್ಯ: ನಮ್ಮ ದೇಶದ ಗ್ರಾಮೀಣ ಮಣ್ಣಿನ ಕ್ರೀಡೆಯಾದ ಕಬ್ಬಡಿಯು ಯುವ ಜನಾಂಗಕ್ಕೆ ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆಯ ಪಾತ್ರ ಅನನ್ಯ.ಆದುದರಿಂದ ಯುವ ವಿದ್ಯಾರ್ಥಿಗಳು ಕಬಡ್ಡಿಯತ್ತ ಹೆಚ್ಚು ಆಕರ್ಷಿತರಾಗಬೇಕು.ಆಧುನಿಕ ಯುಗದಲ್ಲಿ ಮೊಬೈಲ್‌ನ ಗೀಳನ್ನು ಬಿಟ್ಟು ಕ್ರೀಡಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತರಾದರೆ ಬದುಕು ಉತ್ಕೃಷ್ಠವಾಗುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ...

ಅದೃಷ್ಟ ಕೂಪನ್ ಹೆಸರಲ್ಲಿ ಹಿಂದೂ ಹಬ್ಬಗಳ ಬಗ್ಗೆ ಅವಹೇಳನ – ವಿಹಿಂಪ ಖಂಡನೆ

ಗಣೇಶ ಜಯಂತಿ ಪ್ರಯುಕ್ತ ಎಂಬ ತಲೆಬರಹದಲ್ಲಿ ಅದೃಷ್ಟ ಕೂಪನ್ ಮಾರಾಟ ಮಾಡಿ  ಪ್ರಥಮ ಬಹುಮಾನ ಬ್ಲಾಕ್ ಆಂಡ್ ವೈಟ್ ದ್ವಿತೀಯ ಬಹುಮಾನ ಯು.ಬಿ. ಬಿಯರ್ ಒಂದು ಕೇಸ್  ಎಂದು ಬಹುಮಾನ ಘೋಷಣೆ ಮಾ ಮಾರಾಟ ಆಗುತ್ತಿರುವ  ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ರೀತಿ ಹಿಂದೂ...

ಮೀಸಲು ಅರಣ್ಯದಿಂದ ಮರ ಸಾಗಟ ಪಿಕಪ್ ಸಹಿತ ಓರ್ವ ವಶಕ್ಕೆ.

ಸುಳ್ಯ ತಾಲೂಕಿನ ಆಲೇಟ್ಟಿ ಗ್ರಾಮದ ಕುಡೆಂಬಿ ಹಾಸ್ಪರೆ ಭಾಗದಲ್ಲಿ ಮೀಸಲು ಅರಣ್ಯದಿಂದ ಮರವನ್ನು ಕಡಿದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾತಿ ಪಡೆದ ಅರಣ್ಯ ಇಲಾಖೆ ಈಗ ಪೆರಾಜೆ ಮೂಲದ ಪಿಕಪ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಸ್ಥಳ ಮಹಜರು ಮಾಡಲು ತೆರಳಿರುವುದಾಗಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ದುಗಲಡ್ಕ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಅರಣ್ ಕುಮಾರ್ ಪುತ್ತಿಲ ಭಾಗಿ.

ದುಗಲಡ್ಕ ಅಯ್ಯಪ್ಪ ಮಂದಿರದಲ್ಲಿ ಮುಂಜಾನೆ ಪ್ರತಿಷ್ಠಾಪಿಸಲಾದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಭಾಗಿಯಾದರು.ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಇದೀಗ ಅವರು ಮತನಾಡುತ್ತಿದ್ದು ಒಗ್ಗಟ್ಟಿನ ಮಂತ್ರದ ಕುರಿತಾಗಿ ಅವರು ಹೇಳಿದರು. ಅಲ್ಲದೇ ಇಂದು ನಾವು ಗಣೇಶೋತ್ಸವ ಆಚರಣೆ ಮಾಡಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಎದುರಾಗಿದೆ ಅಲ್ಲದೇ ಎಲ್ಲೆ ಹಿಂದು ಕಾರ್ಯಕರ್ತರು ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ನೀಡದೇ...

ಸುಳ್ಯದ ಹಳೆಗೇಟಿನಲ್ಲಿ ರಿಕ್ಷಾ ಚಾಲಕ ಮತ್ತು ಈರ್ವರು ಪ್ರಯಾಣಿಕರಿಂದ ಹಲ್ಲೆ, ದರೋಡೆ – ಪ್ರಕರಣ ದಾಖಲು.

ಸುಳ್ಯ ಹಳೆಗೇಟು ಸಮೀಪ ಮಡೆಕೇರಿ ಮೂಲದ ಕಾರುಗುಂದ ಗ್ರಾಮ ನಿವಾಸಿ ದರ್ಶನ್‌ ‌ಎಂಬುವರ ಹಣ ಮತ್ತು ತಮ್ಮ ಅಗತ್ಯ ಧಾಖಲೆಗಳುಳ್ಳ ಬ್ಯಾಗನ್ನು ದರೋಡೆಗೈದ ಘಟನೆ ವರದಿಯಾಗಿದೆ. 18.09.2023ರಂದು ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದ ದರ್ಶನ್ ರಾತ್ರಿ ಸುಮಾರು 11:15 ಗಂಟೆಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಹಳೆಗೇಟಿನಲ್ಲಿ ಆಟೋರಿಕ್ಷಾ ವೊಂದನ್ನು...

ಕಲ್ಮಡ್ಕ : 45 ನೇ ವರ್ಷದ ಗಣೇಶೋತ್ಸವ

ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 45ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ ವೇದಮೂರ್ತಿ ಶಿವರಂಜನ್ ರವರಿಂದ ಗಣಪತಿ ಪ್ರತಿಷ್ಟಾಪನೆ ನಡೆದು ಪೂಜ ಕಾರ್ಯಕ್ರಮ ನಡೆಯಿತು . ಮಧ್ಯಾಹ್ನ ಪ್ರಸಾದ ವಿತರಣೆ ನಡೆದು ಭಕ್ತಾದಿಗಳಿಗೆ ಭೋಜನ ವಿತರಿಸಲಾಯಿತು . ಇದರ ನಡುವೆ ಶ್ರೀ ರಾಮ ಭಜನಾ ಮಂಡಳಿ ಕಲ್ಮಡ್ಕ ಇವರಿಂದ ಸೊಗಸಾದ ಭಜನಾ ಕಾರ್ಯಕ್ರಮ...

ವಳಲಂಬೆ : ವಿಜ್ರಭಿಸಿದ ಗಣೇಶೋತ್ಸವ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಸೆ.19 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ನಡೆಯಿತು. ಗಣಪತಿ ಪ್ರತಿಷ್ಠೆ, ಬಳಿಕ ಸಾಮೂಹಿಕ ಗಣಪತಿ ಹೋಮ ನಡೆದು, ಬೆಳಿಗ್ಗೆ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೇಶಭಕ್ತಿಗೀತೆ, ಭಕ್ತಿಗೀತೆ,...
Loading posts...

All posts loaded

No more posts

error: Content is protected !!