- Friday
- July 31st, 2026
ಶಾಲಾ ಶಿಕ್ಷಣ ಇಲಾಖೆ ಸುಳ್ಯ ದ.ಕ.ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಆರಂತೋಡು ಶಾಲೆಯ ಮೈದಾನದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಹರೀಶ್ ಉಳುವಾರು ವಹಿಸಿದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ...
ಅರಂತೋಡು ಗ್ರಾಮ ಪಂಚಾಯತ್ ಗೆ ಸ್ವಚ್ಛತೆಗೆ ಜಿಲ್ಲಾ ರಾಜ್ಯ ಪ್ರಶಸ್ತಿ ಲಭಿಸಿದೆ ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾ ರ್ಥಿ ಗಳಿಗೆ ಕರೆ ನೀಡಿದರು.ಇವತ್ತಿನ ದಿನಗಳಲ್ಲಿ ಮಕ್ಕಳು ಚಾಕಲೇಟ್ ತಿಂದು ಸಿಪ್ಪೆಯನ್ನು ಅಲ್ಲಿಯೇ ಬಿಸಾಡುವ ಬದಲು ಅದನ್ನು ಸುರಕ್ಷಿತ ಕಸದ ಡಬ್ಬಗಳಿಗೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕೆಂದು ಹೇಳಿದರು.ಅವರು ಆರಂತೋಡು ಪ್ರಾಥಮಿಕ ಶಾಲೆ...
ಸುಳ್ಯ : 110ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯನ್ನು ವಾರದೊಳಗೆ ಪ್ರಾರಂಭಿಸದೇ ಇದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ತಿಳಿಸಿದೆ. ಬಿಜೆಪಿಯ ಹೇಳಿಕೆಯನ್ನು ನೋಡಿದಾಗ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ. 110ಕೆ.ವಿ ಸಬ್ ಸ್ಟೇಷನ್ ಬಗ್ಗೆ ಸುಮಾರು 25 ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಯದ ಜನತೆಗೆ ಬಿಜೆಪಿ ಭರವಸೆ ನೀಡುತ್ತಾ ಬಂದಿದ್ದು, ಕಳೆದ...
ದಾಖಲೆಯ ಪುಟದಲ್ಲಿ ಮೋನಿಷ್ ತಂಟೆಪ್ಪಾಡಿ ಮತ್ತೊಂದು ಸಲ ತನ್ನ ಹೆಸರನ್ನು ದಾಖಲಿಸಿ ಸಾಧನೆ ಮಾಡಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುವ ಮೋನಿಷ್. ಟಿ. ಇವರು ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿದ್ದರು, ಇದೀಗ ಪೂರ್ಣ ಉಷ್ಟ್ರಸನಾ ದಲ್ಲಿ ಇಪ್ಪತೈದು ನಿಮಿಷ...
ಸುಳ್ಯ ಬೀರಮಂಗಲ ನಿವಾಸಿ ಜೋಸೆಫ್ ಅರುಣ್ ಕ್ರಾಸ್ತಾ ಅಸೌಖ್ಯದಿಂದ ಸೆ.21 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.ಕಾಂಗ್ರೆಸ್ ಕಾರ್ಯಕರ್ತರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗೂ ಚರ್ಚ್ ನ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ICYM ನ ಪುತ್ತೂರು ವಲಯದ ಪ್ರಥಮ ಅಧ್ಯಕ್ಷರು ಹಾಗೂ ಪ್ರಸ್ತುತ ಕಥೋಲಿಕ ಸಭಾ ಪುತ್ತೂರು ವಲಯದ ಉಪಾಧ್ಯಕ್ಷರು ಹಾಗೂ...
ಅರಂತೋಡು ಶ್ರೀ ದುರ್ಗಾ ಫ್ರೆಂಡ್ಸ್ ನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 17 ರಂದು ಅರಂತೋಡಿನಲ್ಲಿ ಜರುಗಿತು. ಗೌರವಾಧ್ಯಕ್ಷರಾದ ಹರಿಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು-ಹಲಸಿನಡ್ಕ,ಉಪಾಧ್ಯಕ್ಷರಾದ ಗಿರಿ ಪ್ರಕಾಶ್ ಉಳುವಾರು, ಕಾರ್ಯದರ್ಶಿ ಜೀವನ್ ಮೇಲಡ್ತಲೆ, ಮಾಧ್ಯಮ ಕಾರ್ಯದರ್ಶಿ ಅರುಣ್ ಅಡಿಮರಡ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ, ಸದರಿ ವರ್ಷದ ಗಣೇಶ ಚತುರ್ಥಿ...
ಮಡಪ್ಪಾಡಿ ಗ್ರಾಮದ ಕೇವಳ ಮನೆತನದ ದಿ.ಕುಶಾಲಪ್ಪ ಪಟೇಲ್ ಅವರ ಪತ್ನಿ ಶ್ರೀಮತಿ ತೇಜಾವತಿ ಕುಶಾಲಪ್ಪ ಪಟೇಲ್ ಅವರ ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಸ.17ರಂದು ಪಟೇಲ್ ಮನೆ ಕೇವಳದಲ್ಲಿ ನಡೆಯಿತು.ತೇಜಾವತಿಯವರ ಆದರ್ಶ ಬಾಳ್ವೆಯ ಕುರಿತು ಕುಟುಂಬದವರಾದ ಸೋಮಶೇಖರ ಕೇವಳ ಹಾಗೂ ಮೃತರ ಪುತ್ರ ಸೈನಿಕ್ ಸ್ಕೂಲ್ ವಿಜಯಪುರದ ನಿವೃತ್ತ ಉಪನ್ಯಾಸಕ ದಾಮೋದರ ಕೇವಳ ತಮ್ಮ...
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರ ವಿಶೇಷ ಅನುದಾನದಲ್ಲಿ ಮುರುಳ್ಯ ಶಾಂತಿನಗರದಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣದ ಉದ್ಘಾಟನೆ ಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ವೇದಿಕೆಯಲ್ಲಿ ವನಿತಾ ಸುವರ್ಣ, ಜಾನಕಿ ಮುರುಳ್ಯ, ಡಾ. ಮಂಜುನಾಥ್, ವಸಂತ ನಡುಬೈಲು, ರವಿ ತೋಟ ಹಾಗೂ ರಿಕ್ಷಾ ಚಾಲಕರು, ಮಾಲಕರು, ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 2022-23ನೇ ಸಾಲಿನಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭಾಜನವಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2022-23ನೇ ಸಾಲಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಕೊಡಂದೇರ ಗಣಪತಿಯವರು...
ಸುಬ್ರಹ್ಮಣ್ಯ: ನಮ್ಮ ದೇಶದ ಗ್ರಾಮೀಣ ಮಣ್ಣಿನ ಕ್ರೀಡೆಯಾದ ಕಬ್ಬಡಿಯು ಯುವ ಜನಾಂಗಕ್ಕೆ ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆಯ ಪಾತ್ರ ಅನನ್ಯ.ಆದುದರಿಂದ ಯುವ ವಿದ್ಯಾರ್ಥಿಗಳು ಕಬಡ್ಡಿಯತ್ತ ಹೆಚ್ಚು ಆಕರ್ಷಿತರಾಗಬೇಕು.ಆಧುನಿಕ ಯುಗದಲ್ಲಿ ಮೊಬೈಲ್ನ ಗೀಳನ್ನು ಬಿಟ್ಟು ಕ್ರೀಡಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತರಾದರೆ ಬದುಕು ಉತ್ಕೃಷ್ಠವಾಗುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ...
Loading posts...
All posts loaded
No more posts
