- Wednesday
- July 29th, 2026
ಸುಳ್ಯದ ಮೆಸ್ಕಾಂ ಕಛೇರಿಯಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಬಿಲ್ಲ್ ಗಳ ನಗದು ಪಾವತಿ ಮತ್ತು ಆನ್ಲೈನ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ . ಜನರು ತಿಂಗಳ ಕೊನೆಯಾದ ಹಿನ್ನೆಲೆಯಲ್ಲಿ ನಗದು ಬಿಲ್ಲು ಪಾವತಿಸಲು ಸುಳ್ಯ ಮೆಸ್ಕಾಂ ಕಛೇರಿಗೆ ಆಗಮಿಸುತ್ತಿದ್ದು ದಿನಾಂಕ 29 ಮತ್ತು 30ರಂದು ಮೈಗ್ರೇಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ನಗದು ಹಾಗೂ ಆನ್ಲೈನ್...
ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 8ರಿಂದ 12ರ ವರೆಗೆ ನಡೆಯಲಿವೆ. ಸರ್ವಧರ್ಮ ಸಮ್ಮೇಳನ: ಡಿ. 11 ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೆ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು.ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಡಾ....
ಶ್ರೀ ಶಾರದ ಹೆಣ್ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ವಾರ್ಷಿಕ ಕ್ರೀಡಾಕೂಟವು ತಾರೀಕು 29.11.2023 ರಂದು ನಡೆಯಿತು. ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವಸಂತ ಎ.ಸಿ ಯವರು ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ...
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ವ್ಯಾಪ್ತಿಯ ನಾಯಕರ ಸಭೆಯು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಉಪಸ್ಥಿತಿಯಲ್ಲಿ ಸುಳ್ಯದಲ್ಲಿ ಜರುಗಿತು.ಸಭೆಯಲ್ಲಿ ಪಕ್ಷವನ್ನು ಇನ್ನಷ್ಟು ತಲಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್...
ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆಯು ಮೊಕ್ತೇಸರ ಬಿ.ಸದಾನಂದ ರೈ ಯವರ ಅಧ್ಯಕ್ಷತೆಯಲ್ಲಿ ನ.28 ರಂದು ದೇವಸ್ಥಾನದಆವರಣದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ವಾರ್ಷಿಕ ವರದಿವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.ಕ್ಷೇತ್ರದ ಮೊಕ್ತೇಸರರಾಗಿ ಬಿ. ಸದಾನಂದ ರೈ, ಅಧ್ಯಕ್ಷ ಬಿ. ಸುಭಾಶ್ಚಂದ್ರ ರೈ...
ಸುಳ್ಯ ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಸುಳ್ಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ ಹಿನ್ನಲೆ ಯಲ್ಲಿ ಸರ್ಕಾರ ಮಹಾಯೋಜನೆಗೆ ತಾತ್ಕಾಲಿಕವಾಗಿ ಅನುಮೋದನೆಯನ್ನು ನೀಡಿದೆ. ತಾತ್ಕಾಲಿಕ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವರದಿಯನ್ನು ಸುಳ್ಯ ಪಟ್ಟಣ...
ಚೀನಾದಲ್ಲಿ ಇದಕ್ಕಿದ್ದಂತೆ ವಿಚಿತ್ರ ಸೋಂಕು ಕಂಡು ಬಂದಿದ್ದು, ಇದು ಹೆಚ್ಚಾಗಿ ಮಕ್ಕಳನ್ನೇ ಗುರಿ ಮಾಡುತ್ತಿರುವುದು ಭಾರತೀಯರಲ್ಲಿ ನಡುಕ ಹುಟ್ಟಿಸಿದೆ. ಮಕ್ಕಳ ಈ ಜ್ವರದ ಲಕ್ಷಣಗಳೇನು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ.ಟೆಕ್ನಾಲಜಿಯಲ್ಲಿ ಎಲ್ಲರನ್ನೂ ಮೀರಿಸುವಂತೆ ಇರುವ ಚೀನಾ ದೇಶ ಜಗತ್ತಿಗೆ ಕಾಯಿಲೆಗಳನ್ನು ಕೊಡುಗೆಯಾಗಿ ಕೊಡುವಲ್ಲಿ ಕೂಡ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಯಾವುದಕ್ಕೆ ಹೆದರದಿದ್ದರೂ ಸೋಂಕಿನ ವಿಚಾರಕ್ಕೆ...
ಅಜ್ಜಾವರ ಗ್ರಾಮದ ಮೇನಾಲ ಕುಟುಂಬಸ್ಥರು ಆರಾಧನೆ ನಡೆಸಿಕೊಂಡು ಬರುತ್ತಿರುವ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ಹಿನ್ನಲೆಯಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪಶ್ನಾ ಚಿಂತನೆಗೆ ಚಾಲನೆ ನೀಡಲಾಯಿತು. ಮೇನಾಲದಲ್ಲಿ 2024ರ ಮಾರ್ಚ್ ತಿಂಗಳ ದಿನಾಂಕ 5, 6, 7ರಲ್ಲಿ ದೈವಕಟ್ಟು ಮಹೋತ್ಸವ ನಡೆಸುವ ಬಗ್ಗೆ ಮತ್ತು ಉತ್ಸವಕ್ಕೆ ಬೇಕಾದ ಸಮಿತಿಗಳ ರಚಿಸುವ ಬಗ್ಗೆ ಪ್ರಶ್ನೆ...
ಗುಂಗುರು ಕೂದಲನ್ನು ಸರಿಯಾಗಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸವೆಂದು ಕೆಲವರು ಭಾವಿಸುತ್ತದೆ ಆದರೆ ಅದು ಕಷ್ಟದ ಕೆಲಸವಲ್ಲ. ಕೂದಲು ಸುಕ್ಕುಗಟ್ಟಲು ತೇವಾಂಶದ ಕಾರಣವು ಆಗಿರಬಹುದು. ಗುಂಗುರು ಕೂದಲು ಹೆಚ್ಚಿನವರಿಗೆ ಚೆನ್ನಾಗಿಯೇ ಕಾಣಿಸುತ್ತದೆ. ಅದರೆ ಆ ಕೂದಲನ್ನು ಕೆಲವರಂತೂ ಕಷ್ಟವೆಂದೇ ಭಾವಿಸುತ್ತಾರೆ. ಆದರೆ ವಿಪರ್ಯಾಸವೇನೆಂದರೆ ತೇವಾಂಶ ಹೊಂದಿದ ವಾತಾವರಣವು ನಿಮ್ಮ ಕೂದಲನ್ನು ಇನ್ನಷ್ಟು ಒರಟಾಗಿಸುತ್ತದೆ. ಹಾಗಾದರೆ ಕೂದಲನ್ನು...
ಸರಕಾರಿ ಅಧಿಕಾರಿಯೋರ್ವರು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಸರಕಾರಿ ವಾಹನವನ್ನು ಚಲಾಯಿಸಿದ್ದನ್ನು ಕಂಡ ಇತರ ವಾಹನ ಸವಾರರು ಅಡ್ಡಗಟ್ಟಿದ ಘಟನೆ ನ.28 ರಂದು ರಾತ್ರಿ ಸುಳ್ಯದ ಅರಂಬೂರಿನಲ್ಲಿ ನಡೆದಿದೆ. https://youtu.be/RaumwdMEx4k?si=tD7W_7lrI4X76jgH ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸರಕಾರಿ ಅಧಿಕಾರಿ. ಸಾರ್ವಜನಿಕರು ಹಾಗೂ ವಾಹನ...
Loading posts...
All posts loaded
No more posts
