ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟಮಹೋತ್ಸವ ಹಸಿರು ಕಾಣಿಕೆ ಸಮರ್ಪನಣೆ ಹಿನ್ನಲೆ ಪಾಟಾಳಿ ಯಾನೆ ಗಾಣಿಗ ಸಂಘದ ವತಿಯಿಂದ ವಿಶೇಷ ಸಭೆ – ನೂತನ ಸಂಚಾಲಕರುಗಳ ನೇಮಕ

ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟಮಹೋತ್ಸವದ ಅಂಗವಾಗಿ ಸುಳ್ಯ ತಾಲೂಕಿನ ಸಮಾಜ ಬಾಂದವರು ವಿಜ್ರಂಭಣೆಯೊಂದಿಗೆ ಕೊಂಡೊಯ್ಯಲು ಉದ್ದೇಶಿಸಿರುವ ಹಸಿರು ಕಾಣಿಕೆ(ಹೊರೆ ಕಾಣಿಕೆ) ವಿಚಾರವಾಗಿ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕರವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ದೇವಾಲದಲ್ಲಿ ವಿಶೇಷ ಸಭೆ ಜರುಗಿತು. ಸಭೆಯಲ್ಲಿ ಹಸಿರುವಾಣಿ ವ್ಯವಸ್ಥೆಯ ಯಶಸ್ವಿಗಾಗಿ...

ಸುಳ್ಯ : ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಶಿಕಾರಿಪುರಕ್ಕೆ ವರ್ಗಾವಣೆ

ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜಣ್ಣ ಇವರನ್ನು ಲೋಕಸಭಾ ಚುನಾವಣಾ ಕರ್ತವ್ಯ ಹಿನ್ನಲೆಯಲ್ಲಿ ವರ್ಗಾವಣೆ ಗೊಳಿಸಿ ಆದೇಶಿಸಲಾಗಿದೆ. ಇಲ್ಲಿಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಶಿಕಾರಿಪುರದ ಅಧಿಕಾರಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದು ಕೇವಲ ಚುನಾವಣೆಯ ಹಿನ್ನಲೆಯಲ್ಲಿ ಮಾತ್ರ ಮಾಡಲಾಗಿದೆ ಚುನಾವಣೆ ಮುಗಿದ ಬಳಿಕ ಮೊದಲಿನಂತೆ ಸುಳ್ಯಕ್ಕೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
Ad Widget

ಶ್ರೀ ಕಾವೇರಿ ಯುವಕ ಮಂಡಲ ಪೆರಾಜೆ ವಾರ್ಷಿಕ ಸಭೆ ನೂತನ ಪದಾಧಿಕಾರಿಗಳ ಆಯ್ಕೆ

ಪೆರಾಜೆ:ಶ್ರೀ ಕಾವೇರಿ ಯುವಕ ಮಂಡಲದ ಇದರ ವಾರ್ಷಿಕ ಸಭೆಯು ಅಧ್ಯಕ್ಷ ರಾದ ಶ್ರೀ ದಯಾನಂದ ದೋಳ್ತಿಲ ಇವರ ಅಧ್ಯಕ್ಷತೆಯಲ್ಲಿ ಪೆರುಮುಂಡ ಅಂಗನವಾಡಿ ಕೇಂದ್ರದ ವಠಾರದಲ್ಲಿ ದಿನಾಂಕ 4.2.2024ನೇ ಆದಿತ್ಯವಾರ ನಡೆಯಿತು. ಅಧ್ಯಕ್ಷರಾದ ಶ್ರೀ ದಯಾನಂದ ದೋಳ್ತಿಲ, ಕಾರ್ಯದರ್ಶಿ ಮಂಜುನಾಥ(ಗುಲಾಬಿ), ಖಜಾಂಜಿ ವಿಪಿನ್ ಪೆರಂಗಾಜೆ ಅವರ ಅವಧಿ ಮುಗಿದಿದ್ದು ನೂತನ ಅಧ್ಯಕ್ಷರಾಗಿ ನೋಹಿತ್ ನಿಡ್ಯಮಲೆ,ಕಾರ್ಯದರ್ಶಿಯಾಗಿ ವಿಕೀತ್ ಕೊಳಂಗಾಯ,...

ನಾಲಗೆ ಕ್ಯಾನ್ಸರ್ – ಲಕ್ಷಣಗಳೇನು – ಚಿಕಿತ್ಸಾ ಕ್ರಮಗಳೇನು?

ಬರಹ : ಡಾ. ಮುರಲೀ ಮೋಹನ್ ಚೂಂತಾರುನಾಲಗೆ ಕ್ಯಾನ್ಸರ್ ಎನ್ನುವುದು ಬಾಯಿಯ ಕ್ಯಾನ್ಸರ್‍ನ ಒಂದು ಉಪ ವಿಂಗಡಣೆಯಾಗಿರುತ್ತದೆ. ಅದರೆ ಬಾಯಿಯ ಇತರ ಭಾಗಗಳಾದ ದವಡೆ, ಕೆನ್ನೆ, ತುಟಿ, ಅಂಗಳ ಮುಂತಾದ ಭಾಗದ ಕ್ಯಾನ್ಸರ್‍ಗಳಿಗಿಂತ ನಾಲಗೆ ಕ್ಯಾನ್ಸರ್ ಬಹಳ ಅಪಾಯಕಾರಿ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದ ತ್ರೀವ್ರತೆಯನ್ನು ಗಡ್ಡೆಯ ಗಾತ್ರ ಮತ್ತು ಜೀವಕೋಶಗಳ ರಚನೆಯ ಮೇಲೆ ನಿರ್ಧರಿಸಲಾಗುತ್ತದೆ. ಆದರೆ...

ಚೈತ್ರ ಯುವತಿ ಮಂಡಲ ಅಜ್ಜಾವರ ಟಿಶರ್ಟ್ ಬಿಡುಗಡೆ

ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ಸರಕಾರಿ ಪದವಿಪೂರ್ವ ಕಾಲೇಜು ಮೈದಾನ ಸುಳ್ಯದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಚೈತ್ರ ಯುವತಿ ಮಂಡಲ ಅಜ್ಜಾವರಕ್ಕೆ ರಘು ಬೆಂಗಳೂರು ಅವರು ಕೊಡಮಾಡಿದ ಟಿಶರ್ಟ್ ಅನ್ನು ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಎ. ಎಂ.,...

ಸುಳ್ಯ : ಮಂಡಲದಲ್ಲಿ ಎದ್ದ ಆಕ್ರೋಶ ತುರ್ತು ಸಭೆ, ಅಸಹಕಾರ ಚಳುವಳಿ ಕುರಿತು ನಿಯೋಜಿತ ಮಂಡಲ ಅಧ್ಯಕ್ಷರ ಪ್ರತಿಕ್ರಿಯೆ

ನಮ್ಮ ಸುಳ್ಯ ಮಂಡಲದಲ್ಲಿನ ಕೆಲ ಗೊಂದಲಗಳು ಮತ್ತು ಇಂದಿನ ದಿಢೀರ್ ಸಭೆಯಿಂದ ಪಕ್ಷಕ್ಕೆ ಗೊಂದಲ ಮತ್ತು ಸಮಸ್ಯೆಗಳು ಆಗುವುದಿಲ್ಲ. ಅಲ್ಲದೆ ಈ ಹಿಂದೆಯು ಅಸಹಕಾರ ಚಳುವಳಿ ನಡೆದಿತ್ತು. ನಂತರದ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ರಚಿಸಿದ ಪೇಜ್ ಪ್ರಮುಖರು ಮತ್ತು ವಾರ್ಡ್ ಗಳ...

ದೇವ ದುರ್ಲಭ ಕಾರ್ಯಕರ್ತರ ಹೈ ವೋಲ್ಟೇಜ್ ಮೀಟಿಂಗ್ – ಕಾರ್ಯಕರ್ತರು, ನಾಯಕರ ತೀರ್ಮಾನಕ್ಕೆ ಜಿಲ್ಲಾ ನಾಯಕರು ಶಾಕ್ – ನಿಯೋಜಿತ ಅಧ್ಯಕ್ಷರ ಬಗ್ಗೆ ಕಾರ್ಯಕರ್ತರ ಅಸಮಾಧಾನವೇನು ?

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಕುಂಪುಲ ಆಯ್ಕೆಯಾಗಿ ಪದಗ್ರಹಣ ಸಮಾರಂಭ ನಡೆದ ಕೆಲ ದಿನಗಳ ನಂತರ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿತ್ತು. ಮಂಡಲ ಸಮಿತಿಗೆ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ಸುಳ್ಯದಲ್ಲಿ ಕಾರ್ಯಕರ್ತರಿಂದ ಭಾರಿ ಆಕ್ರೋಶವೇ ವ್ಯಕ್ತವಾಗಿದೆ. ಸುಳ್ಯದ ದೇವದುರ್ಲಭ ಕಾರ್ಯಕರ್ತರು ಇಂದು ಪಕ್ಷದ ಕಛೇರಿಯಲ್ಲಿ ತುರ್ತು ಸಭೆ ನಡೆಸಿ...

ಬಿಜೆಪಿ ಕಛೇರಿಗೆ ಬೀಗ ಜಡಿದ ಕಾರ್ಯಕರ್ತರು – ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಕ್ರಿಯೆ

ಸುಳ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಗರಂ ಆಗಿದ್ದು ಪ್ರಮುಖರ ಸಭೆ ಬಳಿಕ ಕಛೇರಿಗೆ ಬೀಗ ಜಡಿದು ಘೋಷಣೆ ಕೂಗಿದ್ದು ಮತ್ತೊಮ್ಮೆ ಪ್ರಸ್ತುತ ಕಾರ್ಯನಿವಹಿಸುತ್ತಿರುವ ನಾಯಕರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಆಗ್ರಹಿಸುತ್ತಿದ್ದರು. ಈ ಕುರಿತಂತೆ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ ಪಕ್ಷ ಸಂಘಟನೆ ನೆಲೆಯಲ್ಲಿ ಓರ್ವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇದೀಗ...

ಬಿಜೆಪಿ ನೂತನ ಅಧ್ಯಕ್ಷರ ನೇಮಕ – ಪಕ್ಷದೊಳಗೆ ಭಿನ್ನಮತ ಸ್ಪೋಟ – ಅಸಹಕಾರ ಚಳುವಳಿಗೆ ನಿರ್ಧರಿಸಿದ ಕಾರ್ಯಕರ್ತರಿಂದ ಕಛೇರಿಗೆ ಬೀಗ ಮುದ್ರೆ!

ಸುಳ್ಯ: ಸುಳ್ಯ ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ‌ ಮಾಡಿರುವ ಹಿನ್ನಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಪ್ರಮುಖರ ಸಭೆಯ ಬಳಿಕ ಕಾರ್ಯಕರ್ತರು ಅಸಹಕಾರ ಚಳುವಳಿ ನಡೆಸುವುದಾಗಿ ತೀರ್ಮಾನಿಸಿದಲ್ಲದೇ ಇದೀಗ ಕಛೇರಿಗೆ ಬೀಗ ಮುದ್ರೆಯನ್ನು ಜಡಿದಿದ್ದಾರೆ.

ಗೂನಡ್ಕ ಪೆಲ್ತಡ್ಕ ಬಳಿ ಭೀಕರ ರಸ್ತೆ ಅಪಘಾತ ಅದೃಷ್ಟವಶ ಪಾರು

ಸುಳ್ಯ ಗೂನಡ್ಕ ಬಳಿಯ ಪೆಲ್ತಡ್ಕ ಎಂಬಲ್ಲಿ ಸ್ವಿಫ್ಟ್ ಕಾರು ಮತ್ತು ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.
Loading posts...

All posts loaded

No more posts

error: Content is protected !!