ಕಡಬ : ದಾಖಲೆ ಪತ್ರಕ್ಕಾಗಿ ಕಛೇರಿಗೆ ಬಂದು ವ್ಯಕ್ತಿಯನ್ನು ಸತಾಯಿಸಿದ ಪಟ್ಟಣ ಪಂಚಾಯತ್ ಮಹಿಳಾ ಸಿಬ್ಬಂದಿ – ಲಂಚಕ್ಕಾಗಿ ಎರಡು ದಿನ ಅಲೆದಾಡಿಸಿದ್ದಾರೆ ಎಂಬ ಆರೋಪ – ವಿಡಿಯೋ ವೈರಲ್ ಆದ ಬಳಿಕ ದಾಖಲೆ ಸರಿ ಮಾಡಿಕೊಟ್ಟ ಮುಖ್ಯಾಧಿಕಾರಿ

https://youtu.be/i_jR9KAywes?si=TR0PWSqlyzBm-NON ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ ಪತ್ರಕ್ಕಾಗಿ ಬಂದ ವ್ಯಕ್ತಿಯ ಬಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಲಂಚದ ಆಸೆಗಾಗಿ  ಎರಡು ದಿನ ಅಲೆದಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ‌  ಎರಡು ದಿನದಲ್ಲಿ ಬರೋಬ್ಬರಿ  ಒಂಭತ್ತು ಬಾರಿ ವ್ಯಕ್ತಿಯೊಬ್ಬರನ್ನು  ಅಲೆದಾಡಿಸಿದ  ಪಟ್ಟಣ ಪಂಚಾಯತ್ ...

ಸೈoಟ್ ಜೋಸೆಫ್ ಶಾಲೆ ಎಸ್ ಎಸ್ ಎಲ್ ಸಿ ಶೇ 100 ಫಲಿತಾಂಶ

ಸುಳ್ಯ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಮರುಮೌಲ್ಯ ಮಾಪನದಲ್ಲಿ ಶೇ.100 ಫಲಿತಾಂಶ ಬಂದಿದೆ.ಪರೀಕ್ಷೆಗೆ ಹಾಜರಾದ 111  ವಿದ್ಯಾರ್ಥಿಗಳಲ್ಲಿ ಒಬ್ಬರು ಅನುತ್ತೀರ್ಣರಾಗಿ ಶೇ.99.9 ಫಲಿತಾಂಶ ಬಂದಿತ್ತು.ಬಳಿಕ ಮರುಮೌಲ್ಯಮಾಪನದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಉತ್ತೀರ್ಣರಾಗಿ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.
Ad Widget

ಗುತ್ತಿಗಾರು : ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುತ್ತಿಗಾರು ಕ್ರಾಂತಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಯುವಕ ಮಂಡಲದ ವಠಾರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಗ್ರಾಮ ಪಂಚಾಯತು ಸದಸ್ಯರಾದ ವೆಂಕಟ್ ವಳಲಂಬೆ,, ಕೊಲ್ಲಮೊಗ್ರ ಗ್ರಾಮ ಪಂಚಾಯತು ಕಾರ್ಯದರ್ಶಿಯಾದ ಮೋಹನ ಕೆ ಮತ್ತು ಗುತ್ತಿಗಾರು ಒಕ್ಕೂಟದ...

ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಕಡಬ ತಾಲೂಕಿನ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಬಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡೆಪ್ಪಾಜೆ ಫಾರ್ಮ್ ಹೌಸ್ ಮತ್ತು ನರ್ಸರಿ ಮರ್ದಾಳ ಇವರ ಸಹಯೋಗದಲ್ಲಿ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ರಾವ್, ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್ ಪ್ರಸಾದ್, ಶಾಲಾ ಮುಖ್ಯ ಗುರು ಉದಯ ಕುಮಾರ್ ರೈ ಎಸ್, ಶಾಲಾ ಎಸ್ಡಿಎಂಸಿ ,ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮರು ಮೌಲ್ಯಮಾಪನದಲ್ಲಿ 9 ಅಂಕ ಹೆಚ್ಚುವರಿ ಪಡೆದ ರೋಟರಿ ಪ್ರೌಢಶಾಲೆಯ ಯಶಸ್ವಿ ಪಿ. ಭಟ್

ಮೇ.9 ರಂದು ಪ್ರಕಟಗೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ರೋಟರಿ ಪ್ರೌಢಶಾಲಾ ವಿದ್ಯಾರ್ಥಿನಿ ಯಶಸ್ವಿ ಪಿ.ಭಟ್ 598 ಅಂಕ ಪಡೆದಿದ್ದರು.‌ ಇದೀಗ 9 ಅಂಕ ಹೆಚ್ಚುವರಿ ಬಂದಿದ್ದು 607 ಅಂಕ ಪಡೆದುಕೊಂಡಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ವಿಜ್ಞಾನ ವಿಷಯದಲ್ಲಿ 86 ಅಂಕ ಪಡೆದಿದ್ದು, ಮರುಮೌಲ್ಯಮಾಪನಕ್ಕೆ ಮನವಿ ಮಾಡಿದಾಗ ವಿದ್ಯಾರ್ಥಿನಿಗೆ 9 ಅಂಕ ಹೆಚ್ಚುವರಿ ಬಂದು 95 ಅಂಕ ಪಡೆದಿದ್ದಾರೆ....

ಸುಳ್ಯ : ಸೈಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರವರಿಗೆ ಬೀಳ್ಕೊಡುಗೆ ಸಮಾರಂಭ

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಕಳೆದ ೧೭ ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಸಿಸ್ಟರ್ ಬಿನೋಮರವರು ಆಂದ್ರಪ್ರದೇಶದ ಗುಂಟೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಸುಳ್ಯದಿಂದ ತೆರಳಲಿರುವ ಸಿಸ್ಟರ್ ಬಿನೋಮ ರವರಿಗೆ ಶಿಕ್ಷಣ ಸಂಸ್ಥೆಯಲ್ಲಿ ಬಿಳ್ಕೋಡುಗೆ ಸಮಾರಂಭ ಜೂ.೫ ರಂದು ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು.೨೦೦೭ ರಲ್ಲಿ ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗೆ...

ಸುಬ್ರಹ್ಮಣ್ಯ : ಎಸ್‌ಎಸ್‌ಪಿಯುನಲ್ಲಿ ನಡೆದ ಪರಿಸರ ದಿನಾಚರಣೆ

ಮಾತೃ ಸಮಾನವಾದ ಪ್ರಕೃತಿಯ ಸಂರಕ್ಷಣೆ ಹಾಗೂ ಪಾಲನೆ ಪೋಷಣೆಗಳು ನಮ್ಮ ಜೀವಿತಾವಧಿಯ ಶ್ರೇಷ್ಠ ಕೈಂಕರ್ಯವಾಗಬೇಕು.ಪರಿಸರ ಸಮೃದ್ಧಿಗೆ ಹೆಚ್ಚಿನ ಸಹಕಾರ ನೀಡುವುದರಿಂದ ಕೃಪಾಶೀರ್ವಾದ ಪ್ರಧಾನ. ಆಗ ನಮ್ಮ ಪರಿಸರ ಸಮೃದ್ದತೆ ಬೆಳಗಲು ಸಾಧ್ಯವಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ,ಸುಖ ಸಂಪತ್ತಿಗಾಗಿ ಭೂಮಿಯ ಮೇಲೆ ಅಧಿಪತ್ಯ ಸ್ಥಾಪಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನುಮಾಡುವಾಗಲೂ...

ಸಾನ್ವಿ ಪಿ. ಎನ್.ಗೆ ಮರು ಮೌಲ್ಯ ಮಾಪನದಲ್ಲಿ 6 ಅಂಕ ಹೆಚ್ಚಳ

ಎಸ್. ಎಸ್. ಎಲ್.ಸಿ ಫಲಿತಾಂಶ ಮೇ 9ರಂದು ಪ್ರಕಟಗೊಂಡಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ  ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಪಿ.ಎನ್., ಮರು ಎಣಿಕೆಯ ನಂತರದ ಫಲಿತಾಂಶ ದಲ್ಲಿ 611ರ ಬದಲಾಗಿ617 ಅಂಕ ಪಡೆದುಕೊಂಡಿದ್ದಾರೆ.ಪ್ರಥಮ ಫಲಿತಾಂಶದಲ್ಲಿ ಗಣಿತ ವಿಷಯ ಮೌಲ್ಯ ಮಾಪನದಲ್ಲಿ ಮೌಲ್ಯ ಮಾಪಕರ ಎಣಿಕೆಯ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯು ನಾಲ್ಕು ಅಂಕಗಳನ್ನು ಕಳೆದುಕೊಂಡಿದ್ದಳು. ಇಂಗ್ಲಿಷ್...

ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ  ಪರಿಸರ ದಿನಾಚರಣೆ

ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ  ರಿಕ್ಷಾ ನಿಲ್ದಾಣದ ಬಳಿ  ಜೂನ್ 5 ರಂದು ಗಿಡ ನೆಡುವ ಮೂಲಕ  ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು. ಈ ಸಂದರ್ಭದಲ್ಲಿ ರಿತಿನ್ ಡೆಮ್ಮಲೆ, ಹರೀಶ್  ಮುಂಡಡ್ಕ , ಸುನಿಲ್ ಅರೆಕಲ್ಲು,  ಶ್ರೀಧರ ಪದ್ಫೂ, ಪರಮೇಶ್ವರ್, ಪವಿ ಸಂಪಾಜೆ, ಕುಶಾಲ ಸಂಪಾಜೆ, ಅಜೀದ್ ಕೊಯನಾಡು, ಚಂದ್ರ ಶೇಖರ ಅರೆಕಲ್ಲು, ಜಗನ್...
Loading posts...

All posts loaded

No more posts

error: Content is protected !!