ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣ ಬೆಟ್ಟ – ಕಾರ್ಯದರ್ಶಿ ಪದ್ಮನಾಭ ಮುಂಡಕಜೆ

Padmanabha mundakaje Lokesh Guddemane ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಬೆಟ್ಟ, ಗೌರವಾಧ್ಯಕ್ಷರಾಗಿ ಮುರಳೀಧರ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡಕಜೆ, ಜತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್...

ಹಿಂದೂ ಜಾಗರಣ ವೇದಿಕೆ ಮಡಪ್ಪಾಡಿ ಘಟಕ ರಚನೆ – ಅಧ್ಯಕ್ಷರಾಗಿ ಹೇಮಕುಮಾರ್ ಹಾಡಿಕಲ್ಲು

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಗುತ್ತಿಗಾರು ವಲಯದ 'ಮಡಪ್ಪಾಡಿ ಘಟಕ'ವು ಇಂದು ಮಡಪ್ಪಾಡಿಯ 'ಯುವಕ ಮಂಡಲ'ದಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘದ ಗುತ್ತಿಗಾರು ಮಂಡಲ ಕಾರ್ಯವಾಹಕರಾದ ಕರುಣಾಕರ ಪಾರೆಪ್ಪಾಡಿ ಇವರ ಸಮ್ಮುಖದಲ್ಲಿ ರಚನೆಗೊಂಡಿತು . ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಲೋಕಪ್ಪ ಶೀರಡ್ಕ, ಅಧ್ಯಕ್ಷರಾಗಿ ಹೇಮಕುಮಾರ್ ಹಾಡಿಕಲ್ಲು, ಉಪಾಧ್ಯಕ್ಷರಾಗಿ ವೇಣುಗೋಪಾಲ ಶೀರಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್...
Ad Widget

ಎಸ್ ಎಸ್ ಎಫ್ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ವತಿಯಿಂದ ಎಸ್ಎಸ್ಎಫ್ ಧ್ವಜಾದಿನಾಚರಣೆ

ಎಸ್ ಎಸ್ ಎಫ್ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ವತಿಯಿಂದ ಎಸ್ಎಸ್ಎಫ್ ಧ್ವಜಾದಿನಾಚರಣೆ ಸುಳ್ಯ ತಾಲೂಕಿನ ಸಂಘಟನೆಯ ಶಾಖೆಗಳಲ್ಲಿ ಇಂದು ಆಚರಿಸಲಾಯಿತು.

ಸೆ. 20 ಅಗಲಿದ ಸಮಸ್ತ ನೇತಾರರ ಅನುಸ್ಮರಣ ಕಾರ್ಯಕ್ರಮ

SKSSF ತ್ವಲಬಾ ವಿಂಗ್ ಸುಳ್ಯ ವಲಯಇದರ ವತಿಯಿಂದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ಬಹುಮಾನ ವಿತರಣೆ ಸೆ.20 ರಂದು ಸುದಳ್ಯ ಸುಪ್ರೀಂ ಹಾಲ್ ನಲ್ಲಿ ನಡೆಯಲಿದೆ. ಅಧ್ಯಕ್ಷತೆ ಜಮಾಲ್ ಕೆ ಎಸ್ ಅಧ್ಯಕ್ಷರು, SKSSF ಸುಳ್ಯ ವಲಯ ವಹಿಸಲಿದ್ದು ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣ...

ನೆಟ್ಟಾರು : ಯುವಕ ಆತ್ಮಹತ್ಯೆ

ನೆಟ್ಟಾರು ಗ್ರಾಮದ ಲಕ್ಷ್ಮೀಶ ಕಿನ್ನಿಮಜಲು (34 ವರ್ಷ) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ (ನಾಗಶ್ರೀ ಆಟೋ) ಇವರು ಬೆಳ್ಳಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೆ.18 ರಂದು ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದು, ಮನೆಯ ಹಿಂಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಘಟನೆ ನಿನ್ನೆ ಸಂಜೆ ವರದಿಯಾಗಿದ್ದು...

ತಾಲೂಕಿನ 14 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರದಿಂದ ಆದೇಶ

ತಾಲೂಕಿನ 12 ತಾಲೂಕು ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ, 2 ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದೀಗ ಆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಮಾಡಿದೆ. ದೊಡ್ಡತೋಟ – ಕುಕ್ಕುಜಡ್ಕ-ಪಾಜಪಳ್ಳ ರಸ್ತೆ 15.05 ಕಿ.ಮೀ, ಗುತ್ತಿಗಾರು-ಬಳ್ಳಕ-ಪಂಜ ರಸ್ತೆ 10.20ಕಿ.ಮೀ, ಗುತ್ತಿಗಾರು-ಕಮಿಲ- ಬಳ್ಪ ರಸ್ತೆ 5.40ಕಿ.ಮೀ, ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆ 11.90 ಕಿ.ಮೀ,...

ಸೆ.19 : ಎಸ್ಸೆಸ್ಸೆಫ್ ಧ್ವಜ ದಿನ – ಸುಳ್ಯದಲ್ಲಿ ವಿವಿಧ ಕಾರ್ಯಕ್ರಮಗಳು

ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಕರ್ನಾಟಕದಲ್ಲಿ ಸ್ಥಾಪಿತಗೊಂಡು ಮೂವತ್ತೊಂದು ವರುಷಗಳು ಪೂರ್ತಿಕರಿಸಿದೆ. 2020 ಸೆಪ್ಟಂಬರ್ 19ರಂದು ಮೂವತ್ತೆರಡನೇ ವರುಷಕ್ಕೆ ಕಾಲಿರಿಸುತ್ತಿದೆ. ಮೂರು ದಶಕಗಳಲ್ಲಿ ರಾಜ್ಯದುದ್ದಕ್ಕೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಮೂಹಿಕ ಕ್ಷೇತ್ರಗಳಲ್ಲಿ ಎಸ್ಸೆಸ್ಸೆಫ್ ನಡೆಸಿದೆ. ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿಯಿಂದ ಸೆಪ್ಟಂಬರ್ 19ರಂದು ವಿವಿಧ ಕಾರ್ಯಕ್ರಮಗಳು ಜರಗಲಿದೆ. ಬೆಳಗ್ಗೆ ಡಿವಿಷನ್ ಸಮಿತಿ ಅಧೀನದ...

ಬೆಳ್ಳಾರೆ ಪೊಲೀಸ್ ಠಾಣೆ ಕಡಬ ವೃತ್ತಕ್ಕೆ ಸೇರ್ಪಡೆಯಾದರೇ, ಮುಂದಿನ ದಿನಗಳಲ್ಲಿ ಬೆಳ್ಳಾರೆ ಜನತೆಗೆ ಸಂಕಷ್ಟ ಖಂಡಿತ – ಸಚಿನ್ ರಾಜ್ ಶೆಟ್ಟಿ

ಪೊಲೀಸ್ ಇಲಾಖೆಯಿಂದ ಪ್ರತೀ ಠಾಣೆಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ ಠಾಣಾಧಿಕಾರಿ ಆಗುವ ನಿಟ್ಟಿನಲ್ಲಿ, ಬೆಳ್ಳಾರೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಕಡಬ ವೃತ್ತಕ್ಕೆ ಸೇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸುಳ್ಯ ವೃತ್ತ ದ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಕಾರಣ ಬೆಳ್ಳಾರೆ ಹಾಗೂ ಸ್ಥಳೀಯ ಗ್ರಾಮದ ಜನತೆಗೆ ಕಾನೂನು ಸುವ್ಯವಸ್ಥೆಯ ವಿಷಯಗಳಲ್ಲಿ ತುಂಬಾ ಅನುಕೂಲವಾಗುತ್ತಿತ್ತು. ಆದರೆ ಇದೀಗ ಬೆಳ್ಳಾರೆ ಠಾಣೆಯನ್ನು ಸುಳ್ಯದಿಂದ...

ಶಾಂತಿನಗರ ಹಾಜಿ ಮೊಯ್ದಿನ್ ಅವರ ಆರೋಗ್ಯ ವಿಚಾರಣೆಗೆ ಧಾರ್ಮಿಕ ಮುಖಂಡರುಗಳ ಭೇಟಿ

ಸುಳ್ಯ ಎಸ್ ವೈ ಎಸ್ ಸಂಘಟನೆಯ ಮುಖಂಡರು, ಸಮಾಜ ಸೇವಕರು , ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿ ಇದರ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಹಾಜಿ ಮೊಹಿದ್ದಿನ್ ಶಾಂತಿನಗರ ಇವರು ಕೆಲವು ಕಾಲದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ವಿಚಾರಣೆಗಾಗಿ ಸೆಪ್ಟೆಂಬರ್ 17ರಂದು ಶಾಂತಿನಗರ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ...

ಅರಂತೋಡು ಸಹಕಾರಿ ಸಂಘದಿಂದ ಧನ ಸಹಾಯ

ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ಕೇಪಣ್ಣಗೌಡ ಕಲ್ಲುಗದ್ದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಇವರಿಗೆ ಸಹಕಾರಿ ಸಂಘದ ಸಾರ್ವ ಜನಿಕೋಪಕಾರ ನಿಧಿಯಿಂದ ರೂಪಾಯಿ 5000 ಸಹಾಯಧನವನ್ನು ಚಿಕಿತ್ಸಾ ವೆಚ್ಚವಾಗಿ ನೀಡಲಾಯಿತು.ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಸಹಾಯಧನದ ಚೆಕ್ಕನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ನಿರ್ದೇಶಕರಾದ ಕುಸುಮಾಧರ...
Loading posts...

All posts loaded

No more posts

error: Content is protected !!