ಬಿಜೆಪಿ ಮಹಿಳಾ ಮೋರ್ಚಾದ ನೂತನ ಕಾರ್ಯದರ್ಶಿಯಾಗಿ ಯಮಿತ ಪೂರ್ಣಚಂದ್ರ ಪೈಕ

ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ನೂತನ ಕಾರ್ಯದರ್ಶಿಯಾಗಿ ಯಮಿತ ಪೂರ್ಣಚಂದ್ರ ಪೈಕ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿದ್ದಾರೆ.

ಬಳ್ಪ: ನವರಾತ್ರಿ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

ಬಳ್ಪ ಗ್ರಾಮದ ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಪೂಜೆಯು ಅ. 17 ರಂದು ಮೊದಲ್ಗೊಂಡು ಅ. 26ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಸೆ. 26ರಂದು ನಡೆಯಿತು. ಪ್ರಗತಿಪರ ಕೃಷಿಕರಾದ ವಾಸುದೇವ ಕಾರ್ಜ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಉತ್ಸವ ಸಮಿತಿ ಗೌರವಾಧ್ಯಕ್ಷ...
Ad Widget

ತೊಡಿಕಾನ : ಜಲಮರುಪೂರಣ ಘಟಕ – ಭವಿಷ್ಯದ ದೃಷ್ಠಿಯಿಂದ ಜಲ ಸಂರಕ್ಷಣೆ ಅಗತ್ಯ : ಹರೀಶ್ ಕಂಜಿಪಿಲಿ

ನಮ್ಮ ಮುಂದಿನ ಭವಿಷ್ಯದ ದೃಷ್ಠಿಯಿಂದ ಜಲ ಸಂರಕ್ಷಣೆ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಅವರು ತೊಡಿಕಾನ ಹಾಲು ಸೊಸೈಟಿಯಲ್ಲಿ ಜಿಲ್ಲಾ ಪಂಚಾಯತ್ ಅನುದಾನ ದಿಂದ ನಿರ್ಮಿಸಿದ ಜಲಮರುಪೂರಣ ಯೋಜನೆಗೆ ಚಾಲನೆ ನೀಡಿ ನಂತರ ನಡೆದ ಸಭಾ ಕಾರ್ಯಕ್ರಮಲ್ಲಿ ಮಾತನಾಡಿದರು. ನಮ್ಮ ಭಾಗದಲ್ಲಿ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಕ್ಷಾಮ ತಲೆದೊರದಿದ್ದರೂ...

ಅರಂತೋಡು : ಸ್ವಾಮಿತ್ವ ಯೋಜನೆಯ ಬಗ್ಗೆ ವಿಶೇಷ ಗ್ರಾಮಸಭೆ

ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ. 25 ರಂದು (SVAMITVA) ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್.ವೆಂಕಟೇಶ್, ಭೂ ದಾಖಲೆಗಳ ಇಲಾಖಾ ಸೂಪರ್ ವೈಸರ್ ಸಿಂಗಾರ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉಪಸ್ಥಿತರಿದ್ದರು.ಡ್ರೋನ್ ಕ್ಯಾಮೆರಾದ...

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಿರಣ್ ಬುಡ್ಲೆಗುತ್ತು ಮನೆಗೆ ಭೇಟಿ

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಯವರು ಸೆ.25ರಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ಮನೆಗೆ ಭೇಟಿ ನೀಡಿದರು. ಈ ವೇಳೆ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಶಿವಪ್ರಸಾದ್ ಹಾಲೆಮಜಲು, ಸುಪ್ರಿತ್ ಗುಡ್ಡೆಮನೆ,ಹರೀಶ್ ಹಾಲೆಮಜಲು, ಯಕ್ಷಿತ್ ಮಡ್ತಿಲ, ಜಗದೀಶ್ ಕೆರೆಕ್ಕೋಡಿ, ಗಿರೀಶ್ ಆಳ್ವ, ಚೇತನ್, ಮನೀಷ್ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ : ಬಡ ಜೀವದ ಚಿಕಿತ್ಸೆಗೆ ನೆರವಾಗುವಿರಾ

ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು.ಈಗಾಗಲೇ ಅನೇಕ ಚಿಕಿತ್ಸೆಗಳನ್ನು ಮಾಡಿದ್ದುರೂ 3,00,000 ಲಕ್ಷಕ್ಕೂ ಅಧಿಕ ಖರ್ಚಾಗಬಹುದು ಎಂದು ವೈಧ್ಯರು ತಿಳಿಸಿದ್ದಾರೆ. ಸಂಪೂರ್ಣ ಗುಣಮುಖವಾಗಲುಇನ್ನು ಹೆಚ್ಚಿನ ಹಣ ಅಗತ್ಯವಾಗಿ ಬೇಕಾಗಬಹುದು. ಆರ್ಥಿಕವಾಗಿ...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ – ಕಥೆ ಕವನ ಲೇಖನಗಳಿಗೆ ಆಹ್ವಾನ

ಸುಳ್ಯದ ಜನಪ್ರಿಯ ವಾರಪತ್ರಿಕೆ ಅಮರ ಸುಳ್ಯ ಸುದ್ದಿ ಈ ಬಾರಿ ನಾಲ್ಕನೇ ವರ್ಷದ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಇದಕ್ಕಾಗಿ ಆಸಕ್ತ ಬರಹಗಾರರಿಂದ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ದೀಪಾವಳಿ ಆಚರಣೆ, ಪತಿ-ಪತ್ನಿಯರ ಸಂಸಾರ ಬಂಧನ, ಪ್ರೀತಿ-ಪ್ರೇಮ, ಲಾಕ್ ಡೌನ್ ಪರಿಣಾಮ, ಸಾಧಕರನ್ನು ಪರಿಚಯಿಸಲು 'ಇವರು ನಮ್ಮವರು' ಮಕ್ಕಳಿಗಾಗಿ 'ಫೋಟೋ ಸ್ಪರ್ಧೆ', ಮುಂತಾದ ವಿಷಯಗಳ ಜೊತೆಗೆ ಪ್ರಚಲಿತ...

ಅರಂತೋಡು: ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮ

ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ &ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್ ಕ್ರಾಸ್...

ಸುಳ್ಯ : ಡ್ರಗ್ಸ್ ವಿರುದ್ಧ ಎಬಿವಿಪಿ ಪತ್ರ ಚಳುವಳಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ, ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಸೆ.26 ರಂದು ಸುಳ್ಯದ ಅಂಚೆಕಛೇರಿ ಬಳಿ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು. 'ಡ್ರಗ್ಸ್ ಮುಕ್ತ ಕರ್ನಾಟಕ' ದಿಸೆಯಲ್ಲಿ ಈ ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಎ.ಬಿ.ವಿ.ಪಿ.ಯ ನಗರ...

ಪುತ್ತೂರು ಡಿವೈಎಸ್ಪಿ ಯಾಗಿ ಕಾರ್ಯನಿರ್ವಹಿಸಿದ್ದ ದಿನಕರ ಶೆಟ್ಟಿ ದ.ಕ. ಜಿಲ್ಲಾ ಡಿ.ಸಿ.ಆರ್.ಬಿ ಡಿ.ಎಸ್.ಪಿ. ಆಗಿ ಕರ್ತವ್ಯಕ್ಕೆ

ಪುತ್ತೂರು ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ ದಿನಕರ ಶೆಟ್ಟಿ ರವರು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ತನಿಖಾ ವಿಭಾಗದ ಡಿ ಸಿ ಆರ್ ಬಿ ಡಿ.ಎಸ್.ಪಿ. ಆಗಿ ಮಂಗಳೂರು ಎಸ್ಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪುತ್ತೂರಿನಲ್ಲಿ ದಕ್ಷತೆಯ ಸೇವೆಯನ್ನು ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
Loading posts...

All posts loaded

No more posts

error: Content is protected !!