ಕಮಿಲಡ್ಕ – ಕೊಡಿಯಾಲಬೈಲ್ ಕಾಲು ದಾರಿ ಅಭಿವೃದ್ಧಿ ಅಸಾಧ್ಯವೇ – ತಡೆಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ ಕಾಲುಸಂಕ

ನೀರಬಿದಿರೆ ಕಮಿಲಡ್ಕ ಕೊಡಿಯಾಲಬೈಲ್ ಜಟ್ಟಿಪಳ್ಳಕ್ಕೆ ಸಾಗುವ ಕಾಲುದಾರಿ ಯಾವುದೇ ಅಭಿವೃದ್ಧಿ ಕಾಣದೇ ನಡೆದಾಡುವವರಿಗೆ ಹಾಗೂ ದ್ವಿಚಕ್ರ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಈ ಕಾಲುದಾರಿ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಜನರಿಗೆ ವಾಹನ ಸೌಕರ್ಯ ಕಡಿಮೆ ಇದ್ದ ವೇಳೆ ಇದೇ ಕಾಲುದಾರಿಯನ್ನೇ ಬಳಸಿ ಸುಳ್ಯಕ್ಕೆ ಹೋಗುತ್ತಿದ್ದರು. ಈಗಲೂ ಅತೀ ಹೆಚ್ಚು ಜನರು ಈ ಕಾಲುದಾರಿಯನ್ನೇ...

ಕೊಲ್ಲಮೊಗ್ರು : ಜನಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜನಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ ಸಭೆಯು ಮಾ.07 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆ ಸುಳ್ಯದ ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ವಿಮಲಾ ರಂಗಯ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಸಭಾಧ್ಯಕ್ಷತೆಯನ್ನು ಶಿವಪ್ರಸಾದ್ ಮಾದನ ಮನೆ ಏನೆಕಲ್ ವಹಿಸಿದರು....
Ad Widget

ಗ್ರಾಮ ಪಂಚಾಯತ್ ಕಳಂಜದಲ್ಲಿ ಕೊರೊನಾ ಲಸಿಕಾ ಕಾರ್ಯಕ್ರಮ

ವಿಶ್ವ ಆರೋಗ್ಯ ದಿನವಾದ ಎ.7ರಂದು ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ ಸಮಿತಿ ಮತ್ತು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ಶಿಬಿರವನ್ನು ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೂ ಹಮ್ಮಿಕೊಳ್ಳಲಾಗಿತ್ತು. ಕಳಂಜ ಗ್ರಾಮ ಪಂಚಾಯತ್ ಕೊರೊನಾ ಕಾರ್ಯಪಡೆ...

ಸ್ವಚ್ಛ ಭಾರತ ಕಲ್ಪನೆಗೆ ಮಾದರಿಯಾಗಿ ಕಾಣುವ ಅಬ್ದುಲ್ ಖಾದರ್ ಗೂನಡ್ಕ

ಗೂನಡ್ಕದ ಮುಖ್ಯ ರಸ್ತೆ ಬಳಿ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಒಂದು ವಿನೂತನ ಕಾರ್ಯ ಮಾಡಿದ್ದಾರೆ ಅಬ್ದುಲ್ ಖಾದರ್ ಗೂನಡ್ಕ.ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯ ರಸ್ತೆಯ ಬಳಿ ನೆಲೆಸಿರುವ ಅಂಗವಿಕಲರಾಗಿರುವ ಅಬ್ದುಲ್ ಖಾದರ್ ತನ್ನ ಬಿಡುವಿನ ಸಮಯದಲ್ಲಿ ರಸ್ತೆ ಬದಿ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಬೋರ್ಡ್ ಹಾಗೂ ಸ್ವಚ್ಛ ಭಾರತ ಯೋಜನೆಯ...

ಕಲ್ಮಕಾರು : ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ. ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟ ದುರ್ದೈವಿ. ಇವರ ಮನೆಯಿಂದ ಸಮೀಪದ ಕಾಡಿನಿಂದ ಪೈಪ್ ನಲ್ಲಿ ನೀರು ಬರುತ್ತಿತ್ತು. ಇಂದು ಶಿವರಾಮ ಗೌಡರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ....

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ವಿತರಣೆ

ಅಪಘಾತದಲ್ಲಿ ಕೈ ಕಳೆದುಕೊಂಡ ಲಲಿತಾ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ 2 ಲಕ್ಷ ರೂ ಮಂಜೂರಾಗಿದ್ದು, ಸಚಿವ ಎಸ್ ಅಂಗಾರ ಇಂದು ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ , ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಉಪಸ್ಥಿತರಿದ್ದರು.

ಎ.18 : ಬೆಳ್ಳಾರೆಯಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮ – ಆಮಂತ್ರಣ ಪತ್ರಿಕೆ ಬಿಡುಗಡೆ

ವಿಶ್ವ ಹಿಂದು ಪರಿಷದ್ ಭಜರಂಗದಳ, ಹಿಂದೂ ಜಾಗೃತ ಸಮಾವೇಶ ಸಮಿತಿ ಬೆಳ್ಳಾರೆ ವಲಯ ಇವರ ಸಹಯೋಗದೊಂದಿಗೆ ಶ್ರೀ ರಾಮೋತ್ಸವ ಕಾರ್ಯಕ್ರಮವು ಎ.18 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಎ.7 ರಂದು ಅಜಪಿಲ ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದಲ್ಲಿ ಪೂಜೆ ನಡೆಸಿದ ಬಳಿಕ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ...

ಗುತ್ತಿಗಾರು : ಮೂಲೆಗುಂಪಾಗಿರುವ ಸರ್ಕಾರಿ ಯೋಜನೆ – ವರ್ಷ ಕಳೆದರೂ ಉಪಯೋಗಕ್ಕೆ ಸಿಗದ ಜಿಮ್ ಕೇಂದ್ರ

ಗುತ್ತಿಗಾರು. ಎ.4: ಸರ್ಕಾರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಗುತ್ತಿಗಾರು ಗ್ರಾ.ಪಂ ಮೂಲಕ ಸ್ಥಾಪನೆಯಾದ ಗರಡಿ ಮನೆ. ಉದ್ಘಾಟನೆಗೊಂಡು ವರ್ಷ ಕಳೆದರೂ ಉಪಯೋಗಕ್ಕೆ ಸಿಗದ ಈ ಗರಡಿಮನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಗ್ರಾಮವಿಕಾಸ ಯೋಜನೆಯಲ್ಲಿ ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ಪಂಚಾಯತ್ ಗಳಿಗೆ ಸರಕಾರ ಸ್ಥಳೀಯ ಮಟ್ಟದಲ್ಲಿ ಜಿಮ್ ಸ್ಥಾಪನೆಗೆ ಅನುದಾನ ನೀಡಿತ್ತು. ಅದರಂತೆ...

ಎ. 19ರಂದು ಕಳಂಜದಲ್ಲಿ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ

ಸುಳ್ಯ ತಾಲೂಕು 2ನೇ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಮೇಳ ಎ. 19 ರಂದು ಕಳಂಜ ಗ್ರಾಮದ ಕೋಟೆಮುಂಡುಗಾರು ಶಾಲೆಯಲ್ಲಿ ನಡೆಯಲಿದೆ ಎಂದು ಒಡಿಯೂರು ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ ಹೇಳಿದರು.ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾರ್ಯಕ್ರಮದ ವಿವರ ನೀಡಿದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತುಳು ತಾಲೂಕು...

ಕಳಂಜ: ತುಳು ಸಾಹಿತ್ಯ ಸಮ್ಮೇಳನ, ಕೃಷಿ ಸಮ್ಮೆಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಳಂಜ ಗ್ರಾಮದ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ತುಳು ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ಸಮ್ಮೆಳನವು ಎ.19ರಂದು ನಡೆಯಲಿದ್ದು ಈ ಬಗ್ಗೆ ಏ.4 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆಯಿತು. ತುಳು ಸಮ್ಮೇಳನ ಅಧ್ಯಕ್ಷ ಸುಭಾಶ್ಚಂದ್ರ ರೈ, ತುಳು ತುಡರ್ ಕೂಟ ಸುಳ್ಯ ಇದರ ಅಧ್ಯಕ್ಷ ಜೆ.ಕೆ. ರೈ, ಕಾರ್ಯಾಧ್ಯಕ್ಷ ಕೂಸಪ್ಪಗೌಡ...
Loading posts...

All posts loaded

No more posts

error: Content is protected !!