ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ವ್ಯವಸ್ಥೆಯಿಂದ ನೂತನ ಶಿಕ್ಷಣ ಪದ್ದತಿಯೆಡೆಗೆ ಹೆಜ್ಜೆ – ಮುಂದಿನ ಪೀಳಿಗೆಗೆ ಇದು ಅವಶ್ಯಕ ವಿನಯ್ ಕುಮಾರ್ ಕಂದಡ್ಕ

ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ಈ ಮೊದಲಿತ್ತು. ಆದರೆ ಈ ಬಾರಿಯಿಂದ ನೂತನ ಶಿಕ್ಷಣ ಪದ್ದತಿ ಜಾರಿಯಾಗುತ್ತಿದೆ. ಹೊಸ ಶಿಕ್ಷಣ ಪದ್ದತಿಯಿಂದ ನಮ್ಮದೇ ಇತಿಹಾಸ, ವಾಸ್ತವ ಸಂಗತಿಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಹೇಳಿದರು. ಬೆಳ್ಳಾರೆ ಪಬ್ಲಿಕ್ ಸ್ಲೂಲ್ ನಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು...

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ – ಸುನಂದಾ ಜಿ ಯವರಿಗೆ ಸಚಿವ ಅಂಗಾರರಿಂದ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೇರಾಲು ಶಾಲಾ ಶಿಕ್ಷಕಿ ಸುನಂದ ಜಿ ಯವರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.
Ad Widget

ಸುಬ್ರಹ್ಮಣ್ಯ :- ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಸೆ.03 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು.ಸಭೆಯಲ್ಲಿ ಹಕ್ಕುಪತ್ರ ವಂಚಿತ ಕಡಬ ತಾಲೂಕಿನ ಬಡ ರೈತರಿಗೆ ಹಾಗೂ 94.C ಅಡಿಯಲ್ಲಿ ಅರ್ಜಿ ಕೊಟ್ಟ ವಸತಿ ರಹಿತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮುಂದಿನ ತಿಂಗಳು ಕಡಬ ತಾಲೂಕು ಕಛೇರಿ...

ಕಮಿಲ-ಬಳ್ಪ ರಸ್ತೆ ಅವ್ಯವಸ್ಥೆ : ತಕ್ಷಣ ದುರಸ್ತಿಗೆ ಒತ್ತಾಯ

ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯು ತೀರಾ ಅವ್ಯವಸ್ಥೆಯಿಂದ ಕೂಡಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ.ಯಾವುದೇ ವಾಹನಗಳು ಓಡಾಟ ಮಾಡದ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣವೇ ಸಂಬಂಧಿತ ಇಲಾಖೆ ತಾತ್ಕಾಲಿಕ ದುರಸ್ತಿ ಮಾಡಬೇಕು ಎಂದು ಗ್ರಾಮ ಭಾರತ ಟೀಂ ಅಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ ಹಾಗೂ ಸಂಚಾಲಕ ಸುಧಾಕರ ಮಲ್ಕಜೆ ಒತ್ತಾಯಿಸಿದ್ದಾರೆ. ಕಮಿಲ-ಬಳ್ಪ ರಸ್ತೆಯು ಅನೇಕ ವರ್ಷಗಳಿಂದ ತೀರಾ...

ಗುತ್ತಿಗಾರು : ಮನೆ ಮೇಲೆ ಮರ ಬಿದ್ದು ಹಾನಿ

ಗುತ್ತಿಗಾರು ಗ್ರಾಮದ ಚಿಕ್ಮುಳಿ ನಿವಾಸಿ ಕಾಯರ ಸೂರಪ್ಪ ಗೌಡರ ಮನೆ ಮೇಲೆ ಇಂದು ಬೆಳಿಗ್ಗೆ ಮರ ಬಿದ್ದು ಸಂಪೂರ್ಣ ಮನೆ ಹಾನಿಯಾಗಿದೆ.

ಮಕ್ಕಳೊಂದಿಗಿರುವ ಪ್ರತಿದಿನವೂ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯೇ

ಕಳೆದೆರಡು ವರ್ಷಗಳಿಂದೀಚೆಗೆ ಶೈಕ್ಷಣಿಕ ಕ್ಷೇತ್ರದಮೇಲೆ ಮಿಡತೆಯಹಿಂಡಿನಂತೆ ಕೊರೋನ ವೈರಸ್ ದಾಳಿ ನಡೆಸಿದೆ ಬರಿಯ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ ಪ್ರತಿಯೊಂದು ಕ್ಷೇತ್ರದಮೇಲೆ ಪರಿಣಾಮ ಬೀರಿದೆ ಶಾಲೆಗೆ ಮಕ್ಕಳುಬಾರದೆ ಎರಡು ವರ್ಷಗಳೇ ಕಳೆಯಿತು ದೇಶದ ಭವಿಷ್ಯ ತರಗತಿಯ ನಾಲ್ಕು ಗೋಡೆಯ ಮಧ್ಯೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಶಾಲಾ ಕಾಲೇಜು ಪುನರಾರಂಭ ಆಗುವ ಯಾವ ಸ್ಪಷ್ಟತೆಯು ಕಾಣುತ್ತಿಲ್ಲ ಭವಿಷ್ಯದ...

ಯುವಜನ ಸಂಯುಕ್ತ ಮಂಡಳಿ ವತಿಯಿಂದ ಕ್ರೀಡಾಧಿಕಾರಿ ವೆಂಕಟ್ರಮಣರಿಗೆ ಅಭಿನಂದನೆ

ಯುವಜನ ಸಂಯುಕ್ತ ಮಂಡಳಿಯ ಮಾಸಿಕ ಸಭೆಯು ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ ಯವರ ಅಧ್ಯಕ್ಷತೆಯಲ್ಲಿ ಸೆ.4 ರಂದು ಮಂಡಳಿಯ ಸಭಾಭವನ ದಲ್ಲಿ ನಡೆಯಿತುಸುಳ್ಯ ತಾಲೂಕಿನ ನೂತನ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ. ಎಸ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಂಡಳಿಯ ಗೌರವಧ್ಯಕರಾದ ಶಂಕರ ಪೆರಾಜೆ. ಪ್ರಧಾನಕಾರ್ಯದರ್ಶಿ ರಾಜೀವಿ ಲಾವಂತಡ್ಕ. ಕೋಶಾಧಿಕಾರಿ ವಿಜಯಕುಮಾರ್...

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ರೆಡ್ ಕ್ರಾಸ್ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ತಾಲೂಕು ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾಲಯ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಸುಳ್ಯ ತಾಲೂಕಿನ ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ...

ಶಮನಗೊಂಡ ಬಿಜೆಪಿ ಭಿನ್ನಮತ : ಮುಂದಿನ ಚುನಾವಣೆಯ ಸಂಘಟನೆಗೆ ಒತ್ತು- ಸುದರ್ಶನ ಮೂಡಬಿದಿರೆ ; ಒಗ್ಗಟ್ಟಿನ ಮಂತ್ರ ಜಪಿಸಿದ ಎಸ್.ಎನ್. ಮನ್ಮಥ

ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ೪ ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಯ...

ಸುಳ್ಯ : ಲಯನ್ಸ್ ಕ್ಲಬ್ ನೇತೃತ್ವದಲ್ಲಿ ವರ್ತಕರಿಗೆ ಕೋವಿಡ್ ಲಸಿಕಾ ಶಿಬಿರ

ಆರೋಗ್ಯ ಇಲಾಖೆ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ ಹಾಗೂನಗರ ಪಂಚಾಯತ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಸೆ.1 ರಂದು ಸುಳ್ಯ ನಗರದ ವರ್ತಕರಿಗಾಗಿ ಕೋವಿಡ್ -19 ಲಸಿಕಾ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷರಾದ ಲಯನ್ ಆನಂದ ಪೂಜಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವರ್ತಕರು ಸಾರ್ವಜನಿಕರು ಹಾಗೂ ಲಯನ್ಸ್ ಕ್ಲಬ್ ನ...
Loading posts...

All posts loaded

No more posts

error: Content is protected !!