ಐವರ್ನಾಡು : ಸೊಸೈಟಿ ವತಿಯಿಂದ ಸಿಮೆಂಟ್ ಮಾರಾಟ ವಿಭಾಗ ಆರಂಭ

ಐವರ್ನಾಡು ಪ್ರಾ.ಕೃ.ಪ.ಸಹಕಾರ ಸಂಘದ ವತಿಯಿಂದ ಸಿಮೆಂಟ್ ಮಾರಾಟ ವಿಭಾಗ ಪ್ರಾರಂಭವಾಗಿದ್ದು ಬಾಲಕೃಷ್ಣ ಕೀಲಾಡಿ ಉದ್ಘಾಟಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ವಹಿಸಿದ್ದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ಪಲ್ಲತ್ತಡ್ಕ, ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಚ್ಚುತ, ಕಟ್ಟಡ ಮಾಲಕರಾದ ಮಮತಾ ಸತೀಶ್, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು...

ಸವಿನ್ ಚಾಂತಾಳರಿಗೆ ಡಾಕ್ಟರೇಟ್

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಯಲ್ಲಿ ಉಪನ್ಯಾಸಕನಾಗಿರುವ ಸವಿನ್ ಸಿ. ಜಿ. ಯವರು ಮಂಡಿಸಿದ ಸಂಶೋಧನಾ ಪ್ರಬಂಧ ‘ Evaluation of hepatoprotecive activity of tuber extract of plant Actinoscitpus grossus (L. F.) Goetgh & D. A Simpson in wistar albino rats’ ಎಂಬ ವಿಷಯಕ್ಕೆ ಪ್ರತಿಷ್ಠಿತ...
Ad Widget

ಸುಬ್ರಹ್ಮಣ್ಯ : ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮದ ಪೂರ್ವಭಾವಿ ಸಭೆ

ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನಲ್ಲಿ ಮಾ.05 ಮತ್ತು 06 ರಂದು ಭಾರತೀಯ ಸಂಸ್ಕಾರ ಸಿಂಧು ಕಾರ್ಯಕ್ರಮ ನಡೆಯಲಿದ್ದು, ಪೂರ್ವಭಾವಿ ಸಭೆ ಫೆ.27 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ ಸಿಂಧು ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ, ಭಾರತೀಯ ಸಂಸ್ಕಾರ ಸಿಂಧು ಸಂಯೋಜಕಿ ಹರಿಣಿ ಪುತ್ತೂರಾಯ, ಭಾರತೀಯ ಸಂಸ್ಕಾರ ಸಿಂಧು ಶಿಬಿರದ ಸಂಪರ್ಕ ಪ್ರಮುಖ್ ಶ್ರೀಮತಿ ಸುಭಾಷಿಣಿ...

ಹರಿಹರ ಪಲ್ಲತ್ತಡ್ಕ :- ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಸೆ.27 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಪಲ್ಸ್ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಗಣ ಅವರು ತೀಕ್ಷಾ ಎಂಬ ಮಗುವಿಗೆ 2 ಹನಿ ಪೋಲಿಯೋ ಲಸಿಕೆ...

ಪಂಬೆತ್ತಾಡಿ : ಸ್ವಚ್ಛತಾ ಜಾಗೃತಿ ಹಾಗೂ ಶ್ರಮದಾನ

ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು, ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ,ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಮತ್ತು ಶ್ರಮದಾನ ಫೆ. 26 ರಂದು ಪಂಬೆತ್ತಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಾ ಮಹಿಳಾ...

ಸುಳ್ಯ: ತಾಲೂಕು ಅಕ್ಷರದಾಸೋಹ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮ – ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ.ಶಾಲೆಗೆ ಅಡುಗೆ ತಯಾರಿಯಲ್ಲಿ ಪ್ರಥಮ ಸ್ಥಾನ

ತಾಲೂಕು ಪಂಚಾಯತ್ ಸುಳ್ಯ ಅಕ್ಷರ ದಾಸೋಹ ಯೋಜನೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಾಹಾರ ಯೋಜನೆ ಇದರ ವತಿಯಿಂದ ಸುಳ್ಯ ತಾಲೂಕು ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿಯಲ್ಲಿ ನಡೆಸಲಾದ ಬೆಂಕಿ ರಹಿತ ಅಡುಗೆ ತಯಾರಿಯಲ್ಲಿ ಎಣ್ಮೂರು ಕ್ಲಸ್ಟರ್ ನ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಡುಗೆ ಸಿಬ್ಬಂದಿಗಳಾದ...

ಕಳಂಜ: ಅಟ್ಯಾಕರ್ಸ್ ಕ್ಲಬ್ ವಾಲಿಬಾಲ್ ಪಂದ್ಯಾಟ – ಪ್ರಥಮ ವಿ.ಎಸ್.ಸಿ.ಕಳಂಜ, ದ್ವಿತೀಯ ಪ್ರಶಾಂತ್ ಟೈಗರ್ಸ್

ಕಳಂಜದ ವಿಷ್ಣುನಗರದಲ್ಲಿ ಅಟ್ಯಾಕರ್ಸ್ ವಾಲಿಬಾಲ್ ಕ್ಲಬ್ ಕಳಂಜ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.26ರಂದು ನಡೆಯಿತು. ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಪ್ರಜ್ವಲನೆಗೈದು ಪಂದ್ಯಾಟಕ್ಕೆ ಶುಭಹಾರೈಸಿದರು. ಪಂದ್ಯಾಟವನ್ನು ವಿನಯಚಂದ್ರ ಪೈ ಬಾಚೋಡಿ ವಿದ್ಯುಕ್ತವಾಗಿ ಉದ್ಘಾಟನೆಗೈದರು. ಅಬ್ದುಲ್ ಜಮಾಲ್ ಕಳಂಜ ವಾಲಿಬಾಲ್...

ಪಾಲೆಪ್ಪಾಡಿ: ಪಲ್ಸ್ ಪೋಲಿಯೊ ಲಸಿಕೆ ವಿತರಣೆ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಕಾರ್ಯಕ್ರಮವು ಫೆ.27 ರಂದು ನಡೆಯಿತು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಅವರು ಉದ್ಘಾಟನೆ ಮಾಡಿದರು.

ಕಳಂಜ ವಿಷ್ಣುನಗರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ

ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಅಂಗವಾಗಿ ಕಳಂಜ ವಿಷ್ಣುನಗರದ ಅಕ್ಷರ ಕರಾವಳಿ ಕಟ್ಟಡದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಫೆ.27ರಂದು ನಡೆಯಿತು.

ದೇರಾಜೆ : ಪಲ್ಸ್ ಪೋಲಿಯೋ ಲಸಿಕೆ ವಿತರಣೆ

ಐವರ್ನಾಡು ಗ್ರಾಮದ ದೇರಾಜೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಫೆ.27 ರಂದು ನಡೆಯಿತು.
Loading posts...

All posts loaded

No more posts

error: Content is protected !!