ಪದವಿ ಪೂರ್ವ ಕಾಲೇಜು ಗುತ್ತಿಗಾರಿನ ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪದವಿ ಪೂರ್ವ ಶಿಕ್ಷಣ ಇಲಾಖೆ.ದ.ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು,ಸುಳ್ಯ ತಾಲೂಕು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 08/09/2022 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು...

ಸೇವಾಜೆ : ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ವತಿಯಿಂದ ಸಮೀಕ್ಷಾಳಿಗೆ ನೆರವು

ಸೇವಾಜೆಯ ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ವತಿಯಿಂದ ಅನಾರೋಗ್ಯಕ್ಕೆ ಒಳಗಾದ ಗುತ್ತಿಗಾರಿನ ಸಮೀಕ್ಷಾಳ ಚಿಕಿತ್ಸೆಗೆ ರೂ 5000 ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ಜಯದೀಪ್ ಕರಂಗಿಲಡ್ಕ ಮತ್ತು ಸದಸ್ಯರಾದ ಶ್ರೀಕಾಂತ್ ಬಳ್ಳಿಗುಂಡಿ ಉಪಸ್ತಿತರಿದ್ದರು.
Ad Widget

ಸಮೀಕ್ಷಾರವರ ಚಿಕಿತ್ಸೆಗಾಗಿ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಹಸ್ತಾಂತರಿಸಿದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಮನೆಯವರು ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದು, ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಹಲವಾರು ಸಂಘ ಸಂಸ್ಥೆಗಳು ಹಾಗೂ ಜನರು ಅವರಿಗೆ ಸಹಾಯಹಸ್ತ ಚಾಚುತ್ತಿದ್ದು, ಅದೇ ರೀತಿ ಅಮರ ತಾಲೂಕು...

ನೆಲ್ಲೂರು ಕೆಮ್ರಾಜೆ :- ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ನೆಲ್ಲೂರು ಕೆಮ್ರಾಜೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಗುತ್ತಿಗಾರು ವಲಯ ಮತ್ತು ಸ್ಪಂದನಾ ಸ್ತ್ರೀ ಶಕ್ತಿ ಗೊಂಚಲು ಸಮಿತಿ ನಾರ್ಣಕಜೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆ.08 ರಂದು ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ,...

ಉನ್ನತ ವ್ಯಾಸಂಗಕ್ಕೆ ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿರುವ ಸಮರ್ಥ್ ಚೂಂತಾರ್

ಉನ್ನತ ವ್ಯಾಸಂಗಕ್ಕಾಗಿ ಸಮರ್ಥ್ ಚೂಂತಾರ್ ಸೆ. 11ರಂದು ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿದ್ದಾರೆ. ಗಣಿತ ಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ವಿಜ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಜ್ಯೂರಿಕ್ ಯುನಿವರ್ಸಿಟಿ ಗೆ ತೆರಳಲಿದ್ದಾರೆ. ಮೆರಿಟ್ ಸೀಟು ಪಡೆದಿರುವ ಇವರು ಉಚಿತವಾಗಿ ಈ ಅರ್ಹತೆ ಪಡೆದಿದ್ದಾರೆ. ಎರಡು ವರ್ಷಗಳ ಕೋರ್ಸ್ ಇದಾಗಿದ್ದು ಭಾರತದಿಂದ ಆಯ್ಕೆಯಾದ...

ರೂಪದರ್ಶಿ, ಸುಳ್ಯದ ಕು.ಶ್ವೇತಾ ನಾಯಕ್ ರಚಿಸಿ, ನಿರ್ದೇಶಿಸಿ, ಅಭಿನಯಿಸಿದ “ಕುಂಞವಾವೆಂಟೆ ಮಾವೇಲಿ’ ಕಿರುಚಿತ್ರ ತೆರೆಗೆ

ರೂಪದರ್ಶಿ, ಸುಳ್ಯದ ಕು. ಶ್ವೇತಾ ನಾಯಕ್ ಎಂ. ಅವರು ರಚಿಸಿ, ಅಭಿನಯಿಸಿ, ನಿರ್ದೇಶಿಸಿದ ಓಣಂ ಹಬ್ಬದ ವೈಶಿಷ್ಟ್ಯ ಸಾರುವ 'ಕುಂಞವಾವೆಂಟೆ ಮಾವೇಲಿ' ಕಿರುಚಿತ್ರ ಬಿಡುಗಡೆಗೊಂಡಿದೆ.ಇದರಲ್ಲಿ ಚಾಲೆಂಜಿಂಗ್ ಆಗಿರುವ ದೃಶ್ಯವು ನೀರಲ್ಲಿ ಚಲಿಸುವ ದೋಣಿಯ ಮೇಲೆ ಕರ್ನಾಟಕ ಹಾಗೂ ಕೇರಳ ಶೈಲಿಯ ಸಾಂಪ್ರದಾಯಿಕ ನೃತ್ಯವನ್ನು ಹಾಗೂ ಪೂಕಳಂ, ತಿರುವಾದಿರಕಳಿ, ಓಣಂಸದ್ಯ ವನ್ನು ಮಾಡಿದ್ದಾರೆ. ಹೆಚ್ಚಿನ ದೃಶ್ಯಗಳನ್ನು ನೋಡಲು...

ಮರ ಕೊಯ್ಯುವ ಮಿಷನ್ ತಾಗಿ ಶಸ್ತ್ರಚಿಕಿತ್ಸೆಗೊಳಗಾದ ಕುಶಾಲಪ್ಪ ಜಾಲುಮನೆ ಅವರಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಣೆ

ಕೆಲವು ದಿನಗಳ ಹಿಂದೆ ಮಳೆಯಿಂದಾಗಿ ಬಾರಿ ಹಾನಿ ಸಂಭವಿಸಿದ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ಶ್ರಮ ಸೇವೆಯಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕುಶಾಲಪ್ಪ ಜಾಲುಮನೆ ಅವರ ಕಾಲಿಗೆ ಮರ ಕೊಯ್ಯುವ...

ಸೆ.10 ರಂದು ವಿದ್ಯಾ ನಿಧಿ ಸಹಾಯಧನ ವಿತರಣಾ ಸಮಾರಂಭ

ಆದರ್ಶ ವಿವಿಧೋದ್ದೇಶ ಸಹಕಾರ ಸಂಘ (ನಿ.) ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ಸಹಾಯಧನ ವಿತರಣಾ ಸಮಾರಂಭ ಸೆ.10 ರಂದು ಪುತ್ತೂರಿನ ದರ್ಬೆಯಲ್ಲಿರುವ ಸನ್ನಿಧಿ ಹಾಲ್ ಪ್ರಶಾಂತ್ ಮಹಲ್ ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ.ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ...

ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತದ ಐಕ್ಯತೆ ಮತ್ತು ಏಕತೆಗಾಗಿ ಹಮ್ಮಿಕೊಂಡಿರುವ ಸ್ವಾಂತಂತ್ರೋತ್ತರ ಭಾರತದ ಅಭೂತಪೂರ್ವ ಜನಾಂದೋಲನ ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3500 ಕಿ.ಮೀ ದೂರದ ಪಾದಯಾತ್ರೆ, ಇಂದು ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಿರ್ವಿಘ್ನವಾಗಿ ಯಶಸ್ವೀಯಾಗಲಿ ಎಂದು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ, ಬೀರಮಂಗಲದ ಸಂತ...

ಕುಕ್ಕೆಯಲ್ಲಿ ನಡೆದ ಕಡಬ ತಾಲೂಕು ಮಟ್ಟದ ಕ್ರೀಡಾಕೂಟ

ಏಕಾಗ್ರತೆ ಮತ್ತು ಶಿಸ್ತಿನ ಅನುಸರಣೆಯಿಂದ ಕ್ರೀಡಾಕ್ಷೇತ್ರದಲ್ಲಿ ಅಭ್ಯುದಯವಾಗಲು ಸಾಧ್ಯವಿದೆಸಾಧನೆಗೆ ಸ್ಥಿರವಾದ ಮನಸ್ಸು, ಏಕಾಗ್ರತೆ, ಸದೃಢ ದೇಹ ಅತ್ಯಗತ್ಯ. ಉತ್ತಮ ಆಹಾರ, ಉತ್ತಮ ನಡವಳಿಕೆ, ಉತ್ತಮ ಮನಸು ಎಂಬ ತ್ರಿವಳಿಗಳು ಜೀವನದಲ್ಲಿ ಸಾಧನೆಗೆ ಪೂರಕವಾಗಿದೆ‌. ಶ್ರಮ, ನಿಷ್ಠೆ, ಪರಿಶ್ರಮ, ಕ್ರೀಡೆಯಲ್ಲಿ ಆಸಕ್ತಿ ಬೇಕು. ಕ್ರೀಡೆಯಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶಿಸ್ತು ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾ...
Loading posts...

All posts loaded

No more posts

error: Content is protected !!