ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ರೋಟರಿ ಕಾಲೇಜ್ ನ ವಿದ್ಯಾರ್ಥಿನಿ ದಿಶಾಲಕ್ಷ್ಮೀ ವಿ ರಾಜ್ಯ ಮಟ್ಟಕ್ಕೆ ಆಯ್ಕೆ

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸೆ.9 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಕಾಲೇಜಿನ ವಿದ್ಯಾರ್ಥಿನಿ ದಿಶಾಲಕ್ಷ್ಮೀ ವಿ. ರಾಜ್ಯ ಮಟ್ಟದ ಸ್ಪರ್ಧೆ ಗೆ ಆಯ್ಕೆಗೂಂಡಿರುತ್ತಾಳೆ. ಇವಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಸಂಚಾಲಕರಾದ ರೊ. ಗಿರಿಜಾ ಶಂಕರ ತುದಿಯಡ್ಕ,...

ಬೆಳ್ಳಾರೆ ಜ್ಞಾನದೀಪದಲ್ಲಿ ಪೂ. ಪ್ರಾ. ಶಾಲಾ ಶಿಕ್ಷಕಿಯರ ಚೈತನ್ಯ ತರಬೇತಿ ಕಾರ್ಯಗಾರ

ಮಗುವನ್ನು ಝೀರೋದಿಂದ ಹೀರೋ ಮಾಡಿ : ವಂದನಾ ರೈ ಯಾವ ಮಗುವಿನಲ್ಲೂ ಬೇಧಭಾವ ಮಾಡದೆ ನಮ್ಮ ಮಗುವಿನಂತೆ ಪ್ರೀತಿ ತೋರಿಸಿ ಝೀರೋದಿಂದ ಹೀರೋ ಮಾಡುವ ಮಹತ್ತರ ಜವಾಬ್ಧಾರಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಮೇಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಹೇಳಿದರು.ಅವರು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ...
Ad Widget

ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿಗೆ ಸುಳ್ಯದ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ಸಾಹಿತಿ, ಕವಿ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕಿ ಡಾ ಅನುರಾಧ ಕುರುಂಜಿ ಇವರ ಅಪೂರ್ವ ಬಹುಮುಖ ಪ್ರತಿಭೆಯನ್ನು ಮಾನಿಸಿ ಕಾಸರಗೋಡಿನ ಕನ್ನಡ ಭವನ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ 2022 ಕ್ಕೆ ಆಯ್ಕೆ ಮಾಡಲಾಗಿದೆ. ದಿನಾಂಕ 11.9.2022 ರಂದು ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ...

ಪೆರಾಜೆ ಪ್ರಾಥಮಿಕ ಸಹಕಾರ ಸಂಘಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ

2021-22 ನೇ ಸಾಲಿನಲ್ಲಿ ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ಉತ್ತಮ ಸಾಧನೆ ಮಾಡಿದ್ದು ಇದಕ್ಕಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾದ ಅಶೋಕ ಪಿಎಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ...

ಸಮೀಕ್ಷಾರವರ ಚಿಕಿತ್ಸೆಗೆ ಅರುಣೋದಯ ಚಿಕನ್ಸ್ ಮಾಲಕರಿಂದ ಸಹಾಯಧನ ಹಸ್ತಾಂತರ

ಅರುಣೋದಯ ಚಿಕನ್ಸ್ ಕೊಪ್ಪಡ್ಕ ಇದರ ಮಾಲಕರಾದ ಪ್ರವೀಣ್ ಕೊಪ್ಪಡ್ಕರವರು ತಮ್ಮ ಅರುಣೋದಯ ಚಿಕನ್ಸ್ 19 ವರ್ಷ ಪೂರೈಸಿದ ಪ್ರಯುಕ್ತ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಹೆಸರಲ್ಲಿ 10 ಸಾವಿರ ರೂಪಾಯಿ ಸಹಾಯಧನವನ್ನು ಸೆ.08 ರಂದು ಸಮೀಕ್ಷಾರವರ ಮನೆಗೆ ತೆರಳಿ ವಿತರಿಸಿದರು. ಈ ಸಂದರ್ಭದಲ್ಲಿ ಅರುಣೋದಯ ಚಿಕನ್ಸ್ ಗೆ ಸಂಪೂರ್ಣ ಸಹಕಾರ ನೀಡುವ ಸಂಸ್ಥೆಯಾದ ಭಾರತ್ ಆಗ್ರೋವೇಟ್...

ಗುತ್ತಿಗಾರು : ವಾಹನಗಳ ಬಿಡಿಭಾಗಗಳ ಮಳಿಗೆ ಎಂ.ಕೆ.ಆಟೋಮೊಬೈಲ್ ಶುಭಾರಂಭ

ಗುತ್ತಿಗಾರಿನ ಶಾರದ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಕೊಪ್ಪತಡ್ಕ ಅವರ ಎಂ .ಕೆ ಅಟೋಮೊಬೈಲ್ಸ್ ಸೆ.8 ರಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಅನಿತಾ ಮಹೇಶ್, ಖುಷಿ ಕೆ.ಎಂ, ಅನುಷ್ ಕೆ ಎಂ, ಬಾಲಕೃಷ್ಣ ಗೌಡ ಕೊಪ್ಪತಡ್ಕ, ಗಿರಿಯಪ್ಪ ಗೌಡ ಶಿವಾಲ, ರಾಘವೇಂದ್ರ ಬೇಕರಿಯ ಮಾಲಕ ಅನಿಲ್ ಕುಮಾರ್, ಜಯಕುಮಾರ್ ದೇವ, ನಾರಾಯಣ ಗೌಡ ಬಟ್ಟೋಡಿ, ಸುಪ್ರಿತ್ ಗುಡ್ಡೆಮನೆ,...

ಐವರ್ನಾಡು: ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ

ಐವರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ಸೆ.09 ರಂದು ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ಸ.ಪ.ಪೂ.ಕಾಲೇಜು ಐವರ್ನಾಡು ಮತ್ತು ಸ.ಹಿ.ಪ್ರಾ.ಶಾಲೆ ಐವರ್ನಾಡು ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ಕಾರ್ಯಕ್ರಮ ನಡೆಯಿತು. ಖೋ...

ಪಂಜದಲ್ಲಿ ಮಹಾಲಕ್ಷ್ಮೀ ಟ್ರೇಡರ್ಸ್ ಶುಭಾರಂಭ

ಪಂಜದ ಮುಖ್ಯ ರಸ್ತೆಯ ಬಳಿಯಿರುವ ನಾರಾಯಣ ಕಾಂಪ್ಲೆಕ್ಸ್ ನ ಒಂದನೇ ಕೊಠಡಿಯಲ್ಲಿ ಸಮಾನ ಮನಸ್ಕರ ಪಾಲುದಾರಿಕೆಯೊಂದಿಗೆ "ಮಹಾಲಕ್ಷ್ಮೀ ಟ್ರೇಡರ್ಸ್ ಅಡಿಕೆ, ಕೃಷಿ ಉತ್ಪನ್ನ ಕಾಡು ಉತ್ಪತ್ತಿಗಳ ಖರೀದಿ ಕೇಂದ್ರವು ಸೆ.9 ರಂದು ಶುಭಾರಂಭ ಗೊಂಡಿತು.ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ, ಜನಪ್ರಿಯ ವೈದ್ಯರಾದ ಡಾ.ರಾಮಯ್ಯ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು.ಹಿರಿಯ ಪ್ರಗತಿ ಪರ ಕೃಷಿಕರಾದ ಬಿ ಎಂ...

ಐನೆಕಿದು :- ಹಾಲುತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಐನೆಕಿದು ಹಾಲುತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.08 ರಂದು ಅಮೃತ ಸಂಭ್ರಮ ಸಭಾಭವನ ಐನೆಕಿದು ಇಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರೇಮಾ.ಕೆ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ ಹಾಲು ಒಕ್ಕೂಟ ಸುಳ್ಯ ಇದರ...

ಎನ್ನೆಂಸಿಯಲ್ಲಿ ಕಾಲೇಜು ವಾರ್ಷಿಕೋತ್ಸವ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 25ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ), ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದರು ಅಧ್ಯಕ್ಷತೆ ವಹಿಸಿ ಮಾತನಾಡಿ, 'ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಾಗ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ' ಎಂದರು. ಮುಖ್ಯ ಅತಿಥಿಯಾಗಿ...
Loading posts...

All posts loaded

No more posts

error: Content is protected !!