ಪಿಂಡಿಮನೆ : ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

ಅರಂತೋಡು ಮರ್ಕಂಜ ರಸ್ತೆಯ ಚುಕ್ರಡ್ಕ ಹಾಗೂ ಪಿಂಡಿಮನೆ ಬಳಿ ರಸ್ತೆಯಲ್ಲಿ ಜ.10ರಂದು ರಾತ್ರಿ ಕಾಡಾನೆ ಇದೆ ಎಂದು ವಾಹನ ಸವಾರರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಚಿರತೆ  ಕೂಡ ಕಾಣಸಿಕ್ಕಿದೆ. ಈ ರಸ್ತೆಯಲ್ಲಿ  ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಿಬೇಕಿದೆ.

ಜ.11ರಂದು ಸುಳ್ಯ ಜಾತ್ರೆಯಲ್ಲಿ ಅಸಕ್ತ ಬಡ ಕುಟುಂಬಗಳಿಗಾಗಿ ಸೇವಾ ನಿಧಿ ಯೋಜನೆಗೆ ಚಾಲನೆ

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಯುವ ಶಕ್ತಿ ಸೇವಾ ಪಥದ ಸುಳ್ಯ ಸೇವಾಶ್ರಯ ಸೇವಾ ನಿಧಿ ಯೋಜನೆಯಲ್ಲಿಅಸಕ್ತ ಬಡ ಕುಟುಂಬಗಳಿಗೆ ನೆರವಿನ ಹಸ್ತ ನೀಡಲು ಚಾಲನೆ ನೀಡಲಿದ್ದಾರೆ. ಯುವ ಬ್ರಿಗೇಡ್ ಸುಳ್ಯ,ಅರಂತೋಡು ಅಡ್ತಲೆ, ಸ್ಪಂದನ ಗೆಳೆಯರ ಬಳಗ‌ ಹಾಗೂ ಯುವ ಶಕ್ತಿ ಸೇವಾ ಪಥದ ನೇತೃತ್ವದಲ್ಲಿ‌ ಸೇವಾ ಕಾರ್ಯ ನಡೆಯಲಿರುವುದು. ಅಸಕ್ತರನ್ನು ಶಕ್ತರನ್ನಾಗಿಸುವ ಯೋಜನೆಗೆ...
Ad Widget

ಜ.15-22; ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವರ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.15 ರಿಂದ ಜ.21 ರ ತನಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಜ.10 ರಂದು ಗೊನೆ ಮುಹೂರ್ತ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ...

ಮಿತ್ತೂರು ನಾಯರ್ ಭಂಡಾರ ತಂಗುವ ಕಟ್ಟೆಯ ಆವರಣದ ಬದಿಗೆ ನ.ಪಂ.ನಿಂದ ಇಂಟರ್‌ಲಾಕ್ ಅಳವಡಿಕೆ

ಗಾಂಧಿನಗರದಲ್ಲಿರುವ ಕಲ್ಕುಡ ದೈವಸ್ಥಾನದ ಎದುರು ಭಾಗದಲ್ಲಿ ಮಿತ್ತೂರು ನಾಯರ್ ದೈವದ ಭಂಡಾರ ಬಂದು ನಿಲ್ಲುವ ಕಟ್ಟೆಯ ರಸ್ತೆ ಬದಿಗೆ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರು ಇಂಟರ್‌ಲಾಕ್ ಹಾಕಿಸಿದ್ದಾರೆ. ನ.ಪಂ. ಆಡಳಿತಾಧಿಕಾರಿ ತಹಶೀಲ್ದಾರ್ ಜಿ.ಮಂಜುನಾಥ್ ಹಾಗೂ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ರವರೊಡನೆ ವಿನಂತಿಸಿಕೊಂಡು ಅನುದಾನ ಮಂಜೂರು ಮಾಡಿಸಿಕೊಂಡು ಇಂಟರ್‌ಲಾಕ್ ಕಾಮಗಾರಿ ನಡೆಸಿರುವುದಾಗಿ ಶರೀಫ್ ಕಂಠಿ ತಿಳಿಸಿದ್ದಾರೆ.ಜ.10 ರಂದು...

ಡಾ.ಕೆ.ವಿ.ಚಿದಾನಂದ, ಡಾ.ಜ್ಯೋತಿ ರೇಣುಕಾಪ್ರಸಾದ್ , ಅಕ್ಷಯ್ ಕೆ ಸಿ ಮತ್ತಿತರರ ಮೇಲೆ ಸೆಕ್ಷನ್ 107 ಕೇಸು ದಾಖಲು . ವಿಚಾರಣೆ ಮುಂದೂಡಿದ ತಹಶೀಲ್ದಾರ್.

ಡಾ.ಕೆ.ವಿ.ಚಿದಾನಂದ, ಅಕ್ಷಯ ಕೆ.ಸಿ., ಶೋಭಾ ಚಿದಾನಂದ, ಡಾ.ಜ್ಯೋತಿ ರೇಣುಕಾಪ್ರಸಾದ್,, ಡಾ.ಉಜ್ವಲ್ ಯು.ಜೆ.ಯವರ ಮೇಲೆ ಸೆಕ್ಷನ್ 107 ರ ಪ್ರಕಾರ ಕೇಸು ದಾಖಲಿಸಿರುವ ಸುಳ್ಯ ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯವು ಜ. 1೦ರಂದು ಅಪರಾಹ್ನ ಸ್ವತಃ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು ಇದೀಗ ಈ ಪ್ರಕರಣವನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ. ಸುಳ್ಯ ಪೊಲೀಸ್ ಉಪನಿರೀಕ್ಷಕರ ವರದಿಯ...

ಸುಬ್ರಹ್ಮಣ್ಯ; ರೋಟರಿ ಕ್ಲಬ್ ಇದರ ಪದಾಧಿಕಾರಿಗಳ ಸಭೆ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವಿಶೇಷ ಸಭೆಯು ರೋಟರಿ ಕ್ಲಬ್ನ ಪೂರ್ವ ಅಧ್ಯಕ್ಷರಾದ ಗೋಪಾಲ್ ಎಣ್ಣೆ ಮಜಲ ಇವರ ಮನೆಯಲ್ಲಿ ದಿನಾಂಕ08/01/2024 ನಡೆಯಿತು ಸಭೆಯಲ್ಲಿ ಮುಂದಿನ 24 /25 ಸಾಲಿನ ಅಧ್ಯಕ್ಷರಾಗಿ ರೋಟೇರಿಯನ್ ಚಂದ್ರಶೇಖರ್ ನಾಯರ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಚಿದಾನಂದ ಕುಳ ಇವರನ್ನು ಆಯ್ಕೆ ಮಾಡಲಾಯಿತು, ಮತ್ತು ರೋಟರಿ ಕ್ಲಬ್ ನ ನಿಕಟ...

ಸುಳ್ಯ ಪ್ರತಿಷ್ಠಿತ ಸಿ.ಎ ಬ್ಯಾಂಕ್ ಅಧ್ಯಕ್ಷ , ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಸನ್ಮಾನ

ಸುಳ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಸಿ ಎ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆ ಇದೀಗ ನಡೆದು ಅವಿರೋಧ ಆಯ್ಕೆಯ ಮೂಲಕ ಅಧ್ಯಕ್ಷರಾಗಿ ವಿಕ್ರಂ ಎ ವಿ ಅಡ್ಪಂಗಾಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ಆಯ್ಕೆಯಾದರು. ಅಲ್ಲದೇ 10 ಮಂದಿ ನಿರ್ದೇಶಕರುಗಳನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ನಗರ...

ಸಿ ಎ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎನ್ ಎ ರಾಮಚಂದ್ರ ರಾಜಿನಾಮೆ ಸಲ್ಲಿಕೆ

ಸುಳ್ಯ ಪ್ರತಿಷ್ಠಿತ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದಂತೆ ತಮಗೆ ಅಧ್ಯಕ್ಷ ಪದವಿ ನೀಡಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಹಿರಿಯ ನಾಯಕರಾದ ಎನ್ ಎ ರಾಮಚಂದ್ರ ರವರು ಇದೀಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುದರ್ಶನ್ ರವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಇದೀಗ ಸಲ್ಲಿಸಿದ್ದು ಕಾರಣ ಏನೆಂದು...

ಸುಳ್ಯ ಪ್ರತಿಷ್ಠಿತ ಸಿಎ ಬ್ಯಾಂಕ್ ಅಧ್ಯಕ್ಷರಾಗಿ ವಿಕ್ರಂ ಅಡ್ಪಂಗಾಯ ಆಯ್ಕೆ

ಸುಳ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಸಿ ಎ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆ ಇದೀಗ ನಡೆದು ನೇರ ಆಯ್ಕೆಯ ಮೂಲಕ ಅಧ್ಯಕ್ಷರಾಗಿ ವಿಕ್ರಂ ಎ ವಿ ಅಡ್ಪಂಗಾಯ ಆಯ್ಕೆಯಾದರು ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ಆಯ್ಕೆಯಾದರು ಈ ಸಂದರ್ಭದಲ್ಲಿ ನಿರ್ಧೆಶಕರು ಚುನಾವಣಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ಜಾತ್ರೆ : ಮಳೆಯಿಂದ ಕಂಗಾಲಾದ ಜಾತ್ರಾ ವ್ಯಾಪಾರಸ್ಥರಿಗೆ ಬಾಡಿಗೆ ರಿಯಾಯಿತಿ ನೀಡಲು ಮನವಿ

ಈ ಬಾರಿ ಸುಳ್ಯ ಜಾತ್ರೆಯಲ್ಲಿ ಪ್ರತಿದಿನವೂ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿಯುತ್ತಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಸ್ಥಳ ಬಾಡಿಗೆ ನೀಡಿ ತಾತ್ಕಾಲಿಕ ಅಂಗಡಿ ಕೋಣೆ ನಿರ್ಮಿಸಿ, ಲಕ್ಷ ಲಕ್ಷ ರೂಗಳ ಬಂಡವಾಳ ಹಾಕಿ ಜಾತ್ರೆಯ ವ್ಯಾಪಾರಕ್ಕೋಸ್ಕರ ಕುಳಿತ ವ್ಯಾಪಾರಿಗಳು ಒಂದು ಕಡೆ ಧಾರಾಕಾರ ಮಳೆಯಿಂದಾಗಿ ಅಂಗಡಿಗಳನ್ನು ತೆರೆಯಲಾಗದೆ ಕುಳಿತಿದ್ದು ಇನ್ನೊಂದು ಎಡೆ ಮಳೆಯ...
Loading posts...

All posts loaded

No more posts

error: Content is protected !!