- Sunday
- August 23rd, 2026
ಕಾಂತಮಂಗಲದಲ್ಲಿರುವ ಬಾಡಿಗೆ ಮನೆಗಳಿರುವ ಸಂಕೀರ್ಣದ ಹಿಂಬದಿ ಜಾಗದಲ್ಲಿದ್ದು ಕಸ ಹಾಗೂ ಒಣಗಿದ ಹುಲ್ಲುಗಳಿಗೆ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.
ಗುತ್ತಿಗಾರಿನ ಪೈಕ ಎಂಬಲ್ಲಿ ಇಂದು ಬೀಸಿದ ಭಾರಿ ಗಾಳಿಯಿಂದ ಮಾಲತಿ ಎಂಬ ಮಹಿಳೆಯ ಮನೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಗುಡಿಸಲು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ , ಪಿಡಿಓ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸುರೇಶ ವಿ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ ಭಾಗ್ಯಜ್ಯೋತಿ ಕೆ. ಎಲ್ ಅವರು ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಮೈನರ್ ಡಿಗ್ರಿ ಸರ್ಟಿಫಿಕೇಷನ್ ಅಂಡ್ ಸ್ಕಿಲ್ ಎನ್ಹ್ಯಾನ್ಸ್ಮೆಂಟ್ ಪ್ರೊಗ್ರಾಮ್ ಇದರ ಬೋರ್ಡ್ ಆಫ್ ಎಕ್ಸಾಮಿನರ್ಸ್ ಆಗಿ ನಾಮನಿರ್ದೇಶನಗೊಳಿಸಿ ವಿಟಿಯು ಬೆಳಗಾವಿ ಆದೇಶಿಸಿದೆ. ಇದಕ್ಕೆ ಕಾಲೇಜಿನ...
ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿರುವ ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೂರನೇ ವರ್ಷದ ಯುಗಾದಿ ವಿಶೇಷಾಂಕವನ್ನು ಹೊರತಂದಿದೆ. ಏ. 08 ರಂದು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಯುಗಾದಿ ವಿಶೇಷಾಂಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ...
ಸುಳ್ಯ: ಸುಳ್ಯ ತಾಲೂಕಿನ ಮಂಡಕೋಲು ಗ್ರಾಮದ ಮಹಿಳೆಯೋರ್ವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಇಂದಿರ 74 ಎಂದು ತಿಳಿದು ಬಂದಿದ್ದು ಇವರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಗಲಿದ್ದಾರೆ. ಆತ್ಮಹತ್ಯೆಗೆ ಮೊಣಕಾಲಿನ ಚಿಪ್ಪು ನೋವು ಮತ್ತು ಮೂರು ವರ್ಷಗಳ ಹಿಂದೆ ಪತಿಯ ಮರಣ...
ಜರ್ಮನಿಯ ಬರ್ಲಿನ್ನಲ್ಲಿ ಎ.19 ರಿಂದ 22 ರವರೆಗೆ ನಡೆಯಲಿರುವ ವಿಕಿಮೀಡಿಯ ಸಮಿತ್ 2024ಕ್ಕೆ ಅರೆಬಾಸೆ ಅಕಾಡೆಮಿ ಮಾಜಿ ಸದಸ್ಯ ಭರತೇಶ್ ಅಲಸಂಡೆಮಜಲು ಅಯ್ಕೆಯಾಗಿದ್ದಾರೆ. ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸಕ್ರೀಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮಿಳನವನ್ನು ಪ್ರತಿನಿಧಿಸಲಿದ್ದಾರೆ. ಈ ವಿಕಿಮೀಡಿಯನ್ ಸಮಿತ್ನಲ್ಲಿ 100ಕ್ಕಿಂತ ಹೆಚ್ಚು ದೇಶಗಳ 150ಕ್ಕಿಂತ...
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 19 ನೇವರ್ಷದ ಸೌಹಾರ್ಧ ಇಪ್ತಾರ್ ಕೂಟವು ಎಪ್ರಿಲ್ 8 ರಂದು ಅರಂತೋಡು ತೆಕ್ಕಿಲ್ ಸಮುದಾಯಭವನದಲ್ಲಿ ಸಂಸ್ಥೆಯ ಸ್ಥಾಪಕರಾದ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಸ್ಥಳೀಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಲಿದ್ದು ಸಾಮಾಜಿಕ, ಧಾರ್ಮಿಕ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ...
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಬಳ್ಪ ಹಾಗೂ ಕೇನ್ಯ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯು 05 ರಂದು ಚಂದ್ರಶೇಖರ ಅಕ್ಕೇನಿಯವರ ತೋಟದ ಮನೆಯಲ್ಲಿ ಉಸ್ತುವಾರಿಗಳಾದ ಅಶೋಕ್ ನೆಕ್ರಾಜೆ ಅವರ ಉಸ್ತುವಾರಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಯಕ್ರಮಗಳನ್ನು ಮನೆಮನೆಗೆ ತೆರಳಿ...
ಅಂತಾರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ ಕೇರಳದ ನಾಲ್ವರು ಹಾಗೂ ಕರ್ನಾಟಕದ ಇಬ್ಬರಿಗೆ ಪ್ರಶಸ್ತಿ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನದವರು ನಡೆಸಲಿರುವ ಕೇರಳ ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕೋತ್ಸವ 2024ರಲ್ಲಿ ಕೊಡ ಮಾಡಲಿರುವ ಶತಶೃಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ....
Loading posts...
All posts loaded
No more posts
