ಮಾಯಿಲಪ್ಪ ಗೌಡ ಕಣಿಪ್ಪಿಲ ನಿಧನ

ಐವರ್ನಾಡು ಗ್ರಾಮದ ಕಣಿಪ್ಪಿಲ ಮಾಯಿಲಪ್ಪ ಗೌಡ ಮೇ.18 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಿರಿಜಾ, ಪುತ್ರಿಯರಾದ ಶ್ರೀಮತಿ ಚೈತ್ರಾ, ಕು.ವಿದ್ಯಾರಾಣಿ, ಕು. ಗಾಯತ್ರಿ , ಅಳಿಯ ಲೋಕೇಶ್ ದೇವರಗುಂಡ ಅವರನ್ನು ಅಗಲಿದ್ದಾರೆ.

ಸುಳ್ಯ :  ವಿದ್ಯಾರ್ಥಿನಿಯ ಜತೆ ಅನುಚಿತವಾಗಿ ವರ್ತಿಸಿದ ಯುವಕ – ಮನೆಯವರು ಬಂದಾಗ ಪರಾರಿ – ದೂರು ದಾಖಲು

ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ ಮೇ. 21 ರಂದು ನಡೆದಿದ್ದು,  ವಿದ್ಯಾರ್ಥಿನಿ ತಂದೆಗೆ ಮಾಡಿ ಕರೆಸಿಕೊಂಡಾಗ ಆ ಯುವಕ ಓಡಿ ಪರಾರಿಯಾದ ಎನ್ನಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಕಲ್ಲುಮುಟ್ಲು ಕಡೆಯ ಯುವತಿಯೊಬ್ಬಳು...
Ad Widget

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ‌ ಮಂಗಳೂರು ವಿ.ವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ-
ಚಾಂಪಿಯನ್ ಪಟ್ಟ ಉಳಿಸಿಕೊಂಡ ಆಳ್ವಾಸ್ ಕಾಲೇಜು ಮೂಡಬಿದಿರೆ

ಉದ್ಘಾಟನಾ ಸಮಾರಂಭಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಕಾಲೇಜಿನ ಮೈದಾನದಲ್ಲಿ ಮೇ-21ರಂದು ನಡೆಯಿತು. ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಪಂದ್ಯಾಟವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ...

ಕುಕ್ಕುಜಡ್ಕ: ಖಂಡಿಗೆಮೂಲೆಯಲ್ಲಿ ರಸ್ತೆಗುರುಳಿದ  ಮರ,   ಸಂಚಾರ ವ್ಯತ್ಯಯ

ರಾತ್ರಿ ಸುರಿದ ಮಳೆಗೆ ಮರವೊಂದು ರಸ್ತೆಗೆ ಉರುಳಿದ ಘಟನೆ ಕುಕ್ಕುಜಡ್ಕ  ರಸ್ತೆಯ ಖಂಡಿಗೆಮೂಲೆಯಲ್ಲಿ ನಡೆದಿದೆ. ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಹಲ್ಲುಜ್ಜಲು ಮರೆತರೆ ಆಲ್‍ಝೈಮರ್ಸ್ ಬಂದೀತು ಜೋಕೆ !!!

ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಅದರಿಂದ ವ್ಯಕ್ತಿಯ ಮಾನಸಿಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ವಸಡಿನ ರೋಗಕ್ಕೆ ನಾಂದಿ...

ಸೋರಿಯಾಸಿಸ್- ಚರ್ಮದ ಕಾಯಿಲೆ

ಸೋರಿಯಾಸಿಸ್ ಎಂಬುದು ದೀರ್ಘಕಾಲೀನ ಚರ್ಮದ ಕಾಯಿಲೆ. ತುರಿಕೆ, ಅಲ್ಲಲ್ಲಿ ಚರ್ಮದ ಪದರ ಎದ್ದು ಬರುವುದು ಇತ್ಯಾದಿ ಲಕ್ಷಣಗಳಿಂದ ಕೂಡಿರುತ್ತದೆ. ವಿಶೇಷವಾಗಿ ಮೊಣಕೈ, ಮೊಣಕಾಲು, ಎದೆ ಮತ್ತು ಹೊಟ್ಟೆಯ ಭಾಗ, ತಲೆಯ ನೆತ್ತಿಯ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದು ನೋವಿನಿಂದ ಕೂಡಿರಬಹುದು ಅಥವಾ ನೋವು ಇಲ್ಲದೇ ಇರಬಹುದು. ನಿದ್ರೆಗೆ ಅಡ್ಡಿಪಡಿಸಬಹುದು. ಕೆಲಸಕ್ಕೆ ಗಮನ ಕೊಡಲು ಕಷ್ಟ...

ಸುಬ್ರಹ್ಮಣ್ಯ : ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ದ.ಕ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಆನಂದಾಶ್ರಮ ಸೇವಾ ಟ್ರಸ್ಟ್(ರಿ.) ಪುತ್ತೂರು ಇವರ ಸಹಭಾಗಿತ್ವದಲ್ಲಿ ಮೇ.21 ರಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ...

ನಾಳೆ(ಮೇ.23) ಕೆಲವೆಡೆ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ವ್ಯಾಪ್ತಿಯ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕಲ್ಲುಗುಂಡಿ ಫೀಡರ್ ನ ಕೇಬಲ್ ನ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ 11ಕೆ.ವಿ‌. ಡಿಪ್ಪೋ, ತೊಡಿಕಾನ ಹಾಗೂ ಕಲ್ಲುಗುಂಡಿ ಫೀಡರುಗಳಲ್ಲಿ ಮೇ. 23 ರಂದು ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ...

ಅರಂತೋಡು ಅಡ್ತಲೆ ರಸ್ತೆಯಲ್ಲಿ ಪ್ರತಿನಿತ್ಯ ಬೀಳುತ್ತಿರುವ ವಿದ್ಯುತ್ ಕಂಬಗಳು – ಹಲವಾರು ದಿನಗಳಿಂದ ಕತ್ತಲಲ್ಲೇ ಕಾಲ ಕಳೆಯುತ್ತಿರುವ ಜನತೆ – ಶಾಸಕರ ಮಾತಿಗೂ ಕ್ಯಾರೇ ಮಾಡದ ಅಧಿಕಾರಿಗಳ ವಿರುದ್ಧ ದೂರು

ಅರಂತೋಡಿನಲ್ಲಿ ನಡೆದ ವಿದ್ಯುತ್ ಅದಾಲತ್ ನಲ್ಲಿ ಶಾಸಕರ ಸಮ್ಮುಖದಲ್ಲಿ, ಅರಂತೋಡು ತೊಡಿಕಾನ ಅವಳಿ ಗ್ರಾಮದ ಜನಪ್ರತಿನಿದಿನಗಳು, ವಿದ್ಯುತ್ ಪಲಾನುಭವಿಗಳು, ಮೆಸ್ಕಾಂ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ, ಮಳೆಗಾಲ ಪ್ರಾರಂಭ ಆಗುವ ಮೊದಲು, ವಿದ್ಯುತ್ ಲೈನ್ ಗೆ ಹತ್ತಿರ ಇರುವ, ಬಳ್ಳಿ ಹಾಗೂ ಮರದ ಕೊಂಬೆಗಳನ್ನು ಕಡಿದು ಸ್ವಚ್ಛ ಗೊಳಿಸಬೇಕು. ಸಣ್ಣ...

ಮಂಡೆಕೋಲು: ತನ್ನ ಮನೆಗೆ ಸೇರಿಸುವಂತೆ ತಹಶೀಲ್ದಾರ್  ಅವರಿಗೆ ದೂರು ನೀಡಿದ  ವೃದ್ಧೆ – ಮಗ,ಸೊಸೆಗೆ ಬುದ್ಧಿವಾದ ಹೇಳಿ ಮನೆಗೆ ಸೇರಿಸಿದ ಅಧಿಕಾರಿಗಳು

ಸುಳ್ಯ : ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರಾಜೆ ಎಂಬಲ್ಲಿನ ಶೇಷಮ್ಮ ಎಂಬ ಹಿರಿಯ ವೃದ್ದೆಯು ತಹಶೀಲ್ದಾರ್ ಅವರಿಗೆ ಮನವಿ ಮಾಡಿ ತನ್ನ ಮಗ ಮತ್ತು ಸೊಸೆ ಮನೆಯಿಂದ ಹೊರಹಾಕಿದ್ದು ನನ್ನನ್ನು ಮನೆ ಸೇರಿಸಬೇಕು ಎಂದು ಕೇಳಿಕೊಂಡ ಮೇರೆಗೆ ಅಧಿಕಾರಿ ವರ್ಗವು ಇಂದು ಅಜ್ಜಿಯ ಮನೆಗೆ ತೆರಳಿ ಮಕ್ಕಳು ಮತ್ತು ಸೊಸೆಯನ್ನು ಮನವೊಲಿಸಿ ಮನೆಗೆ ಸೇರಿಸಿದ...
Loading posts...

All posts loaded

No more posts

error: Content is protected !!