ಗುತ್ತಿಗಾರು : ಸೇವಾ ನಿವೃತ್ತಿ ಪಡೆದ ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕುಮಾರ್ ಸಿ.ಎಚ್ ಅವರಿಗೆ ಬೀಳ್ಕೊಡುಗೆ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತರಾದ ಕುಮಾರ್ ಸಿ.ಎಚ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷರಾದ ಕಿಶೋರ್ ಅಂಬೆಕಲ್ಲು , ಸಿಇಓ ಶರತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಪಾಜೆ : ಅನಾಥೆಯಾಗಿದ್ದ ಒಂಟಿ ಜೀವಕ್ಕೆ ಪುನರ್ವಸತಿ ಕೇಂದ್ರದ ಆಸರೆ 

ಸಂಪಾಜೆಯ ಗಡಿಕಲ್ಲು ದಿ. ಸೋಮಪ್ಪ ಗೌಡ ಇವರ ಪತ್ನಿ ವಿಮಲ ಕೆ ಎಮ್ (74) ವಯೋ ಸಹಜ ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಮಕ್ಕಳು ಇಲ್ಲದೆ ಅನಾಥೆಯಾಗಿ ಜೀವನ ನಡೆಸುತ್ತಿದ್ದರು. ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಹೃದಯಿಗಳ ಸಹಕಾರದಿಂದ ಇವರನ್ನು ಹೆಚ್ಚಿನ ಆರೈಕೆಗಾಗಿ ಮತ್ತು ಪುನರ್ವಸತಿಗಾಗಿ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಪ್ರಯತ್ನಿಸಲಾಗಿತ್ತು. ಇದೀಗ ಜಿಲ್ಲಾ ವಿಕಲಚೇತನ ಕಲ್ಯಾಣ...
Ad Widget

ಸುಬ್ರಹ್ಮಣ್ಯ : ಕೆ.ಎಸ್.ಎಸ್.ಕಾಲೇಜಿನ ಉಪನ್ಯಾಸಕಿ ಮಧುರ ಕೆ.ಎಸ್.ಇ.ಟಿ ಪರೀಕ್ಷೆಯಲ್ಲಿ ತೇರ್ಗಡೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಮಧುರ.ಕೆ ಇವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ KSET ಪರೀಕ್ಷೆ ಯಲ್ಲಿ ತೇರ್ಗಡೆಯಾಗಿದ್ದಾರೆ .

ಸುಳ್ಯ; ಎನ್ನೆಂಸಿ ಪದವಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ನಮ್ಮಲ್ಲಿ ತಾಳ್ಮೆ, ನೈತಿಕ ಮೌಲ್ಯಗಳು ಇದ್ದಷ್ಟು ಸಾಧಿಸುವ ಶಕ್ತಿ ಹೆಚ್ಚುತ್ತದೆ. ಜೀವನದ ಅನುಭವಗಳನ್ನು ಯಶಸ್ಸನ್ನು ಗಳಿಸಲು ಮಾರ್ಗದರ್ಶಿಯಾಗಿ ಬಳಸಿಕೊಳ್ಳಬೇಕು. ಒಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಕಾಲೇಜು ಮತ್ತು ಉಪನ್ಯಾಸಕರು ಪ್ರಾಮುಖ್ಯ. ಜೀವನದಲ್ಲಿ ಸತ್ಯ ನಿಷ್ಟೆ ಯಶಸ್ಸು ಪಡೆಯುವಿರಿ. ನಾವು ವಿನಯವಂತರಾಗಿರಬೇಕು ಆದರೆ ದೈನ್ಯತೆ ಇರಬಾರದು. ನಿಷ್ಠುರವಾದಿಯಾಗಿರಬೇಕು ದ್ವೇಷ ಬೆಳೆಸಿಕೊಳ್ಳಬಾರದು. ಶೈಕ್ಷಣಿಕ ಜೀವನದಲ್ಲಿ ಯೋಜನೆಯನ್ನು ಮಾಡಿಕೊಳ್ಳಬೇಕು. ಅವಕಾಶಗಳನ್ನು...

ಸುಳ್ಯ; ಎನ್ನೆಂಸಿ ಪದವಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ನಮ್ಮಲ್ಲಿ ತಾಳ್ಮೆ, ನೈತಿಕ ಮೌಲ್ಯಗಳು ಇದ್ದಷ್ಟು ಸಾಧಿಸುವ ಶಕ್ತಿ ಹೆಚ್ಚುತ್ತದೆ. ಜೀವನದ ಅನುಭವಗಳನ್ನು ಯಶಸ್ಸನ್ನು ಗಳಿಸಲು ಮಾರ್ಗದರ್ಶಿಯಾಗಿ ಬಳಸಿಕೊಳ್ಳಬೇಕು. ಒಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಕಾಲೇಜು ಮತ್ತು ಉಪನ್ಯಾಸಕರು ಪ್ರಾಮುಖ್ಯ. ಜೀವನದಲ್ಲಿ ಸತ್ಯ ನಿಷ್ಟೆ ಯಶಸ್ಸು ಪಡೆಯುವಿರಿ. ನಾವು ವಿನಯವಂತರಾಗಿರಬೇಕು ಆದರೆ ದೈನ್ಯತೆ ಇರಬಾರದು. ನಿಷ್ಠುರವಾದಿಯಾಗಿರಬೇಕು ದ್ವೇಷ ಬೆಳೆಸಿಕೊಳ್ಳಬಾರದು. ಶೈಕ್ಷಣಿಕ ಜೀವನದಲ್ಲಿ ಯೋಜನೆಯನ್ನು ಮಾಡಿಕೊಳ್ಳಬೇಕು. ಅವಕಾಶಗಳನ್ನು...

ಕುಕ್ಕೆ: ಶ್ರೀ ದೇವಳದಲ್ಲಿ ಇಒ ಡಾ. ನಿಂಗಯ್ಯಗೆ ಬೀಳ್ಕೊಡುಗೆ ಸಮಾರಂಭ,

ಕರ್ತವ್ಯದಲ್ಲಿ ಪರಿಣತಿ ಹೊಂದುವುದರಿ0ದ ಸೇವಾ ನಿಷ್ಠೆ ಸಾಧ್ಯ: ಎಸಿ ಜುಬಿನ್ ಮೊಹಾಪತ್ರಸುಬ್ರಹ್ಮಣ್ಯ: ಕರ್ತವ್ಯದಲ್ಲಿ ಪರಿಣತಿ ಹೊಂದುವುದರಿ0ದ ಸೇವಾವಧಿಯಲ್ಲಿ ಶಿಸ್ತುತಮವಾದ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ. ಸೇವಾನಿಷ್ಠತೆಯು ಸೇವಾಜೇಷ್ಠತೆಯ ಆಧಾರದಲ್ಲಿ ಉತ್ಕೃಷ್ಠವಾಗಿ ಅಧಿಕಾರಿಗೆ ಬರುತ್ತದೆ. ಡಾ.ನಿಂಗಯ್ಯ ಅವರು ತಮ್ಮ ಸುಧೀರ್ಘವಾದ ಸೇವಾಧಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಸೇವಾ ನಿವೃತ್ತಿ ಎನ್ನುವುದು ಸರಕಾರಿ ಸೇವೆಯಲ್ಲಿ ಇರುವ...

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ ಮತ್ತು ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ

ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಎರಡು ದಿನಗಳ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಮೇ. 29ನೇ ಬುಧವಾರ ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯದ ಉದ್ಯಮಿ ಹಾಗೂ ಹವ್ಯಾಸಿ ಕಲಾವಿದರಾದ ಯಜ್ಞೇಶ್ ಆಚಾರ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಇವರು ವಹಿಸಿದ್ದರು....

ಕೊಲ್ಲಮೊಗ್ರ : ಹೊಳೆಯಲ್ಲಿ ಉಕ್ಕಿ ಹರಿದ ನೀರು – 50 ಮೀ ಕೊಚ್ಚಿ ಹೋದ ಪಿಕಪ್

https://youtu.be/Cm62YoZ4lb0?si=ECI-wMdzIndH3vFi ಮೇ. 30 ಸುರಿದ ಭಾರಿ ಮಳೆಗೆ ಕೊಲ್ಲಮೊಗ್ರದ  ಪನ್ನೆ ಹತ್ತಿರ ತೆಂಗಿನ ಕಾಯಿ ಸಾಗಿಸುತ್ತಿದ್ದ ಪಿಕಪ್ ಹೊಳೆ ದಾಟುವ ವೇಳೆ ನೀರು ಉಕ್ಕಿ ಹರಿದ ಪರಿಣಾಮ ಸಂಕಷ್ಟ ಸಿಲುಕಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಚಾಲಕ ಹಾಗೂ ಪಿಕಪ್ ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಹೊಳೆಯಲ್ಲಿ ನೀರು ಕಡಿಮೆ ಇದೆ ಎಂದು  ಚಾಲಕ ಮಹೇಶ್ ದಬ್ಬಡ್ಕ ಪಿಕಪ್...

ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ನಿವೃತ್ತಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮೇ.30ರಂದು ನಿವೃತ್ತರಾಗಿದ್ದಾರೆ. ಕಳೆದ ೩೫ ವರ್ಷಗಳಿಂದ ಸರಕಾರಿ ಸೇವೆಯಲ್ಲಿದ್ದ ಇವರು ೩೩ ವರ್ಷಗಳಿಂದ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಯತತ್ಪರ ಅಧಿಕಾರಿಯಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ತನ್ನ ಸರಕಾರಿ ಸೇವೆಯನ್ನು ದ.ಕ ಜಿಲ್ಲೆಯಲ್ಲೇ ಆರಂಭಿಸಿ ದ.ಕ ಜಿಲ್ಲೆಯಲ್ಲೇ...

ಸುಳ್ಯ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುಳ್ಯ ಸರ್ಕಾರಿ ಬಸ್‌ ನಿಲ್ದಾಣದ ಬಳಿ ಅನಾಥ ಶವವೊಂದು ಇಂದು (ಮೇ31) ಬೆಳಗ್ಗೆ ಪತ್ತೆಯಾಗಿದೆ.ವ್ಯಕ್ತಿಯ ಗುರುತು ಪರಿಚಯ ಪತ್ತೆಯಾಗಿಲ್ಲ. ಅಚ್ಚು ಪ್ರಗತಿ ಅವರ ಆಂಬ್ಯುಲೆನ್ಸ್ ನಲ್ಲಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಇರಿಸಲಾಗಿದೆ. ವಾರಿಸುದಾರರು ಯಾರಾದರು ಇದ್ದರೆ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Loading posts...

All posts loaded

No more posts

error: Content is protected !!