ಮೆಟ್ಟಿನಡ್ಕ : ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಲೇಖನಿ ಸಾಮಾಗ್ರಿ ಹಾಗೂ ಗಿಡಗಳ ವಿತರಣೆ

ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ನಾಲ್ಕೂರು, ಬ್ಯಾಂಕ್ ಆಫ್ ಬರೋಡಾ, ಅರಣ್ಯ ಇಲಾಖೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ವತಿಯಿಂದ ಮೆಟ್ಟಿನಡ್ಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಪೆನ್ಸಿಲ್ ಬಾಕ್ಸ್, ಸ್ಕೇಲ್ ಗಳನ್ನು ಹಾಗೂ ಗಿಡಗಳನ್ನು ವಿತರಿಸಲಾಯಿತು. ಈ ಪ್ರಯೋಜನವನ್ನು ಶಾಲೆಯ...

ಕೆ.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ
ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು  ಆಚರಿಸಲಾಯಿತು. ಡಾ. ಚಿದಾನಂದ ಕೆ. ವಿ. ಅಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ, ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ...
Ad Widget

ಸಕಲೇಶಪುರ ಯೋಗ ಶಿಬಿರದಲ್ಲಿ ಭಾಗವಹಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಬೆಂಗಳೂರಿನಲ್ಲಿ ನಡೆಯಲಿರುವ ವಾರದ ಸಭೆಗೆ ತೆರಳುವ ವೇಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಕಲೇಶಪುರದಲ್ಲಿ ನಡೆದ ಆರೋಗ್ಯಕ್ಕಾಗಿ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಭಾಗವಹಿಸಿ ಯೋಗಾ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ವರ್ತಕರ ಸಂಘದ ಮತ್ತು ಯೋಗ ಚೈತನ್ಯ ಶಿಬಿರದ ವತಿಯಿಂದ ಗೌರವಿಸಿದರು.ಸಕಲೇಶಪುರ ತಾಲ್ಲೂಕು ಬಿಜೆಪಿ...

ಸುಳ್ಯ : ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಯೋಗ ದಿನಾಚರಣೆ

ಸುಳ್ಯ ತಾಲೂಕು ‌ಕಾರ್ಯನಿರತ ಪತ್ರಕರ್ತರ ಸಂಘ, ಎಪಿಎಂಸಿ ಸುಳ್ಯ, ಪಯಸ್ವಿನಿ ಯುವಕ ಮಂಡಲ ಕೇರ್ಪಳ ಇದರ ಆಶ್ರಯದಲ್ಲಿ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ‌ ಆಚರಿಸಲಾಯಿತು. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಆಗಬಾರದು. ನಿರಂತರ ಯೋಗ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿ ಆಗುತ್ತದೆ ಎಂದು ಸುಳ್ಯ ತಹಶೀಲ್ದಾರ್ ಜಿ....

ಪೆರಾಜೆ: ಬಿಜೆಪಿ ಶಕ್ತಿ ಕೇಂದ್ರದ ಯುವ ಮೋರ್ಚಾದ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ – ಪ್ರ.ಕಾರ್ಯದರ್ಶಿಯಾಗಿ ಸುಮನ್ ಪೀಚೆಮನೆ – ಕಾರ್ಯದರ್ಶಿಯಾಗಿ ನೋಹಿತ್ ನಿಡ್ಯಮಲೆ

ಪೆರಾಜೆ ಶಕ್ತಿ ಕೇಂದ್ರ ಇದರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ ಆಯ್ಕೆಯಾಗಿದ್ದಾರೆ.ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸುಮನ್ ಪೀಚೆಮನೆ , ಕಾರ್ಯದರ್ಶಿಗಳಾಗಿ ನೋಹಿತ್ ನಿಡ್ಯಮಲೆ ಆಯ್ಕೆಯಾದರು.ಪೆರಾಜೆ ಪಂಚಾಯತ್ ಸಭಾಂಗಣದಲ್ಲಿ ನಡೆದ ಭಾರತೀಯ ಶಕ್ತಿ ಕೇಂದ್ರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಸುಭಾಷ್ ಚಂದ್ರ ಬಂಗಾರಕೋಡಿ ,...

ಸೇವಾ ಭಾರತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಸೂಚನ ಫಲಕಗಳ ಸ್ವಚ್ಛತೆ

ಸೇವಾ ಭಾರತಿ ಸುಳ್ಯ ವತಿಯಿಂದ ರಾಷ್ಟ್ರೀಯ ಹೆದ್ದಾರಿ  ಬದಿಯ ರಸ್ತೆ ಸುರಕ್ಷಾ ನಾಮ ಫಲಕವನ್ನು ಸುಳ್ಯದಿಂದ ಸಂಪಾಜೆ ವರೆಗೆ ಸ್ವಚ್ಛ ಗೊಳಿಸಲಾಯಿತು. ಈ ಸೇವಾ ಕಾರ್ಯದಲ್ಲಿ ಸುಳ್ಯದ ಸೇವಾ ಭಾರತಿ ಸದಸ್ಯರಾದ ಸುದರ್ಶನ, ಗುರುದತ್, ಚರಣ್, ನಾರಾಯಣ, ಅಶ್ವತ್ಥ್ , ಸತೀಶ್, ಶರತ್, ಪ್ರಶಾಂತ್ , ಚಿದಾನಂದ, ಅಶೋಕ ಮತ್ತಿತರರು ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಪುಸ್ತಕ ವಿತರಣೆ

               ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಮಣ್ಯ ಇಲ್ಲಿಯ  225 ವಿದ್ಯಾರ್ಥಿಗಳಿಗೆ ಗುರುವಾರ  ಪುಸ್ತಕ ವಿತರಣೆ ಮಾಡಲಾಯಿತು.               ಪುಸ್ತಕಗಳ ಪ್ರಯೋಜಕರಾದ ಡಾ.ಶಿವಕುಮಾರ್ ಹೊಸಳ್ಳಿಕೆ ಮಾತನಾಡುತ್ತಾ ನಮ್ಮ ತಂದೆ ರುಕ್ಮಯಗೌಡರು ಇದೇ  ಶಾಲೆಯ ವಿದ್ಯಾರ್ಥಿಯಾಗಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ದುಡಿದವರು. ಇಂದು ಅವರ ಸಹೋದ್ಯೋಗಿ ನಿವೃತ್ತ...

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ

   ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ 2024- 25 ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.     ಅಧ್ಯಕ್ಷರಾಗಿ ರಾಜೇಶ್ ಏನ್ ಎಸ್, ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಚಿಯಾಗಿ ಮೋಹನ್ದಾಸ್ ರೈ, ಇವರುಗಳ ಆಯ್ಕೆ ಆಗಿರುತ್ತಾರೆ. ಕ್ಲಬ್ಬಿನ ಪ್ರಥಮ ಉಪಾಧ್ಯಕ್ಷರಾಗಿ ಸತೀಶ ಕೂಜುಗೋಡು ,ದ್ವಿತೀಯ ಉಪಾಧ್ಯಕ್ಷರಾಗಿ ವಿಷ್ಣು ಪಾತಿಕಲ್ಲು, ಕ್ಲಬ್...

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನ ವಿತರಣೆ

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಸುಳ್ಯ ಶಾಖೆಯ ಸದಸ್ಯರಾದ ಅಬೂಬಕರ್ ತೋಟತ್ತಿಲ ಇವರ ತೆರೆದ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ.200,000/- (ರೂಪಾಯಿ ಎರಡು ಲಕ್ಷ ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜೂ 20ರಂದು ಅಬೂಬಕರ್ ತೋಟತ್ತಿಲ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಶಾಖೆಯ ಪ್ರಾದೇಶಿಕ...

ಜು.09 ರಂದು ಸುಳ್ಯದಲ್ಲಿ ಜನಸ್ಪಂದನಾ ಸಭೆ ನಡೆಸಲು ತೀರ್ಮಾನ

ತಾಲೂಕಿನ ಜನರ ಕುಂದುಕೊರತೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಜನಸ್ಪಂದನಾ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಜುಲೈ 09 ರಂದು ಅಪರಾಹ್ನ 3.00 ಗಂಟೆಗೆ ಸುಳ್ಯದಲ್ಲಿ ಸಭೆ ನಡೆಯಲಿದೆ.
Loading posts...

All posts loaded

No more posts

error: Content is protected !!