- Thursday
- August 20th, 2026
ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರು ಜು.25 ರಂದು ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಠಾಣಾ ಪರಿಸರದ ಸ್ವಚ್ಚತೆ, ಠಾಣಾ ದಾಖಲಾತಿ, ಕಡತಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು. ಬಳಿಕ ಠಾಣಾ ಅಧಿಕಾರಿ, ಸಿಬ್ಬಂದಿಗಳಿಗೆ ಬ್ರೀಫಿಂಗ್ ನಡೆಸಿ, ಠಾಣಾ ಕರ್ತವ್ಯಗಳ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಉಚಿತ ತೆಂಗಿನ ಸಸಿಗಳ ವಿತರಣಾ ಸಮಾರಂಭ :ರೋಟರಿ ಕ್ಲಬ್ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಗೋಪಿನಾಥ್ ವಹಿಸಿದ್ದರು.ಸಸಿಗಳನ್ನು ಪ್ರಾಯೋಜಕರು ಆಗಿರತಕ್ಕಂತಹ ರೊ ಮಧುಸೂದನ್ ರವರು 50 ತೆಂಗಿನ ಸಸಿಗಳನ್ನು ಉಚಿತವಾಗಿ...
ರೋಟರಿ ಕ್ಲಬ್ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳ ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಗೋಪಿನಾಥ್ ವಹಿಸಿದ್ದರು.ಶಾಲೆಯ ಹಳೆ ವಿದ್ಯಾರ್ಥಿಯು ಆಗಿರತಕ್ಕಂತಹ ರೊ ಚಂದ್ರಶೇಖರ್ ಪೇರಾಲುರವರು ಸಂಪೂರ್ಣ ಪುಸ್ತಕಗಳ ಪ್ರಾಯೋಜಕರಾಗಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಿ ಹಾರೈಸಿದರು. ನೆಹರು ಸ್ಮಾರಕ ಪದವಿಬ್ ಪೂರ್ವ...
ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಇಂಧನ ಸಚಿವರನ್ನು ಭೇಟಿ ಮಾಡಿದರು. ಸುಳ್ಯ,ಪುತ್ತೂರು, ಬೆಳ್ತಂಗಡಿ ಹಾಗೂ ಕಡಬದ ಗುತ್ತಿಗೆದಾರರ ಸಂಘದ ಪರವಾಗಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಅವರನ್ನು ಭೇಟಿ ಮಾಡಿ ಬ್ರೇಕ್ ಡೌನ್ ಕಾಮಗಾರಿಗಳ ಸಮಸ್ಯೆಗಳ ಕುರಿತು...
*ಸುಳ್ಯ ದಸರಾ - 2024* ಕಾರ್ಯಕ್ರಮ ಆಯೋಜನೆ ಮತ್ತು ಜು. 28ರಂದು ಆದಿತ್ಯವಾರ ಕೇರ್ಪಳ ಬೂಡು ಗದ್ದೆಯಲ್ಲಿ ಶಾರದಾಂಬಾ ಸಮೂಹ ಸಮಿತಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ *ಕೆಸರುಗದ್ದೆ ದಸರಾ ಕ್ರೀಡೋತ್ಸವ -2024* ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ *ಶ್ರೀ ಶಾರದಾಂಬಾ ಸಮೂಹ ಸಮಿತಿಗಳ ಜಂಟಿ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣ*...
ಮಂಡೆಕೋಲು ಗ್ರಾಮದ ಶಾಲಾ ಬಳಿಯ ಭವಾನಿಶಂಕರ ಆಚಾರ್ಯ ಎಂಬವರ ಮನೆಗೆ ಇಂದು ಬೆಳಗ್ಗೆ ಬೀಸಿದ ಬಾರೀ ಗಾಳಿಗೆ ಪಕ್ಕದಲ್ಲಿದ್ದ ದೊಡ್ಡದಾದ ತೆಂಗಿನ ಮರ ಬುಡ ಸಹಿತ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮನೆಗೆ ಬಿದ್ದ ಮರವನ್ನು ತೆರವುಗೊಳಿಸಿ ಮನೆಯನ್ನು ದುರಸ್ತಿಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ....
ಕೊಯಮತ್ತೂರು ನಿವಾಸಿ ಸತೀಶ್ ಎಂಬಾತನನ್ನು ಅವರ ತಾಯಿ ಕುಕ್ಕೆ ಸುಬ್ರಮಣ್ಯದಲ್ಲಿ ಬಿಟ್ಟು ಹೋದ ಘಟನೆ ನಡೆದಿರುತ್ತದೆ. ಈ ವ್ಯಕ್ತಿಯು ಸಾರ್ವಜನಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಪುಟ್ ಪಾತ್ ನಲ್ಲಿ ಪತ್ತೆಯಾಗುತ್ತಾನೆ. ಜೋರಾದ ಮಳೆಗೆ ಪುಟ್ ಪಾತ್ ನಲ್ಲಿ ಮಲಗಿಕೊಂಡು ಒದ್ದೆಯಾಗುತ್ತಿರುವುದನ್ನು ಗಮನಿಸಿದ ರಾಧಾ ಕೃಷ್ಣ, ಶಿವ ಭಟ್ ಮಾಧ್ಯಮ ಅವರು ಈ ವ್ಯಕ್ತಿಯನ್ನು ಮಾತನಾಡಿಸಿದಾಗ ತಮಿಳಲ್ಲಿ ಮಾತನಾಡುತ್ತಿದ್ದು...
ಪಿ ಎಮ್ ಶ್ರೀ ಶಾಲೆ ಗುತ್ತಿಗಾರು ಇದರ ಪೋಷಕರ ಸಭೆಯು ಇತ್ತೀಚೆಗೆ ನಡೆದಿದ್ದು ಇದರಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ ಮಾಡಲಾಯಿತು.ಎಸ್ ಡಿ. ಎಂ.ಸಿ. ಯ ನೂತನ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ ಅವರು ಎರಡನೇ ಅವಧಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಸನ್ನ ಆಮೆ ಆಯ್ಕೆಯಾದರು. ಸದಸ್ಯರುಗಳಾಗಿ ಅಶೋಕ್ ನೆಕ್ರಾಜೆ, ದಿನೇಶ್ ಹಾಲೆ...
ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಇಂದು ರಾತ್ರಿ ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ . ಓರ್ವ ಸವಾರ ಆಡೂರು ಮೂಲದವರಾಗಿದ್ದು ಅವರ ತಲೆಗೆ ಗಾಯಗಳಾಗಿದ್ದು ಇನ್ನೋರ್ವ ಸವಾರನ ಕೈ ಕಾಲುಗಳಿಗೆ ಗಾಯಗಳಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಕೆಲ ದಿನಗಳ ಹಿಂದೆ...
ಆಟೋ ಚಾಲಕರ ಸಂಘ B.M.S ಕಲ್ಲುಗುಂಡಿ ಘಟಕದ ವತಿಯಿಂದ B.M.S ಸಂಸ್ಥಾಪಕರಾದ ದತ್ತೊಪಂತ್ ಅವರ ದಿನಾಚರಣೆಯನ್ನು ಸಂಘದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ವಿಷ್ಣುಮೂರ್ತಿ ಸಭಾಂಗಣದಲ್ಲಿ ಆಚರಿಸಲಾಯಿತು.ಪ್ರಾಸ್ತಾವಿಕವಾಗಿ ಕೇಶವ ಬಂಗ್ಲೆಗುಡ್ಡೆ ಮತ್ತು ರವಿಕುಮಾರ್ ನಿಡಿಂಜಿ ಅವರು ಸಂಘಟನೆ ಬೆಳೆದು ಬಂದ ರೀತಿ ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು. ಸಂಘದ ಪಧಾದಿಕರಿಗಳು ಸದಸ್ಯರು ಉಪಸ್ಥಿತಿರಿದ್ದರು.
Loading posts...
All posts loaded
No more posts
