- Wednesday
- August 19th, 2026
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2023-24 ನೇ ಸಾಲಿನ ವಾಣಿಜ್ಯ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 102 ವಿದ್ಯಾರ್ಥಿಗಳು ಹಾಜರಾಗಿದ್ದು, 96 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 94 ಫಲಿತಾಂಶವನ್ನು ಪಡೆದಿರುತ್ತದೆ. ಕು. ಮನು ಕೆ 99.38 ಶೇಕಡಾವನ್ನು ಪಡೆದಿರುತ್ತಾಳೆ. ವಾಣಿಜ್ಯ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 01...
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿರುವ ರಾಜ್ಯಪಾಲರ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಪಾದಯಾತ್ರೆಯು ಕಲ್ಲುಗುಂಡಿಯ ಮುಖ್ಯ ಪೇಟೆಯಲ್ಲಿ (ಆ 20)ರಂದು...
ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ದಿವಂಗತ ಬೊಳಿಯಣ್ಣ ಗೌಡ ಅವರ ಧರ್ಮಪತ್ನಿ ಪರಮೇಶ್ವರಿ ಅವರು ವಯೋಸಹಜವಾಗಿ ಸೋಮವಾರ ರಾತ್ರಿ ನಿಧನ ಹೊಂದಿದರು. ಮೃತರಿಗೆ 99 ವರ್ಷ ವಯಸ್ಸಾಗಿತ್ತು.ಮೃತರು ಬಂಧು-ಮಿತ್ರರು ಹಾಗೂ ನಡುತೋಟ ಕುಟುಂಬಸ್ಥರನ್ನು ಅಗಲಿದ್ದಾರೆ.
ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ..? ಮನುಷ್ಯತ್ವವ ಮರೆತು ಬದುಕಿದರೆ ಆ ಬದುಕಿಗೆ ಅರ್ಥವಾದರೂ ಉಂಟೇ…!?ಜೀವನಪರ್ಯಂತ ಬರೀ ಹಣ, ಆಸ್ತಿ-ಅಂತಸ್ತನ್ನು ಗಳಿಸಿಕೊಂಡರೆ ಸಾಕೇ..? ನಾವು ಸತ್ತ ನಂತರವೂ ನಮ್ಮ ಹೆಸರನ್ನು ಉಳಿಸುವ ಮಾನವೀಯ ಮೌಲ್ಯಗಳಿಗಿಂತ ದೊಡ್ಡ ಆಸ್ತಿ ಬೇಕೇ…!?ಸಮಾಜದಲ್ಲಿ ಎಲ್ಲರೆದುರು ತಲೆ ಎತ್ತಿ ಬದುಕಬೇಕು ಎಂದುಕೊಂಡರಷ್ಟೇ ಸಾಕೇ..? ಹಿರಿಯರೆದುರು ತಲೆ ತಗ್ಗಿಸಿ, ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ಗುಣವಿಲ್ಲದಿದ್ದರೆ...
ಕೊಲ್ಲಮೊಗ್ರು ಪೇಟೆಯಿಂದ ಪಡಿಕಲ್ಲು ಚಾಳೆಪ್ಪಾಡಿಗೆ ಹೋಗುವ ಪಂಚಾಯತ್ ರಸ್ತೆ ಕಳೆದ ಹಲವಾರು ವರುಷಗಳಿಂದ ಅಭಿವೃದ್ಧಿಯಾಗದೇ ನೀರೆಲ್ಲಾ ರಸ್ತೆಯಲ್ಲಿಯೇ ಹರಿದು ಈ ಭಾಗದ ಜನ ಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತ್ ಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನ ದೊರಕದೆ ಜನ ಕಂಗಲಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕೊಲ್ಲಮೊಗರು ನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿಯೂ...
ಅಮ್ಮ ಚಿಣ್ಣರ ಮನೆಯ ಪೋಷಕ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ., ಉಪಾಧ್ಯಕ್ಷರುಗಳಾಗಿ ಹರಿಪ್ರಸಾದ್ ಅತ್ಯಾಡಿ, ನಿಶ್ಮಿತಾ ಧನಂಜಯ, ಸದಸ್ಯರಾಗಿ ಲಕ್ಷ್ಮಣ್, ಯತೀಶ್, ಶ್ವೇತಾ ಉದಯ್, ಜೀವಿತಾ ಸಂದೇಶ್, ರೋಹಿಣಿ ಕುಲದೀಪ್, ವನಿತಾ ಶಶಿಕುಮಾರ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೈಲೇಶ್ ಅಂಬೆಕಲ್ಲು, ಶಿಕ್ಷಕಿ ಅಶ್ವಿನಿ ಹಾಗೂ ಎಲ್ಲಾ ಪೋಷಕರು ಉಪಸ್ಥಿತರಿದ್ದರು.
ಆ.19 .ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಡಳಿತ ಮಂಡಳಿ ಸದಸ್ಯ ಜಾನಿ. ಕೆ.ಪಿ ಅವರಿಂದ ದ.ಕ ಜಿಲ್ಲೆಯ ಅಸಿಸ್ಟೆಂಟ್ ಲೇಬರ್ ಕಮಿಷನರ್ (ALC) ನಝಿಯಾ ಸುಲ್ತಾನ್ ಮತ್ತು ಜಿಲ್ಲಾ ಲೇಬರ್ ಆಫೀಸರ್ ಗಳಾದ ವಿಲ್ಮಾ ಮತ್ತು ಕುಮಾರ್ ಅವರನ್ನು ಬೇಟಿ ಮಾಡಿ ಜಿಲ್ಲೆಯ ಕಾರ್ಮಿಕರ ವಿವಿಧ ಸಮಸ್ಯೆಗಳು ಮತ್ತು ಮಂಡಳಿಯಿಂದ ದೊರಕಬೇಕಾದ ಸಹಕಾರದ ಬಗ್ಗೆ...
*ಸಮೃದ್ಧ ಮೀನುಗಾರಿಕೆಗೆ ಹಾರೈಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ* ಮಂಗಳೂರು: ಮೀನುಗಾರರ ಶ್ರೇಯೋಭಿವೃದ್ದಿಗಾಗಿ ತಣ್ಣೀರುಬಾವಿ ಮೊಗವೀರ ಮಹಾಸಭಾ (ರಿ) ಇದರ ವತಿಯಿಂದ ಚಿತ್ರಾಪುರ ಕಡಲ ಕಿನಾರೆಯಲ್ಲಿ ಆ. 19ರಂದು ಸಮುದ್ರ ಪೂಜೆ ನಡೆಯಿತು. ಸಮುದ್ರರಾಜನಿಗೆ ಹಾಲು, ಫಲ ಅರ್ಪಿಸಿ, ಸಮುದ್ರ ಪೂಜೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಿದ್ಯಾರ್ಥಿ ಪರಿಷತ್ ಇದರ ಸಹಯೋಗದೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿನೇಶ ಪಿ. ಟಿ ಪ್ರಾಂಶುಪಾಲರು, ಕೆ.ಎಸ್. ಎಸ್ ಕಾಲೇಜು ಸುಬ್ರಹ್ಮಣ್ಯ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಚಿ.ನಾ ಸೋಮೇಶ್, ಧಾರ್ಮಿಕ ಚಿಂತಕರು ಕೊಡಗು...
ವಳಲಂಬೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಬ್ಯಾಗ್, ಅಂಗನವಾಡಿ ಸಿಬ್ಬಂದಿಗಳಿಗೆ ಸಾರಿ ಹಾಗೂ ಸಿಹಿತಿಂಡಿಯನ್ನು ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿನಿಯಾದ ಚಲನಚಿತ್ರ ನಟಿ ಹೇಮಾ ಗೌಡ ಮೊಟ್ನೂರು ಮತ್ತು ಮನೆಯವರು ನೀಡಿ ಸಹಕರಿಸಿದ್ದಾರೆ.ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸ್ವಾತಿ ಹೂವನ, ಅಂಗನವಾಡಿ ಮಕ್ಕಳು, ಕಾರ್ಯಕರ್ತೆ, ಸಹಾಯಕಿ ಹಾಗೂ ಪೋಷಕರು ಉಪಸ್ಥಿತರಿದ್ದರು.
Loading posts...
All posts loaded
No more posts
