- Friday
- August 14th, 2026
ಯುವ ಉದ್ಯಮಿ ಅಜಿತ್ ಬನ್ನೂರು ಅವರು ಪೇರಾಲುವಿನಲ್ಲಿ ಸ್ಥಾಪಿಸಿದ ಹಾಳೆ ತಟ್ಟೆ ತಯಾರಿಕಾ ಘಟಕ ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಇದರ ಉದ್ಘಾಟನಾ ಸಮಾರಂಭ ಸೆ 14ರಂದು ನಡೆಯಿತು.ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜನಸೇವಾ ವಿಶ್ವಸ್ಥ ಮಂಡಳಿ,ಜನಸೇವಾ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ಅ.ಸ....
ಗುತ್ತಿಗಾರಿನ ಮುತ್ತಪ್ಪ ನಗರದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕುಮಾರ್ ಕೆ ಮಾಲಕತ್ವದ ಶಿವದುರ್ಗಾ ಎಲೆಕ್ಟ್ರಿಕಲ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಎಲೆಕ್ಟ್ರಿಕಲ್ಸ್ ವಸ್ತುಗಳ ಸೇಲ್ಸ್ ಮತ್ತು ಸರ್ವಿಸ್, ಕಟ್ಟಡದ ವೈರಿಂಗ್, ಮೋಟಾರ್ ವೈಂಡಿಂಗ್, ಹಾಗೂ ಎಲ್ಲಾ ತರಹದ ವಿದ್ಯುತ್ ಉಪಕರಣಗಳ ರಿಪೇರಿ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ವಳಲಂಬೆಯಲ್ಲಿ ಕಳೆದ 5 ವರ್ಷಗಳಿಂದ ಸೇವೆ ನೀಡುತ್ತಿರುವ ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರ ಗೊಂಡ ವಳಲಂಬೆ ದೇವಸ್ಥಾನದ ಸಮೀಪ ಶುಭಾರಂಭಗೊಂಡಿತು. ಗಣಪತಿ ಹವನ, ನವರಾತ್ರಿ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ನೆರವೇರಿತು. ಮಾಲಕರಾದ ರಿತೇಶ್ ಬಿ. ಪೈಕ ಸ್ವಾಗತಿಸಿ, ವಂದಿಸಿದರು. ವೆಂಕಟ್ ವಳಲಂಬೆ, ದುರ್ಗೇಶ್ ಮಣಿಯಾನ, ದೇವಣ್ಣ ಗೌಡ ವಳಲಂಬೆ, ಕುಮಾರ ಅಡ್ಡನಪಾರೆ, ಚಿದಾನಂದ...
ನಿಂತಿಕಲ್ಲಿನ ಎಣ್ಮೂರು ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜನ್ಯ ಎಂಟರ್ಪ್ರೈಸಸ್ನಲ್ಲಿ ಅ.15ರಂದು ಆಯುಧಪೂಜೆ ನಡೆಯಿತು. ಪೂರ್ವಾಹ್ನ ಗಣಹೋಮ ನೆರವೇರಿತು.ಈ ಸಂದರ್ಭದಲ್ಲಿ ಜನ್ಯ ಎಂಟರ್ಪ್ರೈಸಸ್ ಮಾಲಕ ಕಿರಣ್ ಭೀಮಗುಳಿ, ಪುನೀತ್ ಪುತ್ತೂರು, ನಮ್ಮಿರಾಜ್, ಪ್ರವೀಣ್ ಕಾರ್ಜ, ವಿಜೇತ್, ನಿತೇಶ್ ಕಳಂಜ, ಚಿತ್ತರಂಜನ್ ಪಲಗೇಣಿ, ಗುರುಪ್ರಸಾದ್ ಪುತ್ತೂರು, ಚೇತನ್, ಸಚಿನ್ ಗೋಳ್ಯಾಡಿ, ಎಣ್ಮೂರು ಶ್ರೀರಾಮ್ ಸ್ಟೋರ್ ಮಾಲಕರಾದ ಜಯರಾಮ್,...
ಅಯ್ಯನಕಟ್ಟೆಯ ಶ್ರೀದೇವಿ ಇಂಡಸ್ಟ್ರಿಯಲ್ ವರ್ಕ್ಸ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.15ರಂದು ನಡೆಯಿತು. ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಮಾಲಕರಾದ ಜಯಪ್ರಸಾದ್ ಕೋಟೆಮುಂಡುಗಾರು, ಶ್ರೀಮತಿ ವೀಣಾ ಜಯಪ್ರಸಾದ್ ಕೋಟೆಮುಂಡುಗಾರು, ಮಾಲಕರ ಮಕ್ಕಳಾದ ಕು.ಜಾಹ್ನವಿ, ಮಾ.ಜಿತೇಶ್, ಮಾಲಕರ ತಾಯಿ ಶ್ರೀಮತಿ ಬಾಲಕ್ಕಿ, ಅಶ್ವಿನ್ ಎಂ.ಆರ್, ಹರೀಶ್ ಮುಂಡುಗಾರು ಎಂ.ಆರ್.ನಾರಾಯಣ, ಶ್ರೀಮತಿ ಸುಮಲತಾ ನಾರಾಯಣ, ಬೇಬಿ ಜ್ಞಾನ, ಶ್ರೀಕಾಂತ್...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧಪೂಜಾ ಕಾರ್ಯಕ್ರಮವು ಅಕ್ಟೋಬರ್ 14ರಂದು ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ರತ್ನಾವತಿ ಡಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕೇತರ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಳ್ಯ ಮೆಸ್ಕಾಂನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಜೂನಿಯರ್ ಇಂಜಿನಿಯರ್ ಗಳಾದ ಬೋರಯ್ಯ, ಸುರೇಶ್ ಭಟ್, ಜಯಪ್ರಕಾಶ್ ಕೆ., ಹಾಗೂ ಗುತ್ತಿಗೆದಾರರು, ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಂತಿಕಲ್ಲು ಸಮೀಪದ ಮುಪ್ಪೇರಿಯ ವನದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಸಂತ ಹಾಗೂ ಶ್ರೀಮತಿ ವಿಜಯವಸಂತ ಮಾಲಕತ್ವದ ಶ್ರೀ ವಿಷ್ಣು ಎಂಟರ್ಪ್ರೈಸಸ್ ಅ.11ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉಜಿರೆ ಸಮೀಪದ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಸ್ಕರ ಬಲ್ಯಾಯ ನಿಂತಿಕಲ್ಲು, ರಾಮಯ್ಯ ಗೌಡ ಮಾಸ್ತಿಮನೆ,...
"ವನ್ಯ ಜೀವಿಗಳನ್ನು ಸಂರಕ್ಷಿಸೋಣ" ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೆರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ ಸ್ವಾಗತಿಸಿ, ಕನ್ನಡದ ಶಾಲು ಹಾಕಿ, ಉಡುಗೊರೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ, ಗೌರವಾಧ್ಯಕ್ಷರಾದ ಅಶ್ರಫ್...
ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯ್ ಕುಮಾರ್ ರವರು ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಯಲ್ಲಿ ಅ.10 ರಂದು ನಡೆದ ಅಖಿಲ ಭಾರತ ಕೇಂದ್ರೀಯ ಕನ್ನಡ ಸಾಹಿತ್ಯ ವೇದಿಕೆಯ ತೃತೀಯ ಕವಿ ಕಾವ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.
Loading posts...
All posts loaded
No more posts
