- Tuesday
- August 18th, 2026
ಗೃಹರಕ್ಷಕ ದಳ ಬೆಳ್ಳಾರೆ ಯುನಿಟ್ ವತಿಯಿಂದ ಜೂ. 12ರಂದು ಬೆಳ್ಳಾರೆ ಪರಿಸರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಸಂಸ್ಥೆಯ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀಮೋಹನ್ ಚೂಂತಾರು, ಯುನಿಟ್ ಅಧಿಕಾರಿ ವಸಂತ, ಗೃಹರಕ್ಷಕ ಸಿಬ್ಬಂದಿಗಳಾದ ಹೂವಪ್ಪ, ದಿವಾಕರ, ಅಶ್ವಿನಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ಗೃಹರಕ್ಷಕ ದಳದ ಕಟ್ಟಡ ನಿರ್ಮಿಸಲು 10ಸೆಂಟ್ಸ್ ಜಾಗ ನೀಡಬೇಕೆಂದು ಸಚಿವ...
ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆ ನಡೆದ ಮರುದಿನ ಇಡಿ ಮಾರುಕಟ್ಟೆ ಕೊಳೆತ ಸಾಮಾಗ್ರಿಗಳಿಂದ ನಾರುತ್ತದೆ. ಅಲ್ಲದೆ ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಕೊಳೆತ ವಾಸನೆ ಇನ್ನೂ ಹೆಚ್ಚಾಗಿ ಇಡೀ ಪರಿಸರವನ್ನು ಆವರಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕ್ರಮ ತೆಗೆದುಕೊಂಡು ಸಾರ್ವಜನಿಕರು ಶುದ್ಧ ಗಾಳಿ ಹಾಗೂ ನೆಮ್ಮದಿಯ...
ನಮ್ಮ ಬದುಕು ರೂಪಿಸಲು ಈ ಸಮಾಜ ಅನೇಕ ಕೊಡುಗೆಗಳನ್ನು ನೀಡಿದೆ. ಈ ಸಮಾಜದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೂ ಕಿಂಚಿತ್ತಾದರೂ ಋಣ ತೀರಿಸಬೇಕೆಂದು ಪ್ರಯತ್ನ ನಡೆಸುವ ಅನೇಕರು ನಮ್ಮ ಮುಂದೆ ಇದ್ದಾರೆ. ಅವರು ನಮಗೆ ಆದರ್ಶ ಪ್ರಾಯರು ಎಂದು ಎಂದು ಹಿಂದೂ ಸಂಘಟನೆಯ ಮುಂದಾಳು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಶುಕ್ರವಾರ ಅಡ್ಕಾರು ಶ್ರೀ...
ನಾಲ್ಕೂರು ಗ್ರಾಮದ ಹೊಂಬೆಳಕು ಸ್ವಚ್ಛತಾ ಸೇವಾ ತಂಡದ ಜೂನ್ ತಿಂಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಗುತ್ತಿಗಾರು ಮುಖ್ಯ ಪೇಟೆಯ ಪ್ರಯಾಣಿಕರ ತಂಗುದಾಣ ಹಾಗೂ ಶುದ್ಧ ಕುಡಿಯುವ ನೀರು ಘಟಕದ ಸ್ಥಳವನ್ನು ಸ್ವಚ್ಛತೆ ಮಾಡಲಾಯಿತು. ಇದು ತಂಡದ ಎಂಟನೇ ಕಾರ್ಯಕ್ರಮವಾಗಿದ್ದು, ತಂಡದ ಎಲ್ಲಾ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಧರ್ಮ ಸಂಘರ್ಷ ಮುಂದುವರಿದರೆ ಈ ಜನರ ಬದುಕು ಸುಧಾರಣೆ ಅಸಾಧ್ಯ. ಈ ಬಗ್ಗೆ ಯೋಚನೆ ಆರಂಭವಾಗಬೇಕಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ಗಾಂಧಿವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್ ನ ಸಫಾ ಅಡಿಟೋರಿಯಂನಲ್ಲಿ ಶನಿವಾರ...
ಅರೆಭಾಷೆ ಅಕಾಡೆಮಿ ಸ್ಥಾಪನೆಯಾದಾಗ ಯಾವ ದೇಯೋದ್ದೇಶ ಇತ್ತೋ ಅದನ್ನು ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಎ.ಕೆ.ಹಿಮಕರ ಒತ್ತಾಯಿಸಿದರು. ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಾಪನೆಯಾಗಿ ದಶಮಾನೋತ್ಸವದ ಮೊದಲೇ ಆಕಾಡೆಮಿಯು ಅಧೋಗತಿಗೆ ತಲುಪಿರುವುದು ದುರಂತ. ಈ ದುಸ್ಥಿತಿಗೆ ತಲುಪಲು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಹಸದಸ್ಯ ಡಾ| ವಿಶ್ವನಾಥ...
ಆರಂತೋಡು - ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಆರಂತೋಡು ಶಕ್ತಿ ಕೇಂದ್ರದ ಪ್ರಮುಖ ಹಾಗೂ ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ ನಾಗರಿಕರ ಬಹು ವರ್ಷ ಗಳ ಬೇಡಿಕೆ ನಿಜವಾಗಿಯೂ ನ್ಯಾಯ ಸಮ್ಮತವಾಗಿದೆ. ಪಕ್ಷದ ಕಡೆಯಿಂದ ಈ ಬಗ್ಗೆ ವಿಶೇಷವಾಗಿ ಬಿ.ಜೆ....
ಕರುನಾಡ ಪರಿಸರ ಸಂರಕ್ಷಣಾ ವೇದಿಕೆ ಕೊಪ್ಪಳ ಇದರ ವತಿಯಿಂದ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರಿಗೆ "ಪರಿಸರ ಸೇವಾ ರತ್ನ ರಾಜ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳು,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗುತ್ತಿಗಾರು ವಲಯದ ಗುತ್ತಿಗಾರು ಮತ್ತು ವಳಲಂಬೆ ಕಾರ್ಯಕ್ಷೇತ್ರದ ಸಿ ಎಸ್ ಸಿ ಕೇಂದ್ರದಲ್ಲಿ ವಿ ಎಲ್ ಇ ಕಲೆಕ್ಷನ್ ಪಾಯಿಂಟ್ ಇಂದು ಉದ್ಘಾಟನೆಗೊಂಡಿತು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಜಿ ಅಚ್ಯುತ ಗುತ್ತಿಗಾರು ಇವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಶ್ರೀ ಬಾಲಕೃಷ್ಣ...
ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರದ ನಿವಾಸಿ ರಾಮ ಕಟ್ಟ ಎಂಬುವವರು ಜೂ.08 ರಂದು ಹೃದಯಾಘಾತದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.4 ದಿವಸಗಳ ಹಿಂದೆ ಬೈಪಾಸ್ ಸರ್ಜರಿ ಮಾಡಿದ್ದು, ಜೂ.07 ರಂದು ಸಂಜೆ ಎದೆನೋವು ಪ್ರಾರಂಭವಾಗಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂ.08 ರಂದು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಗಿರಿಜಾ,...
Loading posts...
All posts loaded
No more posts
