ಕವನ ವಾಸ್ತವತೆಯ ಬದುಕು

ಗುರಿಯ ಸೇರೋ ತವಕದಲ್ಲಿ ಸಾಗಿದೆ ದಿನವು, ಸೋಲು ಗೆಲುವ ಆಟದಲ್ಲಿ ಕುಗ್ಗದ ಮನವು... ನಾಳೆಯೆಂಬ ಚಿಂತೆಯಲ್ಲಿ ಮುಗಿದಿದೆ ಇಂದು, ವಾಸ್ತವತೆಯೇ ಬದುಕು ಇಲ್ಲಿ ತಿಳಿದಿರಲೆಂದೂ... ಬದುಕಿನ ಈ ಪಯಣದಲ್ಲಿ ಪರೀಕ್ಷೆಯು ಸಹಜ, ಸೋಲು ಗೆಲುವ ಹಾದಿಯಲ್ಲಿ ನಿರೀಕ್ಷೆಯು ಸಹಜ... ಸೋಲು ಬದುಕ ಅಂತ್ಯವಲ್ಲ ಅರಿತುಕೋ ಮನುಜ, ಸೋಲಿನಲ್ಲೂ ಗೆಲುವ ಹುಡುಕಿ ಸಾಗು ನೀ ಮನುಜ... ಕಳೆದ...

ಗುತ್ತಿಗಾರು :- ಜುಲೈ 31. ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ಜು.31 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕಿರಿಯ ವಿಭಾಗ,...
Ad Widget

ಕೊಲ್ಲಮೊಗ್ರ : ಬೂತ್ ಸಮಿತಿ ಕಾರ್ಯದರ್ಶಿ ಹುದ್ದೆಗೆ ಉದಯ ಶಿವಾಲ ರಾಜೀನಾಮೆ

ರಾಜ್ಯದ್ಯಾಂತ ನಡೆಯುತ್ತಿರುವ ಹಿಂದೂ ಸಂಘಟನೆಯ ಸದಸ್ಯರ ಹತ್ಯೆ ಹಾಗೂ ಬೆಳ್ಳಾರೆ ಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಕೊಲೆ ನಡೆದಿದ್ದರೂ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಬಗ್ಗೆ ಅಸಮಾಧಾನ ಹೊಂದಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೊಲ್ಲಮೊಗ್ರ ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉದಯ ಶಿವಾಲ ಅಮರ ಸುದ್ದಿಗೆ ತಿಳಿಸಿದ್ದಾರೆ.

ನಳಿನ್, ಅಂಗಾರ, ಸುನಿಲ್ ಗೆ ಮತ್ತೊಮ್ಮೆ ಘೇರಾವ್ : ಬೇಗನೇ ಕಾಲ್ಕಿತ್ತ ನಾಯಕರು

ಬೆಳ್ಳಾರೆ: ನಳೀನ್ ಕುಮಾರ್ ಕಟೀಲ್, ಸಚಿವ ಎಸ್ ಅಂಗಾರ ಹಾಗೂ ಮತ್ತಿತರ ನಾಯಕರಿಗೆ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆಯಿತು. ಈರ್ ರಡ್ ದಿನ ಬತ್ ಪೋಪಾರ್. ಬಕ್ಕ ನರಕ ನಮ ಬರೋಡು ಎಂದು ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಬೊಬ್ಬೆ ಹೊಡೆದರು. ಒಂದಷ್ಟು ಹೊತ್ತು ನೆಟ್ಟಾರು ಮನೆ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರ...

ಪ್ರವೀಣ್ ಹತ್ಯೆ ಆರೋಪಿಗಳು ಕೋರ್ಟ್ ಗೆ

ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಸ್ಕೆಚ್ ಹಾಕಿರುವ ಆರೋಪಿಗಳನ್ನು ಇಂದು ಸಂಜೆ ಕೋರ್ಟ್ ಗೆ ಹಾಜರು ಪಡಿಸಲು ಪುತ್ತೂರು ಕೋರ್ಟ್ ಗೆ ಕರೆದೊಯ್ಯಲಾಗಿದೆ. ತನಿಖಾ ದೃಷ್ಟಿಯಿಂದ ಪೊಲೀಸರು ಮಾಧ್ಯಮಕ್ಕೆ ಹೆಚ್ಚಿನ ಮಾಹಿತಿ ನೀಡಿಲ್ಲ.

ನಾವು ಬರೀ ಹೇಳುವುದಿಲ್ಲ!! ಸೂಕ್ತ ವ್ಯವಸ್ಥೆ ಖಂಡಿತಾ ಆಗುತ್ತದೆ – ಸಿಎಂ ಬೊಮ್ಮಾಯಿ

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ತನಿಖೆ ಮುಗಿದಿದ್ದು ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಲಾಗಿದೆ. ಈ ಜಾಲ ದೇಶಾದ್ಯಂತವೂ ಹಬ್ಬಿದ್ದು ನಮ್ಮ ಸರಕಾರ ಬರೀ ಹೇಳುವುದಲ್ಲ.ಅವರನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಿಎಂ ಭೇಟಿ ನೀಡಿ ಮನೆಯವರಿಗೆ...

ವಳಲಂಬೆ : ಅನ್ಯಧರ್ಮಿಯ ಅಂಗಡಿ ಧ್ವಂಸ

ವಳಲಂಬೆ ಬಸ್ ನಿಲ್ದಾಣದ ಬಳಿಯ ಅಬ್ಬಾಸ್ ಅವರ ಅಂಗಡಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಧ್ವಂಸಗೊಂಡಿದೆ.

ಗುತ್ತಿಗಾರು ಅನ್ಯ ಧರ್ಮೀಯರ ಅಂಗಡಿಗಳಿಗೆ ಹಾನಿ

ಕೊಲೆ ಆರೋಪಿ ಶಫಿಕ್ ಬಂಧನವಾಗುತ್ತಲೆ ಆಕ್ರೋಶಗೊಂಡ ಗುತ್ತಿಗಾರಿನ ಹಿಂದೂ ಸಂಘಟನೆಗಳು ಆತ ಕೆಲಸ ಮಾಡುತ್ತಿದ್ದ ಅಡಿಕೆ ಅಂಗಡಿ ಸೇರಿದಂತೆ ಅನ್ಯ ಧರ್ಮೀಯರ ಎಲ್ಲಾ ಅಂಗಡಿಗಳನ್ನು ಹಾನಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 500 ಕ್ಕು ಮಿಕ್ಕಿ ಕಾರ್ಯಕರ್ತರು ಆಕ್ರೋಶಿತರಾಗಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ಬೆಳ್ಳಾರೆಗೆ ಮುಖ್ಯ ಮಂತ್ರಿ

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಭೇಟಿ ನೀಡಲಿದ್ದಾರೆ. ಬೆಂಗಳೂರು ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಟು 4.25 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 6.30ಕ್ಕೆ ಬೆಳ್ಳಾರೆಗೆ ಆಗಮಿಸಿದ ನಂತರ ಪ್ರವೀಣ್ ನೆಟ್ಟಾರು ಅವರ...

ಗುತ್ತಿಗಾರು : ಪ್ರಗತಿ ಅಡಿಕೆ ಹಾಗೂ ದಿನಸಿ ಅಂಗಡಿ ಪುಡಿ ಪುಡಿ

ಗುತ್ತಿಗಾರಿನ ಅಬೂಬಕ್ಕರ್ ಬೆಳ್ಳಾರೆ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂದಿತರಾಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸಂಘಟನೆ ಸದಸ್ಯರು ಸೇರಿ ಅಂಗಡಿಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!