ಕಲ್ಲಪ್ಪಳ್ಳಿ: ಆಯುಧ ಪೂಜೆ

ಕಲ್ಲಪ್ಪಳ್ಳಿ ಶ್ರೀ ಷಣ್ಮುಕ ಜನರಲ್ ಸ್ಟೋರ್, ಶಾಮಿಯಾನ ಮತ್ತು ಲೈಟಿಂಗ್ಸ್ ಪಾಡಿಕೊಚ್ಚಿ ಮಾನಸ ನಿಲಯ ಕುಟುಂಬಸ್ತರ ಸಹಕಾರದೊಂದಿಗೆ ಅ.1 ರಂದು ಮೂರನೆ ವರ್ಷದ ಆಯುಧ ಪೂಜೆ ಪುರೋಹಿತ ವೆಂಕಟರಾಜ್ ಇವರ ನೇತೃತ್ವದಲ್ಲಿ ನಡೆಯಿತು.

ಸುಳ್ಯ: ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಮಹಾಸಭೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.28ರಂದು ಸಂಘದ ಕಟ್ಟಡದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರುಗಳಾದ ಪ್ರಭಾಕರ ನಾಯರ್, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಪಿ, ಸಿ.ಎ. ಗಣೇಶ್ ಭಟ್ ವೇದಿಕೆಯಲ್ಲಿದ್ದರು.ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ ಲೆಕ್ಕಪತ್ರ...
Ad Widget

ಮೈಸೂರು ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ

ಮೈಸೂರು ದಸರಾ ಹಬ್ಬದ ಅಂಗವಾಗಿ ಮೈಸೂರಿನ ಮಹಾರಾಜಾ ಕಾಲೇಜಿನ ವೇದಿಕೆ ಯಲ್ಲಿ ನಡೆಯುವ ಪ್ರತಿಷ್ಠಿತ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಯಕ್ಷನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ತಂಡದ ಸಹಯೋಗದಲ್ಲಿ ವಿನೋದ್ ಕರ್ಕೇರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್ ರಾವ್ ,ಪೃಥ್ವಿ ನಾಯಕ್ ತಂಡದ...

ಸುಳ್ಯ: ಮಹಿಳೆಯ ಮೊಬೈಲ್ ಫೋನ್ ಎಗರಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸುಳ್ಯದ ಲ್ಯಾಂಪ್ ಸೊಸೈಟಿ ಪಡಿತರ ಕೇಂದ್ರದ ಮಹಿಳಾ ಸಿಬ್ಬಂದಿಯ ಮೊಬೈಲ್ ಫೋನನ್ನು ಅಕ್ಕಿ ಪಡೆಯಲೆಂದು ಬಂದ ಮಹಿಳೆಯೋರ್ವರು ಕಳ್ಳತನ ಮಾಡಿದ ಸಿ ಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಈ ಘಟನೆಯು ಸೆ. 24ರಂದು ಸಂಜೆ ಘಟನೆ ನಡೆದಿದ್ದು ಸೊಸೈಟಿಯಲ್ಲಿ ಬಿಲ್ ಕೌಂಟರಿನ ಮೇಲೆ ಇರಿಸಿದ್ದ ಸಿಬ್ಬಂದಿಯ ಮೊಬೈಲ್ ಫೋನನ್ನು ಮಹಿಳೆ ತಾನು ಸೊಸೈಟಿಯಿಂದ...

ನಿಧನ :- ಚಂದ್ರ ಗೌಡ ಕುಕ್ಕುಂದ್ರಡ್ಕ

ಹರಿಹರ ಪಲ್ಲತ್ತಡ್ಕ ಗ್ರಾಮದ ಕುಕ್ಕುಂದ್ರಡ್ಕ ನಿವಾಸಿ ಚಂದ್ರ ಗೌಡ ಅವರು ಅನಾರೋಗ್ಯದಿಂದ ಸೆ.30 ರಂದು ಸಂಜೆ 7:15 ರ ಸುಮಾರಿಗೆ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಸಂತಿ, ಮಕ್ಕಳಾದ ಲಿಂಗಪ್ಪ, ಯೋಗೀಶ್, ಹರೀಶ್, ವೇದಾವತಿ, ವಿಶಾಲಾಕ್ಷಿ, ಪದ್ಮಾವತಿ, ಯಶೋಧ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಇವರು...

ಕೊಡಿಯಾಲ : ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ಸಿಐಎಫ್ ಸಾಲ ವಿತರಣೆ

ಶ್ರೀ ಗೌರಿ ಸಂಜೀವಿನಿ ಕೊಡಿಯಾಲ ಇದರ ಮಾಸಿಕ ಸಭೆ ಹಾಗೂ ಸಾಲ ವಿತರಣಾ ಕಾರ್ಯಕ್ರಮ ಸೆ.29 ರಂದು ನಡೆಯಿತು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ಉದ್ಘಾಟಿಸಿದರು.ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತರವರು ಯೋಜನೆಯ ಸದುಪಯೋಗ ಪಡೆಯುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯೆ ಯಶವಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ...

ಪೆರಾಜೆ : ಅಟೋ ಚಾಲಕರ ಸಂಘದ ಮಹಾಸಭೆ – ಅಧ್ಯಕ್ಷರಾಗಿ ಚಂದ್ರಶೇಖರ ಕೊಡ್ಯಗುಂಡಿ ಪುನರಾಯ್ಕೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ಬಿ ಯಂ ಯಸ್ ಸಂಯೋಜಿತ) ಶ್ರೀ ಶಾಸ್ತಾವು ಆಟೋ ಚಾಲಕರ ಸಂಘ ಪೆರಾಜೆ ಘಟಕದ ಮಹಾಸಭೆ ಸೆ. 30ರಂದು ಶ್ರೀ ಶಾಸ್ತಾವು ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ವಹಿಸಿದ್ದರು. ವೇದಿಕೆಯಲ್ಲಿ ಆಟೋ ಚಾಲಕ...

ನೇಸರ ಎಂಟರ್ ಪ್ರೈಸಸ್ ನಲ್ಲಿ ಆಯುಧ ಪೂಜೆ

ಅಡ್ಕಾರು ಕೋನಡ್ಕಪದವು ನಲ್ಲಿರುವ ನೇಸರ ಎಂಟರ್ ಪ್ರೈಸಸ್ ಮಿನರಲ್ ವಾಟರ್ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ಇಂದು ನಡೆಯಿತು.

ಅ. 2 ರಿಂದು 10 ರವರೆಗೆ ದಸರಾ ಉತ್ಸವ ; ಸರಕಾರದಿಂದ ಹೆಚ್ಚಿನ ಸಹಕಾರದ ಭರವಸೆ – ಸಚಿವ ಎಸ್.ಅಂಗಾರ

ಕಳೆದ ಕೆಲ ವರ್ಷಗಳಿಂದ ಕೋವಿಡ್ ನಿಂದಾಗಿ ದಸರಾ ಉತ್ಸವ ನಡೆಸಲು ಸಮಸ್ಯೆಯಾಗಿತ್ತು. ಈ ಬಾರಿಯ ದಸರಾಕ್ಕೆ ಸರಕಾರದ ವತಿಯಿಂದ ಹೆಚ್ಚಿನ ಅನುದಾನ ಒದಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಜತೆಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಎಲ್ಲಾ ಕಡೆಯ ದಸರಾ ಉತ್ಸವಗಳಿಗೆ ಒಂದೇ ರೀತಿ ಅನುದಾನ ನೀಡುತ್ತೇವೆ ಎಂದು ಸಚಿವರಾದ ಎಸ್ ಅಂಗಾರ...

ಕಡಿಮೆ ಬೆಲೆಗೆ ಆಫ್ರಿಕಾ ರಬ್ಬರ್‌ ಆಮದು – ಇಳಿಕೆ ಕಂಡ ರಬ್ಬರ್‌ ಧಾರಣೆ

ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್‌ ಧಾರಣೆ 6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಆರ್‌ಎಸ್‌ಎಸ್‌-4 ಗುಣಮಟ್ಟದ ರಬ್ಬರ್‌ಗೆ ಕೆಜಿಗೆ 144 ರೂ.ನಿಂದ 147 ರೂ.ವರೆಗೆ ದರ ಸಿಗುತ್ತಿದೆ. ಮಳೆಗಾಲದಲ್ಲಿ ರಬ್ಬರ್‌ ಉತ್ಪಾದನೆ ಕಡಿಮೆಯಾಗುವ ಕಾರಣ ರಬ್ಬರ್‌ ಶೀಟ್‌ ಧಾರಣೆಯಲ್ಲಿ ಏರಿಕೆಯಾಗಬೇಕಿತ್ತು. ಆದರೆ ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್‌ ಧಾರಣೆ ಆರು...
Loading posts...

All posts loaded

No more posts

error: Content is protected !!