- Saturday
- August 22nd, 2026
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನಾಗರಹಾಳದ ಹಜರತ್ ದಾವಲಮಲಿಕ್ ದೇವರ ಉರುಸ್ ಜಾತ್ರೆಯ ಸಂದರ್ಭದಲ್ಲಿ ಸುಳ್ಯದ ಸಾಹಿತಿ , ಚಿತ್ರ ನಿರ್ದೇಶಕ ಮತ್ತು ಜ್ಯೋತಿಷಿ ಹಾಗೂ ಗಾಯಕರಾದ ಎಚ್ . ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ , ಹಾಡಿರುವ ನಾಗರಹಾಳ ದಾವಲ್ ಮಲಿಕ್ ದೇವಾ ಎಂಬ ಭಕ್ತಿಗೀತೆಯನ್ನು ಹಜರತ್ ದಾವಲ್ ಮಲಿಕ್...
ಸುಳ್ಯ ಸರಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ಮಾರುತಿ 800 ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ. ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ. ವೀರಯ್ಯ ಹಿರೇಮಠ್ ,ಸುಳ್ಯ ಪಿ.ಎಸ್.ಐ. ದಿಲೀಪ್ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ...
ತಾಲೂಕಿನ ಮರ್ಕಂಜದ ಭಾಗದಲ್ಲಿ ಇಂದು ಮುಂಜಾನೆ 5.30ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ್ಕಂಜ ಭಾಗದ ಕೆಲವು ಕಡೆ ಹಾಗೂ ನೆಲ್ಲೂರು ಕೆಮ್ರಾಜೆ, ದೇವಚಳ್ಳ ಗ್ರಾಮದ ಕೆಲವು ಕಡೆಗಳಲ್ಲಿ ಈ ಅನುಭವವಾಗಿದ್ದು, ಭಾರೀ ಶಬ್ದ ಉಂಟಾಗಿ ಕೆಲ ಸಮಯ ಕಂಪನವಾದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅರ್ಪಿಸುವ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಅ.2ರಂದು ಜರುಗಿದ ತುಳುನಾಡಿನ ಸಾಂಪ್ರದಾಯಿಕ ಕಲೆ ಕುಡ್ಲದ ಪಿಲಿಪರ್ಬದ ಸಣ್ಣಹುಲಿ ವೇಷ ಸ್ಪರ್ಧೆಯಲ್ಲಿ ಸುಳ್ಯದ ಸೋನಾ ಅಡ್ಕಾರು ಅವರು ವೈಯುಕ್ತಿಕ ಬಹುಮಾನ ಪಡೆದುಕೊಂಡಿದ್ದು ಸುಳ್ಯಕ್ಕೆ ಸಣ್ಣಹುಲಿ ವೇಷ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಲಭಿಸಿದೆ....
ತಾಲೂಕಿನ ಮರ್ಕಂಜದ ಭಾಗದಲ್ಲಿ ಇಂದು ಮುಂಜಾನೆ 5.30ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಮರ್ಕಂಜ ಭಾಗದ ಕೆಲವು ಕಡೆ ಹಾಗೂ ನೆಲ್ಲೂರು ಕೆಮ್ರಾಜೆ, ದೇವಚಳ್ಳ ಗ್ರಾಮದ ಕೆಲವು ಕಡೆಗಳಲ್ಲಿ ಈ ಅನುಭವವಾಗಿದ್ದು, ಭಾರೀ ಶಬ್ದ ಉಂಟಾಗಿ ಕೆಲ ಸಮಯ ಕಂಪನವಾದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಕಳಂಜ ಗ್ರಾಮದ ಪಟ್ಟೆ ಶಿವಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಸುನಂದಾ ಪಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವಪ್ಪ ಪೂಜಾರಿ, ಪುತ್ರರಾದ ಭಾಸ್ಕರ, ಸದಾನಂದ, ಪ್ರಶಾಂತ್ ಹಾಗೂ ಪುತ್ರಿಯರಾದ ಅರುಣಾ ಪೈಚಾರು, ಉಮಾವತಿ ಮಾಡಾವು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಶೇಣಿ ಅಂಗನವಾಡಿಯಲ್ಲಿ ಶಾರದಾ ಪೂಜಾ ಕಾರ್ಯಕ್ರಮ ಅ.5 ರಂದು ಪ್ರಸಾದ್ ಭಟ್ ಮತ್ತು ಸಿದ್ಧಿವಿನಾಯಕ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಪುಸ್ಪಿತಾ ಬಿ. ಎಸ್, ಕಾರ್ಯದರ್ಶಿ ಧರ್ಮಾವತಿ, ಸಹಾಯಕಿ ಗೀತಾ ಕುಮಾರಿ, ಮಕ್ಕಳು, ಪೋಷಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಈ ಸಂದರ್ಭ ಮಾಧವ ಗೌಡ ಪಿಂಡಿಬನ ಮತ್ತು ಮನೆಯವರು ಗೋಡ್ರೆಜನ್ನು ಕೊಡುಗೆಯಾಗಿ...
ಏನೆಕಲ್ಲು ಸಂಜೀವಿನಿ ಕಟ್ಟಡದಲ್ಲಿ ನವರಾತ್ರಿ ಪ್ರಯುಕ್ತ ಹೊಲಿಗೆ ಯಂತ್ರಗಳಿಗೆ, ಆಯುಧ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ, ಎಂ.ಬಿ.ಕೆ. ಹೇಮಾವತಿ, ಹೊಲಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಾಲೆಮಜಲು ಅಮೃತ ಯುವತಿ ಮಂಡಲದ ವತಿಯಿಂದ ಮಕ್ಕಳಿಗೆ ಏಳು ದಿನಗಳ ಕಾಲ ಕುಣಿತ ಭಜನೆ ತರಬೇತಿ ಕಾರ್ಯಕ್ರಮ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ನಾಲ್ಕೂರು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್.ಉದಯಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಜನಾ ತರಬೇತುದಾರರಾದ ರಮೇಶ್ ಮೆಟ್ಟಿನಡ್ಕ ಭಜನಾ ಸಮಿತಿಯ ಸಂಚಾಲಕಿ ಪವಿತ್ರ ಕುಕ್ಕುಜೆ, ಅಮೃತ...
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಸುಳ್ಯ ತಾಲೂಕು ಸಮಿತಿ ಇದರ ವತಿಯಿಂದ ಪಂಚಾಯತ್ ನೌಕರರ ರಾಜ್ಯ ವ್ಯಾಪ್ತಿಯ ಹೋರಾಟದ ಕುರಿತು ಪೂರ್ವಭಾವಿ ಸಭೆಯು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ನೌಕರರ ಸಮಸ್ಯೆಗಳಿಗೆ ಸಂಘ ದ ವತಿಯಿಂದ ಸರ್ಕಾರಕ್ಕೆ ಹಲವಾರು ಮನವಿಗಳನ್ನು ನೀಡಿದರೂ ಇದುವರೆಗೂ ಯಾವುದೇ ಸ್ಪಂದನೆ ಇಲ್ಲದೇ ಇರುವುದರಿಂದ...
Loading posts...
All posts loaded
No more posts
