ಪಂಜ :- ಪ್ರಕೃತಿ ಡಿಜಿಟಲ್ ಸ್ಟುಡಿಯೋದಲ್ಲಿ ಗಣಹೋಮ

ಗುತ್ತಿಗಾರಿನಲ್ಲಿ ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿವರಾಮ ದೇವ ಮಾಲಕತ್ವದ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಇದರ ಸಹಸಂಸ್ಥೆಯಾದ ಪಂಜದ ವಾಣಿಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಮತ್ತು ಜೆರಾಕ್ಸ್ ಸಂಸ್ಥೆಯು ಒಂದು ವರ್ಷವನ್ನು ಪೂರೈಸುತ್ತಿದ್ದು ಆ ಪ್ರಯುಕ್ತ ನ.12 ರಂದು ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ...

ಕೆ.ವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಶಾಶ್ವತ್ ಅವರಿಗೆ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ಸನ್ಮಾನ

ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ೨೦೨೧-೨೦೨೨ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಾಶ್ವತ್ ಕೆ.ಎಸ್ ರಾಜ್ಯ ಮಟ್ಟದಲ್ಲಿ ಮೂರನೇ ರ್‍ಯಾಂಕ್ ಗಳಿಸಿದ್ದಾರೆ.ಇವರು ವಿರಾಜಪೇಟೆ ತಾಲೂಕು, ಸಿದ್ದಾಪುರ,ಕರಡಿಗೋಡು ಗ್ರಾಮದ ಕುಕ್ಕನೂರು ಸೂರಜ್ ಹಾಗೂ ಚಂಚಲ್ ದಂಪತಿಗಳ ಪುತ್ರ....
Ad Widget

ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ ಅಧಿಕಾರ ಸ್ವೀಕಾರ

ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆ ಸುಳ್ಯ ಇದರ ತರಬೇತಿ ಅಧಿಕಾರಿಯಾಗಿದ್ದ ದಿನೇಶ್ ಮಡ್ತಿಲ ಅವರು ಉಪಪ್ರಾಂಶುಪಾಲರಾಗಿ ನ.೭ರಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಿನೇಶ್ ಮಡ್ತಿಲರನ್ನು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ದಿನೇಶ್...

ಗೃಹರಕ್ಷಕ ಕಛೇರಿಯಲ್ಲಿ ಕನಕ ಜಯಂತಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಕನಕ ಜಯಂತಿ ನ.11ರಂದು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಪೌರರಕ್ಷಣಾ ಪಡೆ ದ.ಕ ಜಿಲ್ಲೆ ಇದರ ಮುಖ್ಯ ಪಾಲಕರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುದರ ಮೂಲಕ ಕನಕ ಜಯಂತಿ ಆಚರಣೆಗೆ ಚಾಲನೆ ನೀಡಿದರು....

ಬೊಳುಬೈಲಿನ ಪೀಸ್ ಸ್ಕೂಲ್ ನಲ್ಲಿ ‘ಲಸಿಕಾ ಶಿಬಿರ’ ಕಾರ್ಯಕ್ರಮ

ಬೊಳುಬೈಲು, ನ.5: ಪೀಸ್ ಸ್ಕೂಲ್, ಬೊಳುಬೈಲು, ಸುಳ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ 'ಲಸಿಕಾ ಶಿಬಿರ' ಕಾರ್ಯಕ್ರಮವು ಪೀಸ್ ಸ್ಕೂಲ್ ವಠಾರದಲ್ಲಿ ಜರುಗಿತು. ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ, ಇದರ ಆರೋಗ್ಯಾಧಿಕಾರಿಯಾದ ಡಾ.ಗಿರೀಶ್ ಮುಂದಿನ ತಿಂಗಳಿನಲ್ಲಿ ಒಂದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ನೀಡಲಾಗುವ ಜೆಇ(ಜಪಾನೀಸ್ ಎನ್ಸಫಾಲಿಟಿಸ್) ಲಸಿಕೆಯು ಪಡೆಯುವ ಮಹತ್ವದ...

ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವಿತಾ ಕೋಡಂದೂರು ಸಾಧಕಿಗೆ ಸಂಗೀತ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಯ್ಕೆ

ಪೆರ್ನಾಜೆ: ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ವಠಾರದಲ್ಲಿ ನ13 ರಂದು ನಡೆಯುವ ವಿವಿಧ ಕವಿಗೋಷ್ಠಿ ವಿಚಾರಗೋಷ್ಠಿ ಸಭಾ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ದಲ್ಲಿ ಸವಿತಾ ಕೋಡಂದೂರು ಸಂಗೀತ ಬರಹ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಗಿದ್ದಾರೆ.ಗ್ರಾಮೀಣ ಕಲಾಪ್ರತಿಭೆ, ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ...

ಕಲ್ಲಪ್ಪಳ್ಳಿ ಬಾಟೋಳಿ ಗಡಿಪ್ರದೇಶದ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗಡಿ ಪ್ರದೇಶ ಕಲ್ಲಪ್ಪಳ್ಳಿ-ಬಾಟೋಳಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗುದ್ದಲಿ ಪೂಜೆಯನ್ನು ನ.11ರಂದು ನೆರವೇರಿಸಲಾಯಿತು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರ ವಿಶೇಷ ಅನುದಾನದಲ್ಲಿ ಸುಮಾರು 110 ಮೀಟರ್ ಗಳಷ್ಟು ಕಾಮಗಾರಿ ನಡೆಯುತ್ತಿದೆ. ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಸ್ಥಳೀಯ ಮುಖಂಡ ನಂದಕುಮಾರ್,ಸುಧಾಕರ ಬಾಟೋಳಿ,ಗುತ್ತಿಗೆದಾರ ಪುನೀತ್ ಕುಂಚಡ್ಕ ಹಾಗೂ ಸ್ಥಳೀಯ...

ನ.26 : ಸಚಿವ ಅಂಗಾರರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ

ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಸಚಿವರ ಸಹಕಾರದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆ ಎರಡನೇ ಬಾರಿಗೆ ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಡೆಯುವ ಉದ್ಯೋಗ...

ಕೋಡಿಂಬಾಳ : ರಿಕ್ಷಾ ಪಿಕಪ್ ಡಿಕ್ಕಿ – ಕೂತ್ಕುಂಜದ ಬಾಲಕ ಮೃತ್ಯು

ಕಡಬ ತಾಲೂಕು ಕೊಡಿಂಬಾಳದಲ್ಲಿ ರಿಕ್ಷಾ - ಪಿಕಪ್ ಮಧ್ಯೆ ನಡೆದ ಅಪಘಾತದಲ್ಲಿ ಪಂಜದ ಬಾಲಕ ಮತ ಪಟ್ಟ ಘಟನೆ ನ.10 ಸಂಜೆ ವರದಿಯಾಗಿದೆ. ಕೂತ್ಕುಂಜ ಗ್ರಾಮದ ಜಳಕದಹೊಳೆ ಸಮೀಪದ ಮೀನಡ್ಕ ಕಟ್ಟಪುಣಿ ನವೀನ್ ಮತ್ತು ಶ್ರೀಮತಿ ನಿಶ್ಮಿತಾ ದಂಪತಿಗಳ ಪುತ್ರ 4 ವರ್ಷ ಪ್ರಾಯದ ಹಾರ್ದಿಕ್ ಮೃತ ಪಟ್ಟ ಬಾಲಕ.ಕೊಡಿಂಬಾಳ ಆನಂದ ಎಂಬವರ ರಿಕ್ಷಾದಲ್ಲಿ ನಿಶ್ಮಿತಾ...

ಅರಂತೋಡು : ಸಹಕಾರ ಸಪ್ತಾಹದ ಅಂಗವಾಗಿ ಕ್ರೀಡೋತ್ಸವ

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಶ್ರಯದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಲುವಾಗಿ ಸುಳ್ಯ ತಾಲ್ಲೂಕಿನ ಸಹಕಾರಿಗಳಿಗಾಗಿ ಪ್ರಥಮವಾಗಿ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನ.11 ರಂದು ನಡೆಯಿತು. .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಸಹಕಾರಿ ಸಂಘದ...
Loading posts...

All posts loaded

No more posts

error: Content is protected !!