- Monday
- August 24th, 2026
ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಸಮೀಪದಲ್ಲಿದ್ದ ಮನೆಗೂ ವ್ಯಾಪಿಸಿದ ಘಟನೆ ಜ.2 ರಂದು ನಡೆದಿದೆ. ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ. ರಬ್ಬರ್ ಶೀಟ್ ಒಣಗಿಸುವ ಸ್ಮೋಕ್ ಹೌಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಪರಿಣಾಮ ಬೆಂಕಿಯ ಕೆನ್ನಾಲಿಗೆಗಳು ಸುತ್ತಲಿಡೀ ವ್ಯಾಪಿಸಿ ಅಪಾರ ಪ್ರಮಾಣದ ಹಾನಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಕೃಷಿಕ...
ಎಲಿಮಲೆ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಮತ್ತು ಸೇವಾ ಭಾರತಿ helpline ಟ್ರಸ್ಟ್ (ರಿ) ಸುಳ್ಯ ಇವುಗಳ ಸಹಯೋಗದಲ್ಲಿ ಎಲಿಮಲೆ ಜ್ಞಾನ ದೀಪ ಶಾಲೆಯಲ್ಲಿ "ಬಾಲಸಂಗಮ " ನಡೆಯಿತು. ಸುಳ್ಯ ತಾಲೂಕಿನ ಹಲವಾರು ಅಂಗನವಾಡಿ,ಶಿಶುಮಂದಿರ ಹಾಗು ಬಾಲಗೋಕುಲದಿಂದ ಒಂಭತ್ತನೇ ತರಗತಿಯ ಒಳಗಿನ ನೂರಾರು ಮಕ್ಕಳ ಸಂಗಮಕ್ಕೆ ಎಲಿಮಲೆ ಜ್ಞಾನ ದೀಪ ಶಾಲೆ...
ಗುಜರಾತಿನ ಕಚ್ ಪ್ರದೇಶದಲ್ಲಿ ಪ್ರಕೃತಿಯನ್ನು ಆರಾಧಿಸುತ್ತಾ,ಲಕ್ಷ ಲಕ್ಷ ಮರಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮ ಊರಿನವರೇ ಆದ ಆರ್.ಕೆ.ನಾಯರ್ ಅವರು ಇಂದು ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮ ಜಯನಗರದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ,ಶ್ರೀ ಗುಳಿಗ ದೈವ,ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದರು.ಬಳಿಕ ದೈವಗಳ ಪ್ರಸಾದ ಸ್ವೀಕರಿಸಿ,ದೈವಸ್ಥಾನದ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ...
ದೇವಚಳ್ಳ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜ.3 ರಂದು ಪೂ. 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ ಬೆಳ್ಳಾರೆ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ . ಬೆಳ್ಳಾರೆ-1, ಬೆಳ್ಳಾರೆ -2 ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ,ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ರಿಂದ ಸಾಯಂಕಾಲ 6 ರ ತನಕ ವಿದ್ಯುತ್ ವ್ಯತ್ಯಯಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ...
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದದ ಪ್ರಯುಕ್ತ ಜನುವರಿ 1 ,2 ಮತ್ತು 8 ರಂದು ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಜ.1 ರಂದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಸುಳ್ಯ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ.ಉದ್ಘಾಟನೆ ನೆರವೇರಿಸಿದರು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ...
ಗುತ್ತಿಗಾರು ಸರಕಾರಿ ಪ್ರೌಢಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.31 ರಂದು ನಡೆಯಿತು. ಸುವರ್ಣ ಮಹೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಾಣ ಗೊಂಡ ಪ್ರಯೋಗಾಲಯ ಕೊಠಡಿ, ಶಾಲಾ ರಸ್ತೆಯ ಕಾಂಕ್ರೀಟ್ , ಶಾಲಾ ಎದುರಿನ ಇಂಟರ್ ಲಾಕ್ ನ್ನು ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿದರು. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ...
ಸುಳ್ಯ ತಾಲೂಕು ನಿವೃತ್ತ ನೌಕರರ ಸಂಘ (ರಿ) ಹಾಗೂ ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಸಂಘದ ‘ ಸಂಧ್ಯಾರಶ್ಮಿ” ಯಲ್ಲಿ ಪುಸ್ತಕಗಳನ್ನು ಬಿಡುಗಡೆ ಹಾಗೂ ಕುವೆಂಪು ಜಯಂತಿ ಆಚರಿಸಲಾಯಿತು. ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗದ ಅಧ್ಯಕ್ಷ ನೀರಬಿದಿರೆ ನಾರಾಯಣ ಸುಳ್ಯ (ನೀನಾಸು)ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ| ಎಸ್ ರಂಗಯ್ಯ, ಗೌರವಾಧ್ಯಕ್ಷ ಶ್ರೀ ಅಚ್ರಪ್ಪಾಡಿ ಬಾಬು...
ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ "ಬಾಬು ಮಾಸ್ಟರ್ ನೆನಪು" ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್...
ಬದುಕು ಕಲಿಸುತ್ತಿದೆ ನೂರಾರು ಪಾಠ,ಮನವು ಹೇಳುತ್ತಿದೆ ಇದು ನಿನ್ನದೇ ಓಟ,ಸೋಲು ಗೆಲುವುಗಳೇ ಜೀವನ ಪಾಠ,ಕಷ್ಟ ನಷ್ಟಗಳೇ ಬದುಕಿನ ಪರೀಕ್ಷೆ…ಕನಸೆಂಬುವುದು ಗೆಲುವಲ್ಲ,ಕನಸಿನೊಳಗಡೆ ಗೆಲುವಡಗಿಹುದು,ಹುಡುಕಿ ಸಾಗಿದಾಗಲೇ ಕೈಗೆ ಸಿಗುವುದು, ಗೆಲುವು ಕೈಗೆ ಸಿಗುವುದು…ಇಲ್ಲಿ ನೋವು ಬದುಕ ಅಂತ್ಯವಲ್ಲ,ಕಷ್ಟ ಕನಸ ಮರೆಸೋದಿಲ್ಲ,ಸೋಲೆಂಬುವುದು ಶಾಶ್ವತವಲ್ಲ,ಸೋಲನ್ನು ಸೋಲಿಸುವ ಕ್ಷಣವು ಬರುವುದು,ಬದುಕಿನಲ್ಲಿ ಅವಮಾನಕ್ಕುತ್ತರಿಸುವ ದಿನವು ಬರುವುದು ಛಲವಿದ್ದರೆ ಮನದಲ್ಲಿ, ಗೆಲ್ಲುವ ಛಲವಿದ್ದರೆ ಮನದಲ್ಲಿ… ✍️ಉಲ್ಲಾಸ್...
Loading posts...
All posts loaded
No more posts
