ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ ಸುಳ್ಯದ ಪೆರಾಜೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಮಹ ಎಫ್ ಝಡ್ ಬೈಕ್ ಗೆ ಡಿಕ್ಕಿ ಹೊಡೆದಿದೆ.ಘಟನೆಯಿಂದ ಬೈಕ್ ನಲ್ಲಿದ್ದ ಹೊನ್ನಪ್ಪ ಹಾಗೂ ಸಹಸವಾರನಿಗೆ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ...

ಮಗಳಿಗಾಗಿ ಧರೆಗಿಳಿದ ಆಧುನಿಕ ಭಗೀರಥ ; ಬೀದಿ ನಾಯಿಯೊಂದನ್ನು ಅದರ ಮರಿಯೊಂದಿಗೆ ಸೇರಿಸಿ ಮಾನವೀಯತೆ ಮೆರೆದ ಬಳ್ಪ ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ

ಸುಬ್ರಹ್ಮಣ್ಯ ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್​​ಗೆ ಬೀದಿ ನಾಯಿಯೊಂದು ಢಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದ್ದು, ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದ ಸಂದರ್ಭ ಕಾರ್ ಬಂಪರ್​ನೊಳಗೆ ಅದೇ ನಾಯಿ ಪತ್ತೆಯಾಗಿರುವ ಸಂಗತಿ ನಡೆದಿತ್ತು. ಆದರೆ ಆ ಬೀದಿ ನಾಯಿ ಅದಾಗಲೇ ತನ್ನ ಮರಿಗಳನ್ನು ಬಿಟ್ಟು ಸುಮಾರು 70 ಕಿಲೋ ಮೀಟರ್ ಸಂಚಾರಿಸಿತ್ತು. ಈಗಿನ...
Ad Widget

ಸುಳ್ಯಕ್ಕೆ ,ರೋಟರಿ ಜಿಲ್ಲಾ ಗವರ್ನರ್ ಬೇಟಿ

ಸುಳ್ಯಕ್ಕೆ ,ರೋಟರಿ ಜಿಲ್ಲಾ ಗವರ್ನರ್ ಬೇಟಿ ಮಧುಸೂಧನ ಕುಂಭಕೊಡು ಇವರ ಮನೆಯಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ರವರು ಮಾತನಾಡಿ ರೋಟರಿ ಸಂಸ್ಥೆಯಿಂದ 4 ಯೋಜನೆಯನ್ನು ವನಸಿರಿ ,ಜಲಸಿರಿ,ವಿದ್ಯಾಸಿರಿ,ಆರೋಗ್ಯ ಸಿರಿ ಅನುಷ್ಠಾನ ಗೊಳಿಸಲಾಗಿದೆ ಎಂದು ಹೇಳಿದರು,ಸುಳ್ಯದಲ್ಲಿ ಚಂದ್ರ ಶೇಖರ್ ಪೇರಾಲು ರವರ ನೇತೃತ್ವದಲ್ಲಿ ವನಸಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು,ಮುಂದಿನ...

ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಸದಸ್ಯರಿಂದ ಸವಣೂರಿನ ರುಧ್ರಭೂಮಿಯಲ್ಲಿ ಶ್ರಮದಾನ

ಭಾವೈಕ್ಯ ಯುವಕ ಮಂಡಲ(ರಿ.) ಪೆರುವಾಜೆ ಇದರ ಸದಸ್ಯರಿಂದ ಇಂದು ಸವಣೂರಿನ ರುಧ್ರಭೂಮಿಯಲ್ಲಿ ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಭಾವೈಕ್ಯ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಶೇಣಿ: ಸೋಲಾರ್ ದೀಪ ಅಳವಡಿಕೆ

ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಣಿ ಗರಡಿ ರಸ್ತೆಗೆ ಹಲವು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಪ್ರತಿನಿಧಿಗಳ ಪ್ರಯತ್ನದಿಂದ ಗ್ರಾಮ ಪಂಚಾಯತ್ ವತಿಯಿಂದ 2022-23ನೇ ಸಾಲಿನ ಸಾರ್ವಜನಿಕ ಕಾಮಗಾರಿಯಲ್ಲಿ ಪ್ರಥಮವಾಗಿ ಸೋಲಾರ್ ದಾರಿ ದೀಪ ಅಳವಡಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ, ಸದಸ್ಯರುಗಳಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು,...

ಕಾಂಚೋಡು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ವರೆಗೆ ನಡೆಯಲಿದ್ದು, ಇಂದು(ಫೆ. 4ರಂದು) ಗೊನೆ ಮುಹೂರ್ತ ನೆರವೇರಿತು. ಈ ಪ್ರಯುಕ್ತ ಬೆಳಗ್ಗೆ ದೇವತಾ ಪ್ರಾರ್ಥನೆ, ಗೊನೆ ಮುಹೂರ್ತ ನಡೆಯಿತು. ದೇವಳದ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು, ಪ್ರಧಾನ ಕಾರ್ಯದರ್ಶಿ ಯಂ. ಶಂಕರನಾರಾಯಣ ಭಟ್ ಮತ್ತು ಆಡಳಿತ...

ಸುಬ್ರಹ್ಮಣ್ಯ : ಕೃಷಿ ಮಾಹಿತಿ ಕಾರ್ಯಗಾರ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಮಂಗಳೂರು, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ರಿ.) ಸುಬ್ರಹ್ಮಣ್ಯ, ನಿಸರ್ಗ ಯುವಕ ಮಂಡಲ ಐನೆಕಿದು ಇವುಗಳ ಸಹಯೋಗದೊಂದಿಗೆ ಜ.30 ರಂದು ಸುಬ್ರಹ್ಮಣ್ಯದ ಕುಮಾರಧಾರ ಸಭಾಂಗಣದಲ್ಲಿ ತೋಟಗಾರಿಕಾ ಬೆಳೆಗಳ ಕೊಯ್ಲೋತ್ತರ ನಿರ್ವಹಣೆ ಮತ್ತು ಸಂಸ್ಕರಣೆ ಹಾಗೂ ತರಕಾರಿ ಕೈತೋಟ ಕೃಷಿ ಮಾಹಿತಿ ಕಾರ್ಯಗಾರ ನಡೆಯಿತು.ಸುಬ್ರಹ್ಮಣ್ಯ ಗ್ರಾಮ...

ತಕ್ಷಣ ಬೇಕಾಗಿದ್ದಾರೆ

ಕಂದಡ್ಕದ ಹಾಳೆತಟ್ಟೆ ಘಟಕದಲ್ಲಿ ಕೆಲಸ ಮಾಡಲು ಜನ ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದುಸಂಪರ್ಕಿಸಿ: 7899677309, WhatsApp: 6363491079

ಗೌರಮ್ಮ ಪಡುಮಜಲು ನಿಧನ

ಮರ್ಕಂಜ ಗ್ರಾಮದ ಪಡುಮಜಲು ಮನೆ ( ಕಾಯಿಪಳ್ಳ ) ದಿ. ಕೂಸಪ್ಪ ಗೌಡರ ಪತ್ನಿ ಗೌರಮ್ಮ ( 71ವ.)ರವರು ಫೆ.1 ರಂದು ನಿಧನರಾದರು.ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೇಂದ್ರ ಸರಕಾರ ಮಂಡಿಸಿದ 2023-24 ನೇ ಸಾಲಿನ ಚುನಾವಣಾ ವರ್ಷದಲ್ಲಿ ಬಜೆಟ್ ಕೊಡುಗೆ ನಿರೀಕ್ಷಿಸಿದ್ದ

ಕೇಂದ್ರ ಸರಕಾರ ಮಂಡಿಸಿದ 2023-24 ನೇ ಸಾಲಿನ ಚುನಾವಣಾ ವರ್ಷದಲ್ಲಿ ಬಜೆಟ್ ಕೊಡುಗೆ ನಿರೀಕ್ಷಿಸಿದ್ದ ರಾಜ್ಯದ ಜನರಿಗೆ ಇದು ಅಮೃತ ಕಾಲ ಅಲ್ಲಾ, ಇದು ವಿಷ ಗಳಿಗೆಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಚುನಾವಣಾ ವರ್ಷವಾದ ಕಾರಣ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಉತ್ತಮ ಯೋಜನೆಗಳು...
Loading posts...

All posts loaded

No more posts

error: Content is protected !!