ನಾಲ್ಕೂರು : ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ

ಸುಳ್ಯ ತಾಲೂಕಿನ ನಾಲ್ಕೂರಿನ ಚಾರ್ಮತ, ವಲ್ಪಾರೆ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡು ಹೊತ್ತಿ ಉರಿಯುತ್ತಿದೆ ಎಂದು ತಿಳಿದುಬಂದಿದ್ದು, ಆಸುಪಾಸಿನ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ತಿಳಿದುಬಂದಿದೆ.ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳಿಯರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

ಸಂಪಾಜೆಯ ಅರೆಕಲ್ಲು ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ

ಮಡಿಕೇರಿ ಉಪ ವಿಭಾಗದ ಸಂಪಾಜೆ ವಲಯ ಕಡಮಕಲ್ಲು ಮೀಸಲು ಅರಣ್ಯ ಅರೆಕಲ್ಲು ಬಳಿ ಕಾಡ್ಗಿಚ್ಚಿನಿಂದ ವ್ಯಾಪಕ ಬೆಂಕಿ ಆವರಿಸಿಕೊಂಡಿದೆ.ಬೆಂಕಿ ನಂದಿಸಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ,ಸ್ಥಳೀಯರು ಅರ ಸಾಹಸ ಪಡುತ್ತಿದ್ದು, ನೂರಾರು ಮರಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
Ad Widget

ನಂದಕುಮಾರ್ ಪರವಾಗಿ ಹೆಚ್ಚಿದ ಕಾರ್ಯಕರ್ತರ ಒತ್ತಡ

ಸುಳ್ಯ ಕ್ಷೇತ್ರಕ್ಕೆ ಜಿ ಕೃಷ್ಣಪ್ಪರ ಆಯ್ಕೆಯಿಂದ ಕೆರಳಿರುವ ಸುಳ್ಯದ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಮಂಗಳೂರು ಚಲೋ ಅಭಿಯಾನದ ಮೂಲಕ ಜಿಲ್ಲಾ ನಾಯಕರಿಗೆ ಒತ್ತಡ ಹೇರಲು ಮಂಗಳೂರಿಗೆ ಸುಳ್ಯ ಮತ್ತು ಕಡಬದಿಂದ ಸಾವಿರಾರು ಕಾರ್ಯಕರ್ತರು ತೆರಳಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶ ಗೊಳ್ಳಲಿದ್ದಾರೆ. ಮಂಗಳೂರಿಗೆ ತೆರಳುವ ಮುನ್ನ ಸುಳ್ಯ ಬ್ಲಾಕ್ ಕಾಂಗ್ರೆಸ್...

ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ
ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ

ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆಗೆ ಕೇಂದ್ರ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಮೇ 10ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಮೇ 13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ಘೋಷಣೆ ಆದ ತಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬಂದಿದೆ. ಕಳೆದ ಬಾರಿ 2018ರ ಮೇ 23ರಂದು ಸರಕಾರ ರಚನೆಯಾಗಿದ್ದು, ಈ ಬಾರಿ...

ಮಾ.29ರಿಂದ ಏ.2ರ ತನಕ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗು ಧರ್ಮ ನಡಾವಳಿ

ಸುಳ್ಯ:ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗು ಧರ್ಮ ನಡಾವಳಿ ಮಾ.29ರಿಂದ ಏ.2ರ ತನಕ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲ್ಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.30ರಂದು ಪೂ.6.30ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ...

ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿಯವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಗುಪ್ತವಾರ್ತೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಮೂರು ವರ್ಷಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಆಗಮಿಸಿದ್ದರು. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದರು.ಉಡುಪಿ ಜಿಲ್ಲೆಯ ಕಾಪು ಮೂಲದವರಾದ ನವೀನ್ ಚಂದ್ರ ಅವರನ್ನು ಮುಂಬರುವ ವಿಧಾನ...

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕಾಲಾವಕಾಶ ವಿಸ್ತರಿಸಿದ ಸರ್ಕಾರ

ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಗಡುವು ನೀಡಿತ್ತು. ಮಾರ್ಚ್ 31 2023ರೊಳಗೆ ಎಲ್ಲರೂ ಆಧಾರ್-ಪ್ಯಾನ್ ಲಿಂಕ್ ಮಾಡಲು ಡೆಡ್ಲೈನ್ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಈ ಗಡುವನ್ನು ವಿಸ್ತರಣೆ ಮಾಡಿದೆ. ಆಧಾರ್ ಜೋಡಣೆ ಅವಧಿಯನ್ನು 2023 ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಪ್ಯಾನ್ ಕಾರ್ಡ್‌ನಲ್ಲಿನ ವಿಳಾಸವನ್ನು ಆಧಾರ್ ಸಹಾಯದಿಂದ...

ಮಾ. 30 ; ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

33/11 ಕೆ.ವಿ ಸುಬ್ರಹ್ಮಣ್ಯ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಮಾ.30 ರಂದು ಗುರುವಾರ ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಸುಬ್ರಹ್ಮಣ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಕುಮಾರಧಾರ, ನಡುಗಲ್ಲು, ಹರಿಹರ, ಕೈಕಂಬ, ಏನೆಕಲ್ಲು ಹಾಗೂ ಆದಿಶೇಷ ಫೀಡರ್‌ಗಳಲ್ಲಿ ಬೆಳಿಗ್ಗೆ 9.00 ರಿಂದ ಸಾಯಂಕಾಲ 6.00 ರ ತನಕ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ...

ಕವನ : ಸೋಲು ಗೆಲುವು ಸ್ಥಿರವಲ್ಲ, ಪ್ರೀತಿ ಸ್ನೇಹ ಶಾಶ್ವತ…

ಕೊನೆಯಿರದ ದಾರಿಯಲ್ಲಿ ಕೊನೆ ಹುಡುಕುವ ಕನಸೇತಕೆ…?ಮೂರು ದಿನದ ಬದುಕಿನಲ್ಲಿ ಗುರಿ ಸೇರುವ ತವಕದಲ್ಲಿ…ತೆಗಳುವವರ ಮಾತುಗಳಿಗೆ ಕಿವಿಯ ಕೊಟ್ಟು ಸಾಗಬೇಕೇ…?ಬೆನ್ನು ತಟ್ಟಿ ಜೊತೆಗೆ ನಿಲ್ಲೋ ನಿನ್ನವರು ಜೊತೆಗಿರಲು, ನಿನ್ನ ಜೊತೆಗಿರಲು…ಪ್ರತಿಯೊಂದು ಹೆಜ್ಜೆಯಲ್ಲೂ ಸವಾಲು ನೂರು ತುಂಬಿರಲು, ಏಕಾಂಗಿ ನೀನಲ್ಲ ನಿನ್ನವರ ಮಧ್ಯದಲ್ಲಿ…ಜೊತೆಗೆ ಯಾರೂ ಇಲ್ಲವೆಂದು ಕೊರಗದಿರು ನೀನಿಲ್ಲಿ, ನಿನ್ನವರ ಪ್ರೀತಿ ಮುಂದೆ ಬೇರೆನು ಬೇಕಿಲ್ಲಿ, ನಿನಗೆ ಬೇರೇನು...

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ : 20ನೇ ಕಕ್ಕೆಪದವು ಶಾಖೆ ಉದ್ಘಾಟನೆ

ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುಳ್ಯ ಗೌಡರ ಯುವ ಸೇವಾ ಸಂಘ ಪವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಇದರ 20ನೇ ಕಕ್ಕೆಪದವು ಶಾಖೆಯು ವಿದ್ವಾನ್ ರಾಜ್ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಆರಂಭಗೊಂಡಿತು. ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಮೈರ ಶಾಖೆ ಉದ್ಘಾಟಿಸಿ ಮಾತನಾಡಿ, ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳು ಕಾರ್ಯಾರಂಭಗೊಳ್ಳುವುದು...
Loading posts...

All posts loaded

No more posts

error: Content is protected !!