ಬಂಗ್ಲೆಗುಡ್ಡೆ :ಶಾಲಾ ಮಂತ್ರಿಮಂಡಲ ರಚನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಇಲ್ಲಿ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯಾಯಿತು. ವಿದ್ಯಾರ್ಥಿಗಳಿಗೆ ಮತದಾನದ ಪರಿಕಲ್ಪನೆ ಮಾಡಿಸಲು ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಮತಪ್ರಚಾರ, ಮತದಾನ ಇವುಗಳ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಮುಖ್ಯಶಿಕ್ಷಕ ರಾದ ಕಮಲ. ಎ ಮಾರ್ಗದರ್ಶಿ ಶಿಕ್ಷಕರಾದ ಸುಭಾಷ್ ಎನ್ ಹಾಗೂ...

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಆರಂಭಿಸಲು ಅನುಮೋದನೆ

ಪ್ರಸಕ್ತ 2023 24 ನೇ ಸಾಲಿನಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಕಂಪ್ಯೂಟರ್ ಇಂಜಿನಿಯರಿಂಗ್ ಅನ್ನು ಪ್ರಾರಂಭಿಸಲು ಹಾಗೂ ಎಂ ಬಿ ಎ ಇದರ ಸೀಟು ಹೆಚ್ಚಳಕ್ಕೆ ಎ ಐ ಸಿ ಟಿ ನ್ಯೂ ಡೆಲ್ಲಿ ಇಂದ ಅನುಮತಿ ದೊರೆತಿದೆ.ಈಗಾಗಲೇ 2023 24 ಸಾಲಿನ ಇಂಜಿನಿಯರಿಂಗ್ ದಾಖಲಾತಿಗಳು ಪ್ರಾರಂಭವಾಗಿದ್ದು ಇಂಜಿನಿಯರಿಂಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್...
Ad Widget

ಕುಮ್ ಕುಮ್ ಫ್ಯಾಷನ್‌ನಲ್ಲಿ ಬ್ರಾಂಡೆಡ್ ಕಂಪೆನಿಗಳ ರೈನ್‌ಕೋಟ್‌ಗಳ ಅಮೋಘ ಮಾರಾಟ – 30% ಡಿಸ್ಕೌಂಟ್

ಸುಳ್ಯದ ಪ್ರತಿಷ್ಟಿತ ವಸ್ತ್ರ ಮಳಿಗೆ ಕುಮ್ ಕುಮ್ ಫ್ಯಾಷನ್‌ನಲ್ಲಿ ಹಲವು ಬ್ರಾಂಡೆಡ್ ಕಂಪೆನಿಗಳ ರೈನ್‌ಕೋಟ್‌ಗಳ ಅಮೋಘ ಮಾರಾಟ ಆರಂಭಗೊಂಡಿದ್ದು, ಬ್ರಾಂಡೆಡ್ ಕಂಪೆನಿಗಳ ರೈನ್ ಕೋಟ್‌ಗಳ ಮೇಲೆ ಶೇ.30 ರಷ್ಟು ದರ ಕಡಿತ ಮಾಡಲಾಗಿದೆ. ವಿವಿಧ ಕಂಪೆನಿಗಳ ಬ್ರಾಂಡೆಡ್ ವರ್ಣಮಯ ರೈನ್ ಕೋಟ್‌ಗಳ ಹೊಸ ಸಂಗ್ರಹ ಬಂದಿದೆ. ರೈನ್ ಕೋಟ್‌ಗಳು ಮಿತವಾದ ದರದಲ್ಲಿ ಲಭ್ಯವಿದೆ.ಮಹಿಳೆಯರು-ಪುರುಷರು, ಮಕ್ಕಳಿಗೆ ಬೇಕಾದ...

ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಬಿಡುಗಡೆ

ಕುಶಾಲನಗರದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರ ' ಹನಿಹನಿ ಇಬ್ಬನಿ' ಹನಿಗವನ ಸಂಕಲನ ಬಿಡುಗಡೆ ಜೂನ್ 10 ರಂದು ಅನುಗ್ರಹ ಕಾಲೇಜಿನಲ್ಲಿ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ.ಪಿ.ರಮೇಶ್ ರವರು ಉದ್ಘಾಟಿಸಿ ಮಾತನಾಡಿ ಲೀಲಾಕುಮಾರಿಯವರ ಸಾಹಿತ್ಯ ಚಟುವಟಿಕೆಗಳನ್ನು ಕಳೆದ ಹತ್ತು ವರ್ಷದಿಂದ ಗಮನಿಸಿದ್ದೇನೆ.ಕೊಡಗಿನ ಅತ್ಯಂತ ಚಿಕ್ಕ ಗ್ರಾಮವಾದ ಚೆಂಬು...

ನಿವೃತ್ತ ಶಿಕ್ಷಕ ಗಣಪತಿ ಚಾಂತಾಳ ನಿಧನ

ಕೊಲ್ಲಮೊಗ್ರ ಗ್ರಾಮದ ಚಾಂತಾಳ ನಿವೃತ್ತ ಶಿಕ್ಷಕ ಗಣಪತಿ ಗೌಡ ಚಾಂತಾಳ ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಬೊಳಿಯಮ್ಮ , ಪುತ್ರರಾದ ಸಚಿನ್ ಚಾಂತಾಳ, ಸವಿನ್ ಚಾಂತಾಳ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಪಾಯದ ಸ್ಥಿತಿಯಲ್ಲಿರುವ ಅರಮನೆಗಯ ತೂಗುಸೇತುವೆ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಸೇತುವೆ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವ ಭರವಸೆ

ಬಹುವರ್ಷಗಳ ಬೇಡಿಕೆಯಾಗಿರುವ ಮರ್ಕಂಜ ಹಾಗೂ ಅರಂತೋಡು ಗ್ರಾಮಗಳನ್ನು ಸಂಪರ್ಕಿಸುವ ಅರಮನೆಗಯ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ಕೂಗು ಬಹುದಿನಗಳಿಂದ ಕೇಳಿ ಬಂದಿತ್ತು. ಅರಮನೆಗಯ ನಿವಾಸಿಗಳು ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಸೇತುವೆಯ ಕನಸು ನನಸಾಗಿಯೇ ಉಳಿದಿದೆ. ಇರುವ ಒಂದು ತೂಗುಸೇತುವೆ ಕೂಡ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಇದನ್ನೇ ಇಲ್ಲಿನ ಜನ...

ಎನ್ ಎಂ ಪಿ ಯು ಕಾಲೇಜು ಅರಂತೋಡಿನ ಪುಶಾಂತ್ ಎಸ್ ಬಿ, ಸುರಕ್ಷಾ ಎಂ ಡಿ, ಕೃಷ್ಣಕಾಂತ್ ಅಸ್ಕೆಕರ್ ಗೆ ಮರು ಮೌಲ್ಯಮಾಪನದಲ್ಲಿ ಅಧಿಕ ಅಂಕ

ದ್ವೀತಿಯ ಪಿ ಯು ಸಿ ಫಲಿತಾಂಶವು ಈಗಾಗಲೆ ಪ್ರಕಟವಾಗಿದ್ದು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪುಶಾಂತ್ ಎಸ್ ಬಿ ಇವರಿಗೆ 533 ಅಂಕಕ್ಕೆ 5 ಅಂಕ ಹೆಚ್ಚುವರಿ ಪಡೆದು 538 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಸುರಕ್ಷಾ ಎಂ ಡಿ ಇವರಿಗೆ 523ಕ್ಕೆ ಹೆಚ್ಚುವರಿ 15 ಅಂಕ...

ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಕಲಾ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯ

ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಕಲಾ ಸಂಘದಿಂದ ಪ್ರಥಮ ಕಲಾ ವಿಭಾಗಧ ವಿಧ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಮಾಡಿ ಸ್ವಚ್ಚತೆಯೇ ಪಾವಿತ್ರೀಯತೆ ಮೋದಲು ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ನಮ್ಮಿಂದಲೆ ಸ್ವಚ್ಚತಾ ಕಾರ್ಯ ಆರಂಭವಾಗಬೇಕು ಸ್ವಚತೆಯ ಬಗ್ಗೆ ವಿಧ್ಯಾರ್ಥಿಗಳಲ್ಲಿ ಮತ್ತು ನಾಗರಿಕ ಸಮಾಜದಲ್ಲಿ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಮಾಜಶಾಸ್ತ್ರ...

ದೇವಚಳ್ಳ : ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ

ದೇವಚಳ್ಳ : ಸ.ಹಿ.ಪ್ರಾ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ. ವಿದ್ಯಾರ್ಥಿಗಳಿಗೆ ಇ.ವಿ.ಎಂ ಯಂತ್ರದ ಮೂಲಕ ಮತದಾನದ ಪರಿಕಲ್ಪನೆ ಮೂಡಿಸಲು ವಿನೂತನವಾಗಿ ನಡೆದ ಶಾಲಾ ಸಂಸತ್ ಚುನಾವಣೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿ ಜೂ.06 ರಂದು 2023-24ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ನಡೆಯಿತು. ಚುನಾವಣೆಯನ್ನು ಇ.ವಿ.ಎಮ್ ಆ್ಯಪ್ ಬಳಸಿ ವಿನೂತನವಾಗಿ...

ಅಡ್ತಲೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದ ಮಾಜಿ ಸಚಿವ ಎಸ್ ಅಂಗಾರ ಹಾಗೂ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ

ಅಡ್ತಲೆ ವಾರ್ಡಿನಲ್ಲಿ ಅಭಿವೃದ್ಧಿ ಆಗಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಕಾಮಗಾರಿಗಳಿಗೆ ಅನುದಾನ ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಚಿವರಾದ ಎಸ್ ಅಂಗಾರ ರವರಿಗೆ ನಾಗರಿಕ ಸನ್ಮಾನ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಯಾದ ಕು. ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ ಜೂ.10 ರಂದು ಅಡ್ತಲೆ ಶಾಲಾ...
Loading posts...

All posts loaded

No more posts

error: Content is protected !!