ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ , ಉದ್ಯಮಿ ಜಯಂತ್ ಶೆಟ್ಟಿ ನಿಧನ

ಸುಳ್ಯದ ಹಳೆಗೇಟು ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ಮಾಲಕ ಜಯಂತ್ ಶೆಟ್ಟಿ ಕೇರ್ಪಳ ಅಲ್ಪಕಾಲದ ಅಸೌಖ್ಯದ ಇಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸುಳ್ಯದ ಗೃಹರಕ್ಷಕದಳದ ಘಟಕಾಧಿಕಾರಿಯಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಕಮಲಾಕ್ಷಿ ವಿ ಶೆಟ್ಟಿ, ಪತ್ನಿ ನಮಿತ, ಪುತ್ರಿಯರಾದ ನೇಹಾ ಹಾಗೂ ರಿಯಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಚಿನ್ನಪ್ಪ ಮಾಸ್ತರ್ ಪೈಕ ಬೊಮ್ಮದೇರೆ ನಿಧನ

ಗುತ್ತಿಗಾರು ಗ್ರಾಮದ ನಿವೃತ್ತ ಶಿಕ್ಷಕ ಚಿನ್ನಪ್ಪ ಗೌಡ ಪೈಕ ಬೊಮ್ಮದೇರೆ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಜಯಪ್ರಕಾಶ್, ನವೀನ್, ಕಿರಣ್ ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
Ad Widget

ಕವನ : ಕಷ್ಟ, ಸೋಲುಗಳ ಆಚೆಗೆ ಸುಂದರವಾದ ಬದುಕಿದೆ…

ಜೀವನದಲ್ಲಿ ಏಕಾಂಗಿಯಾದೆ ಎಂದು ನೀ ಕೊರಗಬೇಡ, ಏಕಾಂತದಲ್ಲೂ ಖುಷಿಯಿದೆ ಎಂಬುವುದನ್ನು ಮರೆಯಬೇಡ...ಬದುಕಿನಲ್ಲಿ ಕಷ್ಟವೇ ಬರುವುದು ಎಂದು ನೀ ಕುಗ್ಗಬೇಡ, ಕಷ್ಟ-ನಷ್ಟಗಳ ಆಚೆಗೆ ಸುಂದರವಾದ ಬದುಕಿದೆ ಎಂಬುವುದನ್ನು ಮರೆಯಬೇಡ... ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಮುಖದಲ್ಲಿನ ನಗುವನ್ನು ಎಂದಿಗೂ ಬಿಡಬೇಡ, ಕೆಲವು ಕಷ್ಟಗಳ ಅತ್ತು ಮರೆತರೆ ಇನ್ನೂ ಕೆಲವು ಕಷ್ಟಗಳ ನಕ್ಕು ಮರೆಯಬಹುದೆಂಬ ಮಾತನ್ನು ಮರೆಯಬೇಡ... ಜಗತ್ತಿನಲ್ಲಿ ನಿನಗೊಬ್ಬನಿಗೆ...

ಯಕ್ಷಗಾನ ಕಲಾವಿದ ಸಬ್ಬಣಕೋಡಿ ಕೃಷ್ಣ ಭಟ್ ನಿಧನ

ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಸಬ್ಬಣಕೋಡಿ ಕೃಷ್ಣ ಭಟ್(60) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೆಗೆ ಹೋಗದೇ ತಿರುಗಾಡುತ್ತಿದ್ದ ಅವರು ಸುಳ್ಯ ಬಸ್‌ ನಿಲ್ದಾಣದ ಸಮೀಪದ ಕಟ್ಟಡವೊಂದರ ಎದುರು ಭಾನುವಾರ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು.ಬಳಿಕ ಕಟ್ಟಡದ ಮಾಲಕರು ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿಯವರಿಗೆ ಮಾಹಿತಿ ನೀಡಿ, ಅವರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು....

ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಹಾಜಿ ಅಬ್ದುಲ್ ಹಮೀದ್ ಎಸ್.ಎಂ. ನೇಮಕ

ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆ ಸಂಚಾಲಕರಾಗಿ ಅನಿವಾಸಿ ಉದ್ಯಮಿ, ಶಿಕ್ಷಣ ಪ್ರೇಮಿ, ಹಾಜಿ ಅಬ್ದುಲ್ ಹಮೀದ್ ಎಸ್. ಎಂ. ರವರನ್ನು ಇತ್ತೀಚೆಗೆ ನಡೆದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಡಳಿತ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಯಿತು.ಇವರು ಸುಳ್ಯ ಮತ್ತು ಸೌದಿ ಅರೇಬಿಯಾ ಉದ್ಯಮಿಯಾಗಿದ್ದಾರೆ.ಡಿಕೆಸಿಸಿ ಇದರ ಅಧ್ಯಕ್ಷರಾಗಿ ,ಅನ್ಸಾರಿಯದಲ್ಲಿ...

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು

ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು ಅವರು ಆಯ್ಕೆಯಾಗಿದ್ದಾರೆ. ಕೆವಿಜಿ ಸುಳ್ಯ ಸಮಾಜ‌ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕ ನಡೆಯಿತು. ಗೌರವಾಧ್ಯಕ್ಷರಾಗಿ ಡಾ.ಚಿದಾನಂದ‌ ಕೆ.ವಿ,ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಅಂಬೆಕಲ್ಲು,ಕೋಶಾಧಿಕಾರಿಯಾಗಿ ಜನಾರ್ಧನ್ ನಾಯ್ಕ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಡಾ. ಜ್ಞಾನೇಶ್ ಎನ್....

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆ

ಕಲ್ಲುಗುಂಡಿಯ  ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ಶಾಲಾ ಸಂಸತ್ತು ರಚನೆಯಾಯಿತು.  ಶಾಲೆಯ ವಿದ್ಯಾರ್ಥಿ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್. ಆರ್ ಆಯ್ಕೆಯಾಗಿದ್ದಾರೆ.

ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ಪಾವ್ಲ್ ಕ್ರಾಸ್ತಾ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಅನಿತಾ ಮಸ್ಕರೇನಸ್ ನೂತನ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಶಾಲಾ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ ಎಚ್....

ಕಲ್ಲುಗುಂಡಿ : ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.26 ರಂದು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ನಡೆಯಿತು. ಶಾಲಾ ಸಂಚಾಲಕರಾದ ಫಾದರ್ ಪಾವ್ಲ್ ಕ್ರಾಸ್ತಾ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಅನಿತಾ ಮಸ್ಕರೇನಸ್ ನೂತನ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ನಾಯಕನಾಗಿ ಶೋಧನ್ ಪಿ. ಎಂ, ಉಪ ನಾಯಕಿಯಾಗಿ ಪರಿಣಿತ...

ಬೆಳ್ಳಾರೆ : ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ – ಮತ್ತಿಬ್ಬರ ಬಂಧನ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಹೇಳಿಕೆಯ ಮೇರೆಗೆ ಪೊಲೀಸರು ಇನ್ನಿಬ್ಬರನ್ನು ಬಂಧಿಸಿದ್ದಾರೆ.ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.ಸುಳ್ಯ ತಾಲೂಕಿನ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕಲ್ಮಡ್ಕದ ಚಿದಾನಂದ ಎಂಬಾತನನ್ನು ಬಂಧಿಸಿದ್ದರು.ಇದೀಗ ವಿಚಾರಣೆ ಮುಂದುವರಿಸಿದ...
Loading posts...

All posts loaded

No more posts

error: Content is protected !!