ಜು. 19 : ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೀಡಿಂಗ್ ಕ್ಯಾಂಪ್

ಸುಳ್ಯ ಅಂಚೆ ಕಚೇರಿಯ ನೇತೃತ್ವದಲ್ಲಿ ಪಿಂಚಣಿದಾರರ ಎಸ್‌ಬಿ ಖಾತೆಗಳಿಗೆ ಆಧಾರ್ ಸೀಡಿಂಗ್ ಕ್ಯಾಂಪ್ ಜು. 19 ರಂದು ಸುಳ್ಯದ ಅಂಚೆ ಕಚೇರಿಯಲ್ಲಿ ನಡೆಯಲಿದೆ. ಸರಕಾರದಿಂದ ಪಡೆಯುವ ವೃದ್ದಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮೃತ್ರಿ, ಮನಸ್ವಿನಿ ಇತರ ಮಾಸಿಕ ಪಿಂಚಣಿ, ಕಿಸಾನ್ ಸಮ್ಮಾನ್ ಹಾಗೂ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ....

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದ ಮುಂಚೂಣಿ ವಿದ್ಯಾಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ. ಹುದ್ದೆಗಳ ಹೆಸರು..:ಈಜು ಕೊಳ (ಸ್ವಿಮ್ಮಿಂಗ್ ಪೂಲ್) ಲೈಫ್ ಗಾರ್ಡ್ ಪ್ಲ್ಯಾಂಟ್ ರೇಟರ್ (ಈಜು ಕೊಳ) ಶಟಲ್ ಬ್ಯಾಡ್ಮಿಂಟನ್ ಕೋಚ್ ಜೂಂಬಾ ಟ್ರೇನರ್ (ಪುರುಷ/ಮಹಿಳೆ) ಯೋಗ ತರಬೇತುದಾರರು...
Ad Widget

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ನೂತನ ರಥಕ್ಕೆ ದಡೆ ಮುಹೂರ್ತ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು ಜು.10 ರಂದು ದಡೆ ಮೂಹರ್ತ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಕಾರ್ಯಕ್ರಮ ನೆರೆವೇರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಸದಸ್ಯರಾದ ವೆಂಕಟಕೃಷ್ಣ ರಾವ್ ,ನಾರಾಯಣ ಕೊಂಡೆಪ್ಪಾಡಿ,ಹಾಗೂ.ಕಾಷ್ಟಾ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರು,ಸಂತೋಷ್ ಆಚಾರ್ಯ, ಬಾಲಕೃಷ್ಣ...

ಬೈಕ್ ಗೆ ಗುದ್ದಿದ್ದ ಟಿಪ್ಪರ್ ಲಾರಿ , ಲಾರಿ ಸಮೇತ ಎಸ್ಕೆಪ್ ಆದ ಲಾರಿ ಚಾಲಕ, ಬೈಕ್ ಸವಾರ ಆಸ್ಪತ್ರೆಗೆ ದಾಖಲು.

ಸುಳ್ಯ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ತೆರಳಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಆಲೆಟ್ಟಿಯ ಮಿತ್ತಡ್ಕ ಕೆ.ಎಫ್.ಡಿ.ಸಿ ವಿಶ್ರಾಂತಿ ಗೃಹದ...

ಸೆಲ್ಕೋ ಸೋಲಾರ್ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ನಲ್ಲಿ ಚಂದ್ರಯಾನ -3 ಉಡಾವಣೆ ವೀಕ್ಷಣೆ , ವಿಧ್ಯಾರ್ಥಿಗಳ ಸಂಭ್ರಮ .

ಸುಳ್ಯದ ಪ್ರತಿಷ್ಠಿತ ಸೋಲಾರ್ ಸಂಸ್ಥೆಯದಾ ಸೆಲ್ಕೋ ಸೋಲಾರ್ ಹಾಗೂ ಮೇಂಡಾ ಫೌಂಡೇಶನ್ ವತಿಯಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಚಂದ್ರಯಾನ-3 ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಮೋಹಿನಿ ಇವರ ನೇತೃದಲ್ಲಿ ಚಂದ್ರಯಾನ-3 ಉಡಾವಣೆ ನೇರ ಪ್ರಸಾರದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಿಗೆ ತೋರಿಸಲಾಯಿತು. ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಮೆಂಡಾ ಫೌಂಡೇಶನ್ ಹಾಗೂ...

ಸುಳ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ನಂದಕುಮಾರ್ , ಜಿ ಕೃಷ್ಣಪ್ಪ ಬಣಗಳ ಮಧ್ಯೆ ಪರಸ್ಪರ ಹಲ್ಲೆ ಮಾತಿನ ಚಕಮಕಿ, ಪೋಲಿಸ್ ಆಗಮನ !

ಕಡಬ: ಸುಳ್ಯ ಮಿಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಜಿ .ಕೃಷ್ಣಪ್ಪ ಮತ್ತು ನಂದಕುಮಾರ್ ಬಣದ ನಡುವೆ ಬಡಿದಾಡಿಕೊಂಡ ಘಟನೆ ಜು.14ರಂದು ನಡೆದಿದೆ. ಕಾಂಗ್ರೇಸ್ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್. ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ...

SSC Recruitment 2023: ಎಸ್ಎಸ್ ಸಿ ಯಲ್ಲಿ ಉದ್ಯೋಗವಕಾಶ 1558 ಹುದ್ದೆಗಳಿಗೆ ಅರ್ಜಿ ಆಹ್ವಾನ ಜು.21 ಕೊನೆಯ ದಿನ

SSC Recruitment 2023: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌(SSC) ಭರ್ಜರಿ ಉದ್ಯೋಗದ(SSC Recruitment 2023) ಆಫರ್‌ ನೀಡಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಮಲ್ಟಿ ಟಾಸ್ಕಿಂಗ್‌ (ತಾಂತ್ರಿಕ) ಸಿಬ್ಬಂದಿ, ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-...

ಗುತ್ತಿಗಾರು : ಆಟೋ ಚಾಲಕರಿಂದ ಸ್ವಚ್ಛತಾ ಕಾರ್ಯ

ಗುತ್ತಿಗಾರು ಆಟೋ ರಿಕ್ಷಾ ನಿಲ್ದಾಣದ ಬಿ.ಯಂ.ಎಸ್. ಘಟಕದ ಚಾಲಕ ಸದಸ್ಯರಿಂದ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸ್ವಚ್ಛತಾ ಶ್ರಮ ಸೇವೆಯಲ್ಲಿ ಬಿ.ಯಂ.ಎಸ್. ಸದಸ್ಯರಾದ ವಿಶ್ವನಾಥ ಚತ್ರಪ್ಪಾಡಿ, ಧರ್ಮಪಾಲ ಪಂಜಿಪಳ್ಳ, ಸತ್ಯನಾರಾಯಣ ಬಾಕಿಲ, ಉದಯ ಕುಮಾರ ಹಾಲೆಮಜಲು, ಪ್ರದೀಪ್ ಪುಲ್ಲಡ್ಕ, ಯತೀಶ ಪಾರೆಪ್ಪಾಡಿ, ತೀರ್ಥೇಶ್ ಪೈಕ, ಶಶಿಧರ ಕುಕ್ಕುಜೆ, ರವೀಂದ್ರ ಕೋಡಂಬು, ಜಯಪ್ರಕಾಶ್ ಕಡ್ಲಾರು, ಉಮೇಶ್ ಗೌರಿಗುಂಡಿ,...

ಚೆಂಬು : ಜಾಗದ ವಿವಾದ – ಅಣ್ಣನನ್ನು ಕೊಂದ ತಮ್ಮ

ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ತಮ್ಮನಿಂದ ಅಣ್ಣ ಕೊಲೆಯಾದ ಘಟನೆ ಇಂದು ವರದಿಯಾಗಿದೆ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ...

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24ನೇ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿ, ಸ್ಮಶಾನ ಕಾರ್ಮಿಕ, ದೇವದಾಸಿ, ಮ್ಯಾನುವಲ್ ಸ್ಕ್ಯಾವೆಂಜ‌ ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ದಾಖಲಾತಿಯನ್ನು ನೀಡಲಾಗುವುದು. ವಸತಿ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳು ಮೂಲಸೌಲಭ್ಯವನ್ನು ಒದಗಿಸಲಾಗುವುದು....
Loading posts...

All posts loaded

No more posts

error: Content is protected !!