ಸುಳ್ಯ ಮಂಡೆಕೋಲು ರಸ್ತೆಗೆ ಅಡ್ಡಲಾಗಿ ಬಿದ್ದ ಮರ , ರಸ್ತೆ ಸಂಚಾರ ವ್ಯತ್ಯಯ

ಸುಳ್ಯದಿಂದ ಮಂಡೆಕೋಲಿಗೆ ತೆರಳುವ ರಸ್ತೆಗೆ ಬೃಹದಾಕಾರದ ಗಾಳಿಮರವೊಂದು ಅಡ್ಡಲಾಗಿ ಬಿದ್ದಿ ರಸ್ತೆ ಸಂಚಾರ ಅಡಚಣೆಯಾಗಿದೆ. ಕಾಂತಮಂಗಲದ ಜೀಜಬಾಯಿ ವೃತ್ತದ ಬಳಿ ಈ ಮರ ಬುಡಸಮೇತ ರಸ್ತೆಗೆ ಮಗುಚಿಬಿದ್ದಿದ್ದು , ವಿಧ್ಯುತ್ ತಂತಿಗಳು ಕಟ್ಟಾಗಿದ್ದು ಇದೀಗ ಮೆಸ್ಕಾಂ ಹಾಗೂ ಊರಿನವರ ಸಹಾಯದಲ್ಲಿ ಮರ ತೆರವು ಕಾರ್ಯ ನಡೆಯುತ್ತಿದೆ.

ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಮತಾ ಕೆ ರವರಿಗೆ ಡಾಕ್ಟರೇಟ್ ಪದವಿ

ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಮಮತಾ ಪುರುಷೋತ್ತಮ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಡಾ. ಶಂಕರ ನಾರಣಪ್ಪ, ಅಸೋಸಿಯೇಟ್ ಪ್ರೊಫೆಸರ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೈಸೂರು ಇವರ ಮಾರ್ಗದರ್ಶನದಲ್ಲಿ “Role of Women members...
Ad Widget

ಇನ್ನೂ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ತಮಿಳುನಾಡಿನ ಬಳಿಕ ಕರ್ನಾಟಕದ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಮೊಬೈಲ್ ಫೋನ್ ಬಳಕೆ ನಿಷೇಧದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿತ್ತು.ಈಗ ಅಧಿಕೃತವಾಗಿ ಮೊಬೈಲ್‌ ಫೋನ್‌ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧ ಹೇರಿ...

ಕನಕಮಜಲು ದರೋಡೆ ಪ್ರಕರಣ – ಎಡಿಷನಲ್ ಎಸ್ಪಿ ಭೇಟಿ – ಶೀಘ್ರ ಬಂಧನದ ಭರವಸೆ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಎಂಬವರ  ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ವಾನ ದಳ ಆಗಮನ ಪೊಲೀಸ್ ಶ್ವಾನದಳದ ಶ್ವಾನ ಆಗಮಿಸಿ, ಮನೆಯೊಳಗೆ ಹೋಗಿ ಅಲ್ಲಿಂದ ಹೊರಬಂದು ಸುಣ್ಣಮೂಲೆ ರಸ್ತೆಯಾಗಿ ವಿಷ್ಣುಮೂರ್ತಿ ಒತ್ತೆಕೋಲದ ದ್ವಾರದ ತನಕ ಓಡಿ ಹಿಂತಿರುಗಿತೆಂದು ತಿಳಿದುಬಂದಿದೆ. ಸಂಜೆ ವೇಳೆಗೆ ಸ್ಥಳಕ್ಕೆ ಮಂಗಳೂರಿನಿಂದ...

ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ – ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಮನವಿ

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ, ಜೈನ ಮುನಿ ಆಚಾರ‍್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ ವೇಣುಗೋಪಾಲ ಇವರ ಹತ್ಯೆ ಸೇರಿದಂತೆ...

ಸುಳ್ಯ ತಾಲೂಕಿನ ಗ್ರಾಮಗಳಲ್ಲಿ ಸರಣಿ ಕಳ್ಳತನ , ಆತಂಕದಲ್ಲಿ ಜನತೆ ಪ್ರಕರಣ ದಾಖಲು.

ಸುಳ್ಯದ ಜಾಲ್ಸೂರಿನ ಸಿಂಡಿಕೇಟ್ ಬ್ಯಾಂಕ್ ಸಮೀಪವಿರುವ ಜೋಗಿ ಬೈದರಕೊಳಂಜಿ ಎಂಬವರ ಅಂಗಡಿಯ ಬೀಗ ಮುರಿದ ಕಳ್ಳರು ಡ್ರಯರ್ ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ ಸುಮಾರು ಎರಡು ಸಾವಿರ ನಗದು ಹಾಗೂ ಅಂಗಡಿ ಸಾಮಾಗ್ರಿಗಳಾದ ಸೋಪು, ಜ್ಯೂಸ್ ಬಾಟಿಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ. ಹಾಗೆಯೇ ಗೂಡಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಮಾರಾಟಕ್ಕಿಟ್ಟಿದ್ದ ಕೊಡೆ ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನುಕಳವುಗೈದ...

ಪಾದಚಾರಿಗೆ ಸರಕಾರಿ ಬಸ್ ಢಿಕ್ಕಿ ಅಪಾಯದಿಂದ ಪಾರಾದ ವ್ಯಕ್ತಿ

ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ದೊಡ್ಡತೋಟ ಎಂಬಲ್ಲಿ ಪಾದಚಾರಿಯೊಬ್ಬರಿಗೆ ಸರಕಾರಿ ಬಸ್ಸು ತಾಗಿದ ಘಟನೆ ವರದಿಯಾಗಿದೆ. ಬಸ್ಸು ತಾಗಿದ ಪರಿಣಾಮ ಪಾದಚಾರಿ ಬಿದ್ದರೆಂದೂ ಅಲ್ಪಸ್ವಲ್ಪ ಗಾಯಗಳಿಂದ ಪಾದಚಾರಿ ಪಾರಾದರು.bಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಉಪಚರಿಸಿದ್ದು ಮರ್ಕಂಜದ ಕುಶಾಲಪ್ಪ ರೆಂಜಾಳ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕವನ : ಕಾಲಚಕ್ರ ತಿರುಗುತ್ತಲೇ ಇರುತ್ತದೆ…

ಕಾಲಚಕ್ರದ ಆಟವ ಅರಿತವರಾರು, ಬದುಕ ಪಯಣದಿ ಏಳು-ಬೀಳುಗಳ ಕಾಣದವರಾರು...? ಏಳು-ಬೀಳುಗಳ ಈ ಹಾದಿಯಲ್ಲಿ ಬಂದಂತಹ ಕಷ್ಟಗಳೆಷ್ಟೋ, ನೋವುಗಳೆಷ್ಟೋ ಲೆಕ್ಕವಿರಿಸಿದವರಾರು...? ಲೆಕ್ಕವಿಲ್ಲದಷ್ಟು ಕಷ್ಟಗಳ ಕಟ್ಟಿಟ್ಟು, ನೋವುಗಳ ಬಚ್ಚಿಟ್ಟು ಮುನ್ನಡೆದು ಬದುಕಿನಲ್ಲಿ ಮೇಲೇರಿದಾಗ ನಮ್ಮವರು ಎಂದು ಬಂದವರೆಷ್ಟೋ, ಕೆಳಗುರುಳಿದಾಗ ತುಳಿದು ನಡೆದವರೆಷ್ಟೋ...? ಮೇಲೇರಿದಾಗ ಜೊತೆ ನಡೆದು ಬಂದವರು, ಕೆಳಗುರುಳಿದಾಗ ತುಳಿದು ಸಾಗಿದವರ ಮಧ್ಯೆ ಕಾಲ ಕಸವಾಯಿತು ಈ ಬದುಕು......

ಜಾಲುಮನೆ ಗೋಳ್ಯಾಡಿ ರಸ್ತೆ ದುರಸ್ತಿಗೊಳಿಸಿದ ಗ್ರಾಮಸ್ಥರು

ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರ ಭಾಗದ ಜಾಲುಮನೆ - ಅಂಬೆಕಲ್ಲು- ಗೋಳ್ಯಾಡಿ ಸಂಪರ್ಕಿಸುವ ರಸ್ತೆಯನ್ನು ಹಲವು ಫಲಾನುಭವಿಗಳು ಶ್ರಮದಾನದ ಮೂಲಕ ದುರಸ್ತಿಗೊಳಿದರು.

ಸಿಡಿಪಿಒ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಸುಳ್ಯದಲ್ಲಿ ಬೀಳ್ಕೊಡುಗೆ

ಸುಳ್ಯದಲ್ಲಿ ಸಿಡಿಪಿಒ ಆಗಿದ್ದು ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿಗೊಂಡ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.15 ರಂದು ಸುಳ್ಯದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ಸಿಡಿಪಿಒ ಶ್ರೀಮತಿ ಶೈಲಜಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ರವರು ಶ್ರೀಮತಿ ರಶ್ಮಿಯವರನ್ನು ಸನ್ಮಾನಿಸಿದರು.ರಶ್ಮಿಯವರ ಪತಿ...
Loading posts...

All posts loaded

No more posts

error: Content is protected !!