ಗೃಹರಕ್ಷಕ ಸೇವೆ ಮುಂದುವರಿಕೆಗೆ ಮುಖ್ಯಮಂತ್ರಿ ತೀರ್ಮಾನ

ಕಳೆದ ಕೆಲವು ದಿನಗಳ ಹಿಂದೆ ಪೊಲೀಸರೊಂದಿಗೆ ಭುಜಕ್ಕೆ ಭುಜ ಜೋಡಿಸಿ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದ ಗೃಹರಕ್ಷಕ ದಳದವರು ರಸ್ತೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿ ಕಾಣದೆ ಅವರ ಕೊರತೆಯು ಎದ್ದು ಕಾಣುತ್ತಿತ್ತು. ಕಳೆದ ಹಲವು ತಿಂಗಳುಗಳಿಂದ ಕೋವಿಡ್ 19 ರ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದ ಗೃಹರಕ್ಷಕ ದಳದವರು ಪ್ರತಿಯೊಂದು ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆಯಿಂದ ನಡೆದು...

ಇಂದು ರಾಜ್ಯದಲ್ಲಿ 378 ಪಾಸಿಟೀವ್ ಕೇಸ್ – ಉಡುಪಿ 121 ಕೇಸ್

ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು ಇಂದು ಒಂದೇ ದಿನ 378ಕ್ಕೇರಿಕೆಯಾಗಿದೆ. ಒಟ್ಟು 5213ಕ್ಕೇರಿಕೆಯಾಗಿದೆ. ಅದರಲ್ಲಿ ಉಡುಪಿ 121, ಕಲಬುರಗಿ 69, ಯಾದಗಿರಿ 103, ಬೆಂಗಳೂರು 18, ರಾಯಚೂರು 2, ಮಂಡ್ಯ 3, ಬೆಳಗಾವಿ 5, ಬೀದರ್ 1, ಹಾಸನ 3, ವಿಜಯಪುರ 6, ದಕ್ಷಿಣ ಕನ್ನಡ 24, ಚಿಕ್ಕಬಳ್ಲಾಪುರ 2, ಉತ್ತರ ಕನ್ನಡ...
Ad Widget

ವಿಪತ್ತು ನಿರ್ವಹಣೆ ಸಮಿತಿ ಸದಸ್ಯರಾಗಿ ಅಚ್ಯುತ ಗುತ್ತಿಗಾರು

ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು ಇವರ ಸಮಾಜ ಸೇವೆಯನ್ನು ಪರಿಗಣಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕು ವಿಪತ್ತು ನಿರ್ವಹಣೆ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಆಲೆಟ್ಟಿ ಸಿ.ಎ. ಬ್ಯಾಂಕ್ ಉದ್ಯೋಗಿ ರಾಜೇಶ್ ಅಲೆಟ್ಟಿ ನಿಧನ

ಅಲೆಟ್ಟಿ ಸಿ.ಎ. ಬ್ಯಾಂಕ್ ಉದ್ಯೋಗಿ ರಾಜೇಶ್ ಅಲೆಟ್ಟಿ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ರಾಗಿರುತ್ತಾರೆ.ಯುವಕ ಮಂಡಲದ ಅಧ್ಯಕ್ಷ ರಾಗಿ,ಭಜನ ಸಂಘದ ಸದಸ್ಯ ರಾಗಿ ಸೇೇವೆ ಸಲ್ಲಿಸಿದ್ದಾರೆ

ಎಸ್.ಎಸ್.ಎಲ್.ಸಿ ಪರೀಕ್ಷೆ- ನೋಡಲ್ ಅಧಿಕಾರಿ ನಿಯೋಜನೆ

2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲೂಕು ಸಹಾಯವಾಣಿ ನೋಡಲ್ ಆಗಿ ನಿಯೋಜಿಸಿರುವ ಬಗ್ಗೆಜೂ 4 ರಂದು ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಸೂಚಿಸಿದ್ದಾರೆ. ಅದರಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ 2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುರಿತು ಯಾವುದೇ ಸಂದೇಹಗಳು ಅಗತ್ಯ ಮಾಹಿತಿಗಳನ್ನು ಪರೀಕ್ಷೆ ಬರೆಯುವ ಮಕ್ಕಳಿಗೆ ಅಥವಾ ಪೋಷಕರಿಗೆ...

ಕನಕಮಜಲು ವಿಶ್ವ ಪರಿಸರ ದಿನಾಚರಣೆ

ಕನಕಮಜಲು ಯುವಕ ಮಂಡಲ ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5ರಂದು ಆಚರಿಸಲಾಯಿತು. ಕನಕಮಜಲು ಯುವಕ ಮಂಡಲದ ವತಿಯಿಂದ ದಿ. ಎಲ್ಯಣ್ಣ ಗೌಡ ಅವರ ಸ್ಮರಣಾರ್ಥ ದಿವಂಗತರ ಮನೆಯ ಸಮೀಪ ಮಾಯಣ ರಹಿತ ಉತ್ತಮ ತಳಿಯ ಹಲಸಿನ ಗಿಡವನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ದೇವಚಳ್ಳ ವಿಶ್ವ ಪರಿಸರ ದಿನಾಚರಣೆ

ಅಮರ ಸಂಘಟನಾ ಸಮಿತಿ ,ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಹಯೋಗದಲ್ಲಿ ವಿಶ್ವ ಪರಿಸರ ದಿನ ದ ಅಂಗವಾಗಿ ಜೂನ್ ೫ ರಂದು ಸೇವ್ ಟ್ರೀ ಸೇವ್ ಲೈಫ್ ಅಭಿಯನದಡಿಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಧ್ಯೇಯ ವಾಕ್ಯದೊಂದಿಗೆ ದೇವಚಳ್ಳ ಗ್ರಾಮ ಪಂಚಾಯತ್ ಪರಿಸರದಲ್ಲಿ ಎರಡನೇ ವರ್ಷದ ಗಿಡ ನೆಡುವ...

ಮಾಣಿ ಸರಣಿ ಅಪಘಾತ – ಪ್ರಯಾಣಿಕರು ಪಾರು

ರಾಷ್ಟ್ರೀಯ ಹೆದ್ದಾರಿಯ ಮಾಣಿ ಸುತ್ತಮುತ್ತ ಅಪಘಾತಗಳ ಸರಮಾಲೆ ನಡೆದಿದ್ದು ಯಾವುದೇ ಅಪಾಯವಿಲ್ಲದೆ ಪಾರಾದ ಪ್ರಯಾಣಿಕರು.ಪೇರಮೊಗರು ಸಮೀಪ ಮಾರುತಿ 800 ಕಾರು ರಸ್ತೆ ಪಕ್ಕದ ಬೃಹತ್ ಹೊಂಡಕ್ಕೆ ಬಿದ್ದು ಜಖಂಗೊಂಡಿದ್ದುಬುಡೋಳಿ ಜಂಕ್ಷನಲ್ಲಿ ಮಾಣಿ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರೊಂದು ರಸ್ತೆಯಲ್ಲಿ ಮಗುಚಿದ ಪರಿಣಾಮ ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ತಿಳಿದು ಬಂದಿದೆ.ಕೊಡಾಜೆ ಮಸೀದಿ ಸಮೀಪದ...

ಮೂಡಬಿದ್ರೆ ಎರಡು ತಂಡಗಳ ಮಧ್ಯೆ ಮಾರಾಮಾರಿ ಸುಳ್ಯ ಮೂಲದ ಓರ್ವ ಸಾವು

ಅಲೆಕ್ಕಾಡಿ ಕುಕ್ಕಟ್ಟೆ ಅಬ್ದುಲ್ ಲತೀಫ್ ಅವರು ಮೂಡಬಿದರೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.ಇವರು ಮೂಡಬಿದರೆಯಲ್ಲಿ ಜ್ಯುವೆಲ್ಲರಿ ಅಂಗಡಿಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.ಮುಲ್ಕಿ ವಿಜಯ ಬ್ಯಾಂಕ್ ಹತ್ತಿರ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ ಘಟನೆಗೆ ಸಂಬಂಧಿಸಿದಂತೆ ಇನ್ನು ಇಬ್ಬರು ತೀವ್ರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರ ಸುದ್ದಿ ವೆಬ್ಸೈಟ್ ವರದಿಗೆ ಸ್ಪಂದಿಸಿದ ಬಿಎಸ್ ಎನ್ ಎಲ್

ಕೊಲ್ಲಮೊಗ್ರ ಬಿಎಸ್ ಎನ್ ಎಲ್ ಟವರ್ ಬಗ್ಗೆ ಕಳೆದ ವಾರ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಕಟಿಸಿ ನಿದ್ದೆಯಲ್ಲಿದ್ದ ಅಧಿಕಾರಿಗಳನ್ನು ಎಚ್ಚರಿಸಿತ್ತು. ಈ ಬಗ್ಗೆ ಯುವ ಮುಂದಾಳು ಉದಯ ಶಿವಾಲ ಪ್ರಧಾನಮಂತ್ರಿ ಕಛೇರಿ ಗೆ ಪತ್ರ ಬರೆದು ಒತ್ತಾಯಿಸಿದ್ದು ಅಲ್ಲದೇ ಎಲ್ಲಾ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬೆನ್ನು ಬಿಡದೇ ಸತತ ಪ್ರಯತ್ನಿಸಿದ್ದರು. ದಿನ ಮುಂದೂಡುತ್ತಿದ್ದ ಅಧಿಕಾರಿಗಳು...
Loading posts...

All posts loaded

No more posts

error: Content is protected !!