- Saturday
- April 25th, 2026
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ಈ ಬಾರಿ ವಿಪರೀತವಾಗಿ ಕಂಡುಬಂದಿತ್ತು. ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ...
ಕೊರೋನ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣ ಸ್ತಬ್ದಗೊಂಡಿದೆ. ಹಲವು ದಿನಗಳ ಬಳಿಕ ಮತ್ತೊಮ್ಮೆ ಸರಕಾರದ ನಿರ್ದೇಶನದ ಮೇರೆಗೆ ಭಾನುವಾರ ದಿನದಂದು ಲಾಕ್ ಡೌನ್ ಜಾರಿಯಾದ ಹಿನ್ನೆಲೆ ಸುಳ್ಯ ನಗರದಲ್ಲಿ ಮೆಡಿಕಲ್ ಅಂಗಡಿಗಳು ,ಪೆಟ್ರೋಲ್ ಪಂಪ್ ಹಾಗೂ ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ ಕೇಂದ್ರಗಳು ತೆರೆದಿರುವುದು ಕಂಡುಬರುತ್ತಿಲ್ಲ. ಜನ ಸಂಚಾರ ವಿರಳವಾಗಿದ್ದು...
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಇಂದು ಆನ್ಲೈನ್ ಗುರುಪೂರ್ಣಿಮಾ ಮಹೋತ್ಸವಗಳ ಆಯೋಜನೆ
ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬಸಮೇತರಾಗಿ ಆನ್ಲೈನ್ ‘ಗುರುಪೂರ್ಣಿಮಾ ಮಹೋತ್ಸವದ ಲಾಭ ಪಡೆಯಬೇಕು ಹಾಗೂ ತಮ್ಮ ಸ್ನೇಹಿತರು, ಪರಿಚಿತರು, ಕುಟುಂಬದವರು ಇವರಿಗೂ ಇದರ ಆಮಂತ್ರಣ ನೀಡಬೇಕು ಎಂದು ಸನಾತನ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ 5 ರ ಸಾಯಂಕಾಲ 5 ಗಂಟೆಗೆ ಕನ್ನಡ ಭಾಷೆಯ ‘ಆನ್ಲೈನ್ ಗುರುಪೂರ್ಣಿಮಾ ಮಹೋತ್ಸವ ನಡೆಯಲಿದ್ದು FaceBook ಅಥವಾ...
ನಾಳೆ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಆಗಲಿದ್ದು ಹಾಲು , ದಿನಪತ್ರಿಕೆ , ಮೆಡಿಕಲ್ , ಆಸ್ಪತ್ರೆ ಹೊರತುಪಡಿಸಿ ಎಲ್ಲಾ ಸೇವೆಗಳು ಬಂದ್ ಆಗಲಿವೆ. ಇನ್ಯಾವುದೇ ಅಂಗಡಿ ತೆರೆದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ . ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಟ್ಟು ನಿಟ್ಟಿನ ಆದೇಶ ಜಾರಿ ಮಾಡಿದ್ದು , ಯಾರೂ ಕೂಡ ಮನೆಯಿಂದ ಹೊರ ಬರದಂತೆ...
ತಳೂರು ಮುಖ್ಯರಸ್ತೆಗೆ ಬಾಗಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಿದಿರನ್ನು ಸ್ನೇಹ ಯುವ ಬಳಗ ತೆರವುತಳೂರು ಮುಖ್ಯರಸ್ತೆಗೆ ಬಿದಿರು ಬಾಗಿ ಅಪಾಯಕಾರಿ ಸ್ಥಿತಿಯಲ್ಲಿತ್ತು. ಘನ ವಾಹನಗಳು ಬಿದಿರಿಗೆ ತಾಗಿಕೊಂಡೆ ಸಂಚಾರ ಮಾಡುತ್ತಿದ್ದವು. ವಾಹನಗಳಿಗೆ ಹಾನಿಯಾದ ಉದಾಹರಣೆಗಳು ಇವೆ. ಆದರೇ ಇಲಾಖೆ , ಜನಪ್ರತಿನಿಧಿಗಳು ಮಾತ್ರ ನೋಡಿ ನೋಡದಂತೆ ಸಂಚರಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ಸ್ನೇಹ ಯುವ ಬಳಗ...
ಕೆ ಪಿ ಸಿ ಸಿ ಅಧ್ಯಕ್ಷ ರಾಗಿ ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ರುಗಳ ಪದಗ್ರಹಣ ಸಮಾರಂಭ ಪ್ರತಿಜ್ಞಾ ಕಾರ್ಯಕ್ರಮ ಸುಳ್ಯ ತಾಲೂಕಿನ 31 ಕಡೆಗಳಲ್ಲಿ ಯಶಸ್ವಿ ಯಾಗಿ ಕಾರ್ಯಗತ ಗೊಂಡಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ ರಾದ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ರು ಮತ್ತು ಗ್ರಾಮ ಪಂಚಾಯಿತಿ ವೀಕ್ಷಕರುಗಳಿಗೆ ಅಭಿನಂದನೆ ಮತ್ತು ಅವಲೋಕನ...
ಪಂಜ ಪಂಚಾಯತ್ ವ್ಯಾಪ್ತಿಯ ಚರಂಡಿ ದುರಸ್ತಿ ಕಾರ್ಯ ಆರಂಭಪಂಜ ಪಂಚಾಯತ್ ಮುಖ್ಯ ರಸ್ತೆ ಬದಿಯ ಹಾಗೂ ಇತರ ರಸ್ತೆಗಳ ಚರಂಡಿಗಳು ಮುಚ್ಚಿ ಹೋಗಿ ನೀರು ರಸ್ತೆಯಲ್ಲಿ ಹರಿಯುತ್ತಿತ್ತು.ಇದನ್ನು ಗಮನಿಸಿದ ಪಂಚಾಯತ್ ನೂತನ ಆಡಳಿತಾಧಿಕಾರಿ ಫೀಲ್ಡಿಗಿಳಿದಿದ್ದು ಕೆಲಸ ಆರಂಭಿಸಿದ್ದಾರೆ, ಪಿಡಿಓ ಪುರುಷೋತ್ತಮ ಮಣಿಯಾನ,ಪಂಚಾಯತ್ ಸಿಬ್ಬಂದಿ, ವರ್ತಕರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರವಾಗಿರುವ 18 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳನ್ನು ಮತ್ತು 66 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಗೌರವ ಸೇವೆಯ ನೆಲೆಯಲ್ಲಿ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.07.2020ವಯೋಮಿತಿ : 18 ರಿಂದ 35 ವರ್ಷ ಸುಳ್ಯ ತಾಲೂಕಿನಲ್ಲಿ ಹುದ್ದೆ ಖಾಲಿ...
ಪುಣೆಯ ವ್ಯಕ್ತಿಯೊಬ್ಬ ಕೊರೊನ ಕಾಲದಲ್ಲಿ ಚಿನ್ನದ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ . ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಟ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಟ್ ತಯಾರಿಸಿದ್ದಾರೆ . ಇದೊಂದು ತೆಳುವಾದ ಮಾಸ್ಕ್, ಸಣ್ಣ ತೂತುಗಳು ಕೂಡ ಇದೆ . ಹೀಗಾಗಿ ಉಸಿರಾಡಲು ಸಮಸ್ಯೆಯಾಗುವುದಿಲ್ಲ . ಇದು ಪರಿಣಾಮಕಾರಿ...
ಪಂಜದ ಪಲ್ಲೋಡಿ ಕಾಲಾನಿಯಲ್ಲಿರುವ ಮನೆಯೊಂದರಲ್ಲಿ 4 ದಿನದಿಂದ ರಾಜು ಎಂಬುವರು ಮಲಗಿದ್ದಲ್ಲೇ ಇರುವುದನ್ನು ಸ್ಥಳೀಯ ಪಂಚಾಯತ್ ಸದಸ್ಯೆ ನಿರ್ಮಲ ಗಮನಿಸಿ ಪಂಚಾಯತ್ ಆಡಳಿತಾಧಿಕಾರಿ ಗೆ ತಿಳಿಸಿದರು. ಕೂಡಲೇ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರು ಪಂಜ ಸರಕಾರಿ ಆಸ್ಪತ್ರೆ ವೈಧ್ಯರಿಗೆ ತಿಳಿಸಿದರು. ಪಿಡಿಓ ಪುರುಷೋತ್ತಮ ಎಂ. , ಡಾ. ಮಂಜುನಾಥ್ ಜೊತೆ ಸ್ಥಳಕ್ಕೆ ತೆರಳಿ ಅಸೌಖ್ಯದಿಂದ ಮಲಗಿದ್ದವ ಪರೀಕ್ಷಿಸಿ...
Loading posts...
All posts loaded
No more posts
