ಎಲಿಮಲೆ ಪ್ರೌಢಶಾಲೆಯಲ್ಲಿ ಪೋಲಿಸ್ ಕೆಡೆಟ್ ತರಬೇತಿ

ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ 2020-21 ಶೈಕ್ಷಣಿಕ ಸಾಲಿನ ಪೋಲಿಸ್ ಕೆಡೆಟ್ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ ಪೇರಾಲ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರು ವಹಿಸಿದ್ದರು. ಸ್ಟೂಡೆಂಟ್ ಪೋಲಿಸ್ ಕೆಡೆಟ್ ನ ನೋಡೆಲ್ ಅಧಿಕಾರಿಗಳಾದ ಅನಿಲ್ ಹಾಗೂ ಮಲ್ಲಿಕಾರ್ಜುನ ಇವರು ಇದರ ಧ್ಯೇಯ ಉದ್ದೇಶಗಳ ಬಗ್ಗೆ...

ನಾಲ್ಕೂರು – ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಮರಕತ ದೇವಸ್ಥಾನದಲ್ಲಿ ಶ್ರಮದಾನ

ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 𝟴𝟱𝟬 ವರ್ಷಗಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿರುವ ವಿಶೇಷ ದೇವರ ಮೀನುಗಳಿಗೆ (ನಾಗಕನ್ನಿಕೆಯರೆಂದು ಪ್ರತೀತಿ ) ನೀರಿನ ಒಳಹರಿವು ಕಡಿಮೆ ಇರುವುದನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾ.𝟮𝟭 ರಂದು ನೀರಿಗೆ ಅಡ್ಡಲಾಗಿ ಕಟ್ಟ ನಿರ್ಮಾಣ ಮಾಡಿ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ...
Ad Widget

ಕೊಲ್ಲಮೊಗ್ರು ಗ್ರಾಮ ವಾಸ್ತವ್ಯ – ಸುಳ್ಯದ 7 ಜನರಿಗೆ ಕೃಷಿ ಪ್ರಶಸ್ತಿ

ಕೊಲ್ಲಮೊಗ್ರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಯೂರ ಕಲಾಮಂದಿರದಲ್ಲಿ ಮಾ.20 ರಂದು ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಯೋಜನೆಯಡಿ ಕೊಡುವ ತಾಲೂಕು ಕೃಷಿ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ 7 ಮಂದಿ ಕೃಷಿಕರಿಗೆ ನೀಡಲಾಯಿತು. ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ವಿಶ್ವನಾಥ್ ಪೈ, ಸಮಗ್ರ ಕೃಷಿ ಪದ್ಧತಿ ಘಟಕದಡಿ ನೀಡುವ ಪ್ರಶಸ್ತಿಗೆ ಕೊಲ್ಲಮೊಗ್ರದ ಜಯಪ್ರಕಾಶ್ ಕಟ್ಟ, ತೋಟಗಾರಿಕ...

ಬಾಳಿಲ ವಿದ್ಯಾಭೋದಿನಿ ಹಿ.ಪ್ರಾ.ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ಅಡಿಯಲ್ಲಿ ಬಾಳಿಲ ವಿದ್ಯಾಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿಯನ್ನು ಮಾ.19 ರಂದು ನಡೆಸಲಾಯಿತು. ಅಡುಗೆ ಪ್ರಾವಿಣ್ಯತಾ ನಿಟ್ಟಿನಲ್ಲಿ ಈ ಅಡುಗೆ ತರಬೇತಿಯನ್ನು ನಡೆಸಲಾಗಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.ಸ್ಕೌಟ್ ಮಾಸ್ಟರ್ ಶಿವಪ್ರಸಾದ್ ಜಿ., ಗೈಡ್ ಕ್ಯಾಪ್ಟನ್ ಯಶೋಧ...

ನವೀನ್ ಹೊಸೊಳಿಕೆ ವಿದೇಶ ಪ್ರಯಾಣ

ಗುತ್ತಿಗಾರು ಗ್ರಾಮದ ಹೊಸೊಳಿಕೆ ವಿಶ್ವನಾಥ ಗೌಡ ಮತ್ತು ಲಲಿತಾ ದಂಪತಿಗಳ ಪುತ್ರ ನವೀನ್ ಹೊಸೊಳಿಕೆ ಇವರು ಉದ್ಯೋಗ ನಿಮಿತ್ತ ಮಸ್ಕತ್ ಗೆ ಪ್ರಯಾಣ ಮಾ.25ರಂದು ಬೆಳೆಸಲಿದ್ದಾರೆ. ಇವರು ಮಂಗಳೂರಿನ ಲೋಬೋ ಇಂಜಿನಿಯರಿಂಗ್ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಸ.ಹಿ.ಪ್ರಾ ಶಾಲೆ ವಳಲಂಬೆ ಹಾಗೂ ಸ.ಪ.ಪೂ ಕಾಲೇಜು ಗುತ್ತಿಗಾರು ಇದರ ಹಳೆ ವಿದ್ಯಾರ್ಥಿ.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಅಯೋಗದ ಜಿಲ್ಲಾಧ್ಯಕ್ಷರಾಗಿ ರಿಯಾಝ್ ಕಲ್ಲುಗುಂಡಿ

ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಆಯೋಗದ ಜಿಲ್ಲಾಧ್ಯಕ್ಷರಾಗಿ ಸಂಪಾಜೆ ಗ್ರಾಮದ ಕಲ್ಲುಂಗುಂಡಿಯ ರಿಯಾಝ್ ರವರನ್ನು ಅಯ್ಕೆ ಮಾಡಲಾಗಿದೆ. ಮಾನವ ಹಕ್ಕುಗಳ ಅಯೋಗದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಪೆರಿಗೇರಿಯವರ ಶಿಫಾರಸ್ಸು ಮೇರೆಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ರಾಷ್ಟ್ರೀಯ ನಾಯಕರಾದ ಡಾ.ಅವಿನಾಶ್ ಸಕುಂದೆ ರವರು ನೇಮಕಗೊಳಿಸಿದರು. ಇವರು ಸಂಪಾಜೆ ಗ್ರಾಮದ ಪೇರಡ್ಕ ಮುಹಿಯದ್ದೀನ್ ಜುಮ್ಮಾಮಸೀದಿ ಅಧ್ಯಕ್ಷರಾದ ಎಸ್.ಅಲಿ...

ಹಾಡು ಬಾ ಕೋಗಿಲೆ ಗಾಯನ ಸ್ಪರ್ಧೆಗೆ ಅರ್ಜಿ‌ ಆಹ್ವಾನ

ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಎಸ್.ಪಿ.ಬಾಲಸುಬ್ರಹ್ಮಣ್ಯ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಜ್ಞಾನವಿರುವ ವಾದ್ಯಗೋಷ್ಠಿಯೊಂದಿಗೆ ಹಾಡುವ 12 ರಿಂದ 20 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಈ ಕೆಳಕಂಡ ಚಲನ ಚಿತ್ರಗಳಾದ ನ್ಯಾಯವೇ ದೇವರು, ಸಾಕ್ಷಾತ್ಕಾರ, ಬೆಂಕಿಯ ಬಲೆ, ದೇವರ ಮಕ್ಕಳು, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಬಂಧನ, ನೀ...

ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ

ಬೇಕಾಗಿದ್ದಾರೆ : ಸುಳ್ಯದ ಸಂಸ್ಥೆಯೊಂದಕ್ಕೆ ಕಂಪ್ಯೂಟರ್ ತಿಳಿದಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಮೊ : 77601 71607

ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಡಾ. ಅನುರಾಧಾ ಕುರುಂಜಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ಕರ್ನಾಟಕ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ಆದ ಡಾ. ಅನುರಾಧಾ ಕುರುಂಜಿಯವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ ಮತ್ತು ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಇವುಗಳ ಸಹಯೋಗದೊಂದಿಗೆ ನಡೆಯುವ "ಭಾಷಾ ಶಾಸ್ತ್ರೀಯ ನೆಲೆಯಲ್ಲಿ ದಕ್ಷಿಣದ ಲಂಬಾಣಿ ಭಾಷೆ" ಎಂಬ ವಿಷಯದ ಕುರಿತ...

ಸುಬ್ರಹ್ಮಣ್ಯ : ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ

ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ "ಶ್ರೀ ದೇವಿಮಹಾತ್ಮೆ" ಎಂಬ ಯಕ್ಷಗಾನ ಬಯಲಾಟ ಜರಗಿತು.ಈ ಸಂದರ್ಭದಲ್ಲಿ ಮೇಳದ ಪ್ರಧಾನ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ, ದೇವಿಪಾತ್ರಧಾರಿ ಅಕ್ಷಯ ಕುಮಾರ್ ಮಾರ್ನಾಡ್, ರಾಕೇಶ್ ರೈ ಅಡ್ಕ,ಹಾಗೂ ನೆಪಥ್ಯ ಕಲಾವಿದ ರಮೇಶ್ ಜೋಗಿ ಇವರನ್ನು...
Loading posts...

All posts loaded

No more posts

error: Content is protected !!