ವ್ಯಾಕ್ಸಿನೇಷನ್ ಕಾರಣದಿಂದಾಗಿ ಸಂಭವನೀಯ ರಕ್ತದ ಕೊರತೆ ತಪ್ಪಿಸಲು ನಿಗವಹಿಸಬೇಕಿದೆ

ಮೇ 1 ರಿಂದ ನಿಂದ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿರುವುದರಿಂದ ಅದಕ್ಕೂ ಮೊದಲು ದಯವಿಟ್ಟು ರಕ್ತವನ್ನು ದಾನ ಮಾಡಲು 18 ರಿಂದ 45 ವರ್ಷ ವಯಸ್ಸಿನ ಯುವ ಜನತೆಯನ್ನು ವಿನಂತಿಸುತ್ತೇವೆ. ವ್ಯಾಕ್ಸಿನೇಷನ್ ನಂತರ ಎರಡನೇ ಡೋಸ್ ನಿಂದ ಕನಿಷ್ಠ 75 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ.ಸಾಮೂಹಿಕ ವ್ಯಾಕ್ಸಿನೇಷನ್ ಕಾರಣದಿಂದಾಗಿ ಮುಂದಿನ 2-3 ತಿಂಗಳಲ್ಲಿ ಸಂಭವನೀಯ ರಕ್ತದ ಕೊರತೆಯನ್ನು ತಪ್ಪಿಸಿ....

ಸರ್ಕಾರದ ಜತೆ ಕೈಜೋಡಿಸಿ ಕೊರೋನಾ ಎರಡನೇ ಅಲೆಯ ವಿರುದ್ಧ ಹೋರಾಡಿ ಗೆಲ್ಲೋಣ

"ಕೊರೋನಾ" ಈ ಭೀಕರ ಕಾಯಿಲೆಯು ಜಗತ್ತಿನಾದ್ಯಂತ ವ್ಯಾಪಿಸಿದೆ ಹಾಗೂ ವ್ಯಾಪಿಸುತ್ತಿದೆ. ನಮ್ಮ ಭಾರತ ದೇಶವೂ ಈ ಮಹಾಮಾರಿಗೆ ಹೊರತಾಗಿಲ್ಲ. ಭಾರತದಲ್ಲಿ ಈ ಕೊರೋನಾ ದ ಮೊದಲನೆಯ ಅಲೆ ಲಕ್ಷಾಂತರ ಜನರಿಗೆ ವಕ್ಕರಿಸಿತ್ತು. ಆದರೆ ಈಗ ಇದೇ ಕೊರೋನಾ ದ ಎರಡನೇಯ ಅಲೆ ಬಂದಿದ್ದು ಈ ಎರಡನೆಯ ಅಲೆ ಮೊದಲನೆಯ ಅಲೆಗಿಂತ ಹೆಚ್ಚು ಬಲಿಷ್ಠವಾಗಿದ್ದು ನಮ್ಮ ರಾಜ್ಯವಾದ...
Ad Widget

ಹಣಕ್ಕಾಗಿ ಹೆಣವಾಗಿಸಬೇಡಿ -ಕೊರೊನದ ಹೆಸರಲ್ಲಿ ಮಾನವೀಯತೆಯನ್ನು ಸುಡಬೇಡಿ

ಕೊರೋನಾ ಎರಡನೇ ಅಲೆ…ಮತ್ತೆ ಬುಗಿಲೆದ್ದಿದೆ. ಜನರ ಆರ್ತನಾದನ ಮುಗಿಲು ಮುಟ್ಟಿದರೂ ಕೇಳೋರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಇನ್ನೇನು ಎಲ್ಲವು ಸರಿಯಾಗಿ ನಡೀತಿದೆ ಅನ್ನೋವಾಗ್ಲೆ ಮತ್ತೆ ಒಕ್ಕರಿಸಿಕೊಂಡಿರುವ ಈ ಮಹಾಮಾರಿಯ ಬಗ್ಗೆ ಏನು ಹೇಳೋದು..? ದಿನೇದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಪರಿಹಾರ…? ಕಾರಣ…? ಹೀಗೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದನ್ನು ಹುಡುಕುತ್ತಾ ಹೋದಂತೆ ಪ್ರಶ್ನೆಗಳೇ ಹೆಚ್ಚಾಗಿ ಕಾಣಿಸ್ತಿವೆ ಹೊರತು....

ಕೊರೊನ 2ನೇ ಅಲೆ- ಲಾಕ್ ಡೌನ್- ಕರ್ಪ್ಯೂ- ಬಂದ್ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯ ಕಳುಹಿಸಿ

ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ‌ಬಂದ್ ಮತ್ತು‌ ಅದರಿಂದಾಗುತ್ತಿರುವ ಪರಿಣಾಮ, ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಳುಹಿಸಿ.ನಾವು ಅಮರ ಸುದ್ದಿ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತೇವೆ.ವಾಟ್ಸಾಪ್ : 9449387044Gmail : amarasuddi@gmail.com www.amarasuddi.com

ಸತ್ಯವತಿ ನಾಗನಕಜೆ ಬಿ.ಎಡ್. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಕಡಬ‌ ತಾಲ್ಲೂಕು ಎಡಮಂಗಲ ಗ್ರಾಮದ ನಾಗನಕಜೆಯ ಕುಮಾರಿ. ಸತ್ಯವತಿ. ಎನ್ ಇವರು ಈ ಸಾಲಿನ ಬಿ. ಎಡ್ ಪರೀಕ್ಷೆಯಲ್ಲಿ 76.58% ಅಂಕವನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಪುತ್ತೂರಿನ ತೆಂಕಿಲದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ. ನಾಗನಕಜೆ ನಾರ್ಣಪ್ಪ ಗೌಡ ಮತ್ತು ಉಮಾವತಿ ದಂಪತಿಗಳ ಪುತ್ರಿ

ನಗರ ಪಂಚಾಯತ್ ಸಾಮಾನ್ಯ ಸಭೆ : ಅಧಿಕಾರಿಗಳ ಗೈರು, ಸದಸ್ಯರ ಆಕ್ರೋಶ, ಅಧ್ಯಕ್ಷ – ಮುಖ್ಯಾಧಿಕಾರಿ ನಡುವೆ ಭಿನ್ನಾಭಿಪ್ರಾಯ, ವಿರೋಧ ಪಕ್ಷ ತರಾಟೆ

ಕೊರೊನಾದಿಂದ ಇಡೀ ದೇಶವೇ ತತ್ತರಿಸಿದ್ದು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಾವಿನ ಸಂಖ್ಯೆ ಎಲ್ಲೆ ಮೀರಿದೆ. ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ಎಷ್ಟಿದ್ದಾರೆ. ಸುಳ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಥಳಿಯ ಆಡಳಿತಕ್ಕೆ ಅಧಿಕಾರಿಗಳು ಮಾಹಿತಿಯೇ ನೀಡಿಲ್ಲ. ಆರಿಸಿದ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದ ಅಽಕಾರಿಗಳ ಮೇಲೆ ಕಠಿಣ ಕ್ರಮ...

ಕೇನ್ಯ : ಅಕ್ರಮ ಕಳ್ಳಬಟ್ಟಿ ವಶ – ಪೋಲೀಸ್ ದಾಳಿ ವೇಳೆ ಆರೋಪಿ ಪರಾರಿ

ಕೇನ್ಯ ಗ್ರಾಮದ ಕೆಮ್ಮಟೆ ಎಂಬಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸುಳ್ಯ ವಲಯ ಅಬಕಾರಿ ನಿರೀಕ್ಷಕರು ದಾಳಿ ನಡೆಸಿದ್ದಾರೆ. ಈ ವೇಳೆ 10 ಬಾಟಲಿಗಳಲ್ಲಿ ಸಂಗ್ರಹಿಸಿದ್ದ 10 ಲೀ ಗೇರು ಹಣ್ಣಿನಿಂದ ತಯಾರಿಸಿದ ಸರಾಯಿ ಪತ್ತೆಯಾಗಿದ್ದು, ದಾಳಿ ವೇಳೆ ಆರೋಪಿ ಕೆಮ್ಮಟೆ ಸುಂದರ ಗೌಡ ಪರಾರಿಯಾದರೆಂದು ತಿಳಿದುಬಂದಿದೆ. ಅಬಕಾರಿ ನಿರೀಕ್ಷಕ ಸಿದ್ದಪ್ಪ...

ಎ.26 ರಂದು ದೀಕ್ಷಾ ಟ್ರೇಡರ್ಸ್ ನ ವಿಸ್ತೃತ ಡ್ರೆಸ್ ಮಳಿಗೆ ಉದ್ಘಾಟನೆ

ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ಟೆಕ್ಸ್ ಟೈಲ್ಸ್ & ರೆಡಿಮೇಡ್ ಡ್ರೆಸ್ ಮಳಿಗೆ ದೀಕ್ಷಾ ಟ್ರೇಡರ್ಸ್ ನ ನೂತನ ವಿಸ್ತ್ರತ ಮಳಿಗೆ ಎ.26 ರಂದು ಉದ್ಘಾಟನೆಗೊಳ್ಳಲಿದೆ.ಕಳೆದ 27 ವರ್ಷಗಳಿಂದ ಜವುಳಿ ವ್ಯಾಪಾರದಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ದೀಕ್ಷಾ ಟ್ರೇಡರ್ಸ್ ಈಗ ಜನರ ಹೆಚ್ಚಿನ ಅನುಕೂಲತೆಗಾಗಿ, ಮಳಿಗೆಯನ್ನು ಮೇಲಂತಸ್ತಿನಲ್ಲಿ ವಿಶಾಲವಾಗಿ ವಿಸ್ತ್ರತಗೊಳಿಸಿದ್ದು, ಬಟ್ಟೆಗಳ ಅಪಾರ ಸಂಗ್ರಹವಿದ್ದು...

ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರ ವರ್ತನೆಗೆ ಎಬಿವಿಪಿ ಖಂಡನೆ

ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ನೀತಿ ನಿಯಮ ಉಲ್ಲಂಘಿಸಿದ ಬಗ್ಗೆ ಧಾರ್ಮಿಕ ವಿಚಾರ ಮುಂದಿಟ್ಟು ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಅನಾಗರಿಕ ವರ್ತನೆ ಎಂದಿರುವ ಎಬಿವಿಪಿ ಖಂಡನೆ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಕಾಲೇಜು ಆವರಣದಲ್ಲಿ ಗೊಂದಲವನ್ನು ಸೃಷ್ಟಿಸಿದ ಕ್ಯಾಂಪಸ್ ಫ್ರಂಟ್‌ನ ನಾಯಕನೆಂದು ಹೇಳಿಕೊಳ್ಳುತ್ತಿರುವ ಅನ್ಸಾರ್ ಬೆಳ್ಳಾರೆ ಮತ್ತು ಇದಕ್ಕೆ ಬೆಂಬಲಿಸುತ್ತಿರುವ ಸಂಘಟನೆಗಳ ಅನಾಗರಿಕ...

ಚಳ್ಳ ದೇವಸ್ಥಾನದ ಜೀರ್ಣೊದ್ಧಾರಕ್ಕೆ ಎ.20 ರಂದು ಚಿಂತನಾ ಸಭೆ

ದೇವಚಳ್ಳ ಗ್ರಾಮದ ಚಳ್ಳದಲ್ಲಿ ಜೀರ್ಣೋದ್ಧಾರಗೊಳ್ಳದೇ ಅವನತಿ ಹೊಂದಿದ್ದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿಬಂದಿದ್ದು ಎ.20 ರಂದು ಭಕ್ತಾಭಿಮಾನಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ದೇವಚಳ್ಳ, ನೆಲ್ಲೂರುಕೆಮ್ರಾಜೆ, ಅಮರ ಮುಡ್ನೂರು ಗ್ರಾಮದ ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರಶ್ನೆ ಚಿಂತನೆ ನಡೆದ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಆಗಬೇಕೆಂದು ಕಂಡುಬಂದಿತ್ತು. ಹಳ್ಳದಲ್ಲಿ ದೇವಸ್ಥಾನ ಇತ್ತೆಂಬ ಜಾಗದಲ್ಲಿ ಕೆರೆ ಹಾಗೂ...
Loading posts...

All posts loaded

No more posts

error: Content is protected !!