ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಪೆರುವಾಜೆಯಲ್ಲಿ ಭಜನಾ ಸೇವೆ

ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಭಜನಾ ತಂಡದಿಂದ ಪೆರುವಾಜೆ ಕುಂಡಡ್ಕ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಒಂದು ಗಂಟೆಗಳ ಕಾಲ ನಿರಂತರ ಕುಣಿತ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಶಿಕ್ಷಕ ಶಿವಪ್ರಸಾದ್, ವಿದ್ಯಾರ್ಥಿ ಪೋಷಕರು, ತರಬೇತುದಾರ ಸದಾನಂದ ಆಚಾರ್ಯ ಉಪಸ್ಥಿತರಿದ್ದರು. ದೇವಳದ ಆಡಳಿತ ಮಂಡಳಿ ಶಾಲಾ ಭಜನಾ ತಂಡಕ್ಕೆ...

ಎಲಿಮಲೆ : ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಪೇರಾಲುರಿಗೆ ಅಭಿನಂದನೆ

ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಗೊಂಡ ಚಂದ್ರಶೇಖರ ಪೇರಾಲುರವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಡಿ.16 ರಂದು ಶಾಲಾ ಸಭಾಂಗಣ ದಲ್ಲಿ ನಡೆಯಿತು.ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ನಂದಗೋಕುಲ ಸಭಾಧ್ಯಕ್ಷತೆ ವಹಿಸಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅಭಿನಂದನಾ ಭಾಷಣ ಮಾಡಿದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ದೇವಚಳ್ಳ...
Ad Widget

ಡಿ.25 : ಐವರ್ನಾಡಿನಲ್ಲಿ ಪ್ರಸನ್ನ ಮೆಡಿಕಲ್ಸ್ ಶುಭಾರಂಭ

ಐವರ್ನಾಡು ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಶ್ರೇಯಸ್ವಿ ವಿ ಮತ್ತು ಐವರ್ನಾಡು ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ ಸಿ.ಕೆ ಯವರ ಮಾಲಕತ್ವದ ಪ್ರಸನ್ನ ಮೆಡಿಕಲ್ಸ್ ಡಿ.25 ರಂದು ಶುಭಾರಂಭಗೊಳ್ಳಲಿದೆ.ಇಲ್ಲಿ ಎಲ್ಲಾ ತರದ ಆಯುರ್ವೇದಿಕ್ ಮತ್ತು ಆಲೋಪತಿ ಹಾಗೂ ಸಾಕು ಪ್ರಾಣಿಗಳಿಗೆ ಬೇಕಾದ ಔಷಧಿಗಳು, ಪ್ರಸಾದನ ಸಾಮಾಗ್ರಿಗಳು ದೊರೆಯುತ್ತದೆ.

ಡಿ. 19 ರಂದು ಕೊಡಿಯಾಲದಲ್ಲಿ ಸ್ವಚ್ಛತಾ ಸಂಭ್ರಮ ಆಚರಣೆ, ಮಾಣಿಲ ಶ್ರೀಗಳ ಭೇಟಿ

ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ಸ್ವಚ್ಛತೆ ಧೈಯದೊಂದಿಗೆ ನ.28 ರಿಂದ ಆರಂಭವಾದ ಬೃಹತ್ ಸ್ವಚ್ಛತಾ ಅಭಿಯಾನ ಸತತ ನಾಲ್ಕು ಭಾನುವಾರ ನಡೆದು ಕಾರ್ಯಕ್ರಮ ಪೂರ್ಣಗೊಂಡಿದೆ. ಇದರ ಅಂಗವಾಗಿ ಸಾರ್ವಜನಿಕರ ಮನೆ ಮನಗಳಿಗೆ ಸ್ವಚ್ಛತಾ ಪರಿಕಲ್ಪನೆಯನ್ನು ತಲುಪಿಸುವ ಉದ್ದೇಶದಿಂದಸ್ವಚ್ಛತಾ ಸಂಭ್ರಮ ಆಚರಣೆಯುಡಿ.19ರಂದು ಅಪರಾಹ್ನ 2-00 ಗಂಟೆಯಿಂದಕಲ್ಲಗದ್ದೆ ಶ್ರೀ ಸುಬ್ರಹ್ಮಣೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ...

ಸುಳ್ಯ : ವಿಷ್ಣು ಎಂಟರ್ ಪ್ರೈಸಸ್ ಡಿಜಿಟಲ್ ಜನಸೇವಾ ಕೇಂದ್ರ ಶುಭಾರಂಭ

ಸುಳ್ಯದ ಕೆ‌.ಎಸ್.ಆರ್‌.ಟಿ.ಸಿ. ಬಸ್ ನಿಲ್ದಾಣದ ಬಳಿ ಇರುವ ಪ್ರಾಥಮಿಕ ಸಹಕಾರ ‌ಕೃಷಿ‌ ಮತ್ತು ಗ್ರಾಮೀಣ ‌ಭೂ ಅಭಿವೃದ್ಧಿ ಬ್ಯಾಂಕಿನ ವಾಣಿಜ್ಯ ಸಂಕೀರ್ಣದಲ್ಲಿ ಮುಖೇಶ್ ಪಡ್ಪು ರವರ ಮಾಲಕತ್ವದ ಶ್ರೀ ವಿಷ್ಣು ಎಂಟರ್ ಪ್ರೈಸಸ್ ಡಿಜಿಟಲ್ ಜನ ಸೇವಾ ಕೇಂದ್ರ ಡಿ. 17‌ ರಂದು ಶುಭಾರಂಭಗೊಂಡಿತು.

ಡಿ.19 ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ

ಸುಬ್ರಹ್ಮಣ್ಯ - ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಡಿ.19 ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಎಸ್.ಎಸ್.ಪಿ.ಯು ಕಾಲೇಜಿನ ಬೆಳಿಹಬ್ಬ ಸಭಾಭವನದಲ್ಲಿ ನಡೆಯಲಿದ್ದು, ಮಹಾಸಭೆಯ ನಂತರ ಮದ್ಯಾಹ್ನ 12:00 ಗಂಟೆಗೆ ಮಿತ್ರ ಆಪ್ತ ಸಮಾಲೋಚನಾ ಕೇಂದ್ರ ತುಮಕೂರು ಇದರ ನಿರ್ದೇಶಕರಾದ ಸಿ.ಸಿ ಪಾವಟೆ ಅವರಿಂದ "ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರ...

ಜ.13 ರಿಂದ ಜ.16 : ನಾಲ್ಕೂರು ಹಲ್ಗುಜಿ ಯಲ್ಲಿ ದೈವಸ್ಥಾನ ಪುನರ್ ಪ್ರತಿಷ್ಠೆ, ಕಲಶಾಭಿಷೇಕ – ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು ಗ್ರಾಮದ ಹಲ್ಗುಜಿಯಲ್ಲಿ ಜ.13 ರಿಂದ ಜ.16 ರ ತನಕ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದ್ದು ಇಂದು ದೈವಸ್ಥಾನದ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ದೈವಸ್ಥಾನದ ವಾಸ್ತುಶಿಲ್ಪಿ ವೆಂಕಟರಮಣ ಆಚಾರ್ಯ ಮರ್ಕಂಜ ಅವರು ಪುನರ್ ಪ್ರತಿಷ್ಠೆ, ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು....

ಸುಳ್ಯ :- ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕ್ಕಿ ಹಾಗೂ ತರಕಾರಿ ಹಸ್ತಾಂತರ

ಸುಳ್ಯ ತಾಲೂಕಿನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಡಿ.12 ರಿಂದ ಡಿ.26 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಭಕ್ತರಿಗೆ ನಿರಂತರ ಅನ್ನದಾನ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಚೆನ್ನಕೇಶವ ದೇವಸ್ಥಾನಕ್ಕೆ 40 ಕ್ವಿಂಟಾಲ್ ಅಕ್ಕಿ ಹಾಗೂ ತರಕಾರಿಗಳನ್ನು ಡಿ.18 ರಂದು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಹರಪ್ರಸಾದ್...

ಸುಬ್ರಹ್ಮಣ್ಯ :- ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಆಶ್ಲೇಷ್ ಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಆಶ್ಲೇಷ್.ಆರ್.ವಿ 32 ನಿಮಿಷ 4 ಸೆಕೆಂಡುಗಳ ಕಾಲ ತನ್ನ ಕೈಯ ತೋರು ಬೆರಳನ್ನು ಕೈಯ ಮಣಿಗಂಟಿನ ಹಿಂಭಾಗದಲ್ಲಿ ಮಡಚಿ ಹಿಡಿದಿಟ್ಟುಕೊಂಡು "ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್" ನಲ್ಲಿ ಸ್ಥಾನ ಪಡೆದಿದ್ದಾನೆ.ಬಳ್ಪ ಗ್ರಾಮದ ಕೃಷಿಕರಾದ ರಮೇಶ್ ಭಟ್ ಹಾಗೂ ವೀಣಾ ಸಾವಿತ್ರಿ ದಂಪತಿಗಳ ಪುತ್ರನಾದ ಆಶ್ಲೇಷ್...

ಡಿ.25- 26 ರಂದು ಸುಳ್ಯ ಹಬ್ಬ ಡಾ.ಪ್ರಭಾಕರ ಶಿಶಿಲ, ಕಮಲಾಕ್ಷಿ ವಿ. ಶೆಟ್ಟಿ ಕೆವಿಜಿ ಸಾಧನಶ್ರೀ ಪ್ರಶಸ್ತಿ

ಕೆವಿಜಿ ಸುಳ್ಯ ಹಬ್ಬದ ದಶಮಾನೋತ್ಸವ ಸಂಭ್ರಮವು ಇದೇ ಡಿ.25 ಹಾಗೂ ಡಿ. 26 ರಂದು ಕೆವಿಜಿ ಕಾನೊನು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸುಳ್ಯ ಹಬ್ಬ ಸೇವಾ ಸಂಘ ಸುಳ್ಯ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಅವರು ಹೇಳಿದರು.ಡಿ.17 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿ.25ರಂದು ಪೂ. 9.30...
Loading posts...

All posts loaded

No more posts

error: Content is protected !!