- Friday
- July 3rd, 2026
ಸುಳ್ಯ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ನ್ಯಾಯವಾದಿ ಸುಕುಮಾರ ಕೋಡ್ತುಗುಳಿಯವರನ್ನು ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೇಮಕಗೊಳಿಸಿದ್ದಾರೆ. ಇವರು 1990 ರಿಂದ 99 ರವರೆಗೆ ಯುವ ಜನತಾದಳದ ಅಧ್ಯಕ್ಷರಾಗಿ ದುಡಿದಿದ್ದಾರೆ. ಯುವ ಜನತಾದಳದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವಿಜಯ ರವರು ಲೋಕಸಭಾ ಚುನಾವಣೆಗೆ...
ಸುತ್ತಲಿನ ಪರಪಂಚ ಕತ್ತಲಾಗಿಹುದು, ನಾ ಸಾಗುವ ದಾರಿಯು ಮುಚ್ಚಿಹೋಗಿಹುದು…ನನ್ನ ಬದುಕು ಇಂದು ಬೂದಿ ಮುಚ್ಚಿದ ಕೆಂಡದಂತಾಗಿಹುದು,ಇದು ಸಿಡಿಯುವುದೋ ಶಮನಗೊಳ್ಳುವುದೋ ತಿಳಿಯದಾಗಿಹುದು…ಸಿಡಿದರೆ ನನ್ನ ಬದುಕು ಅಂತ್ಯವಾಗುವುದು, ಶಮನಗೊಂಡರೆ ಹೊಸ ಬದುಕು ಆರಂಭವಾಗುವುದು… ಪ್ರತಿಯೊಂದು ಅಂತ್ಯಕ್ಕೂ ಅರಂಭವಿಹುದು, ಪ್ರತಿಯೊಂದು ಘಟನೆಗೂ ಕಾರಣವೊಂದಿಹುದು…ಆ ಕಾರಣವಿಂದು ನಿಗೂಢವಾಗಿಹುದು…ಆ ನಿಗೂಢತೆಯ ಮೌನದಲ್ಲೂ ಉತ್ತರವೊಂದಡಗಿಹುದು…ಆ ಉತ್ತರ ತಿಳಿಯುವ ದಾರಿಯು ಮುಚ್ಚಿ ಹೋಗಿಹುದು, ಯಾರ ಕಣ್ಣಿಗೂ...
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ವರ್ತಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವರ್ತಕ ಸಮುದಾಯ ಭವನದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ...
ಕಲಬುರಗಿಯ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನ ನೀಡುವ ಡಾ. ಪಿಎಸ್.ಶಂಕರ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿಗೆ ದಂತವೈದ್ಯ ಡಾ.ಮುರಳಿಮೋಹನ ಚೂಂತಾರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು 2022ರ ಜನವರಿ 1ರಂದು ನಡೆಯುವ ಯುವ ಡಾ.ಪಿ.ಎಸ್. ಶಂಕರ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಠಿ ತಿಳಿಸಿದ್ದಾರೆ.ಡಾ.ಮುರಳಿಮೋಹನ್ ಚೂಂತಾರು ಅವರು ವೈದ್ಯಕೀಯಕ್ಷೇತ್ರಕ್ಕೆ...
ಐವರ್ನಾಡಿನ ಡಿವಿಜಿ ಕಾಂಪ್ಲೆಕ್ಸ್ ನಲ್ಲಿ ಅಶ್ವಿನ್ ರೆಡಿಮೆಡ್ಸ್ ಮತ್ತು ಫ್ಯಾನ್ಸಿ ಮಳಿಗೆಯು ಡಿ.23ರಂದು ಐವರ್ನಾಡಿನಲ್ಲಿ ಶುಭಾರಂಭಗೊಂಡಿತು.ಪರೋಹಿತ ವಿಶ್ವೇಶ್ವರಯ್ಯ ಬಾಳಿಲ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ| ಬಾಲಸುಬ್ರಹ್ಮಣ್ಯ ಭಟ್, ಧರ್ಮಪಾಲ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಮ್ಮಲ್ಲಿ ರೆಡಿಮೆಡ್ಸ್ ಬಟ್ಟೆಗಳು,ಫ್ಯಾನ್ಸಿ ಐಟಂಗಳು ಮಕ್ಕಳ ಆಟಿಕೆಗಳು,ಮಕ್ಕಳ ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳು ದೊರೆಯುತ್ತದೆ ಎಂದು ಮಾಲಕರಾದ ಶ್ವೇತಾ...
ಡಿ.26ರಂದು ನಡೆಯಬೇಕಿದ್ದ ಅಮರಮುಡ್ನೂರು ಗ್ರಾಮದ ಪಿಲಿಕಜೆ ಶ್ರೀ ಸೀತಾರಾಮ ಗೌಡರ ಪುತ್ರ ಪ್ರವೀಣ ಪಿಲಿಕಜೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ(ಮಡ್ತಿಲ) ಶ್ರೀ ಗಣೇಶರವರ ಪುತ್ರಿ ಚೈತ್ರ ಬೊಳ್ಳಾಜೆ ರವರ ವಿವಾಹವು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು, ಜ.20 ಗುರುವಾರದಂದು ಪೂರ್ವಾಹ್ನ ಗಂಟೆ 10.22ರ ಮೀನಾ ಲಗ್ನದ ಶುಭಮುಹೂರ್ತದಲ್ಲಿ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ.
ದಿನಾಂಕ : 26-12-2021ರಂದು ನಡೆಯಬೇಕಾಗಿದ್ದ ದೇವಚಳ್ಳಗ್ರಾಮದ ಮೆತ್ತಡ್ಕ ಶ್ರೀಮತಿ ಪದ್ಮಾವತಿ ಮತ್ತು ಹೊನ್ನಪ್ಪ ಗೌಡರ ಪುತ್ರ ಶರತ್ ಮತ್ತು ಅಮರಮುಡ್ನೂರು ಗ್ರಾಮದ ಕಾನಡ್ಕ ಶ್ರೀಮತಿ ಪುಷ್ಪವೇಣಿ ಮತ್ತು ಯಶವಂತ ಗೌಡರ ಪುತ್ರ ಹರ್ಷಿತಾರವರ ವಿವಾಹ ಕಾರ್ಯಕ್ರಮ ವು ಕಾರಣಾಂತರಗಳಿಂದ ಮುಂದೂಡಲಾಗಿದೆ. ಇವರ ವಿವಾಹ ಕಾರ್ಯಕ್ರಮವು ಇದೇ ಬರುವ ದಿನಾಂಕ 23-01-2022ರಂದು ವಿಷ್ಣು ಕಲಾ ಮಂದಿರ ಮಾವಿನಕಟ್ಟೆಯಲ್ಲಿ...
ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಭಜನಾ ತಂಡವು ಅನೇಕ ಕಡೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಕೊಡುಗೈ ದಾನಿ ಶ್ರೀಮತಿ ಹರಿಣಾಕ್ಷಿ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಅವರು ಭಜನಾ ತಂಡದ ಹುಡುಗಿಯರಿಗೆ ಸಮವಸ್ತ್ರ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ ವೈ ಬಿ ಇಬ್ಬರಿಗೂ...
ಸುಬ್ರಹ್ಮಣ್ಯ - ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಇವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಪಿ.ಯು ಕಾಲೇಜಿನ ಬೆಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘವು 2020-21 ನೇ ಸಾಲಿನಲ್ಲಿ 20,06,389 ರೂಪಾಯಿ ಲಾಭಾಂಶ ದಾಖಲಿಸಿದ್ದು, ಸಂಘದ ಸದಸ್ಯರಿಗೆ ಶೇ.6%...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಚುತ ಪೂಜಾರಿ, ಜೆಸಿಐ ಇಂಡಿಯಾದ ವಲಯ...
Loading posts...
All posts loaded
No more posts
