- Friday
- July 3rd, 2026
ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಭಜನೆ ತರಬೇತಿಯ ಸಮಾರೋಪ ಸಮಾರಂಭ ಡಿ.25 ರಂದು ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು. ರಾಧಾಕೃಷ್ಣ ರಾವ್ ಉಡುವೆಕೋಡಿ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀನಿವಾಸ ಜೋಗಿಬೆಟ್ಟು ಮತ್ತು ವೆಂಕಟ್ರಮಣ ಆಚಾರ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಜನೆ ಹೇಳಿಕೊಟ್ಟರು. ಬಾಳಿಲ ಗ್ರಾಮ ಪಂಚಾಯತ್...
ಐವರ್ನಾಡು ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ್ ಸಿ.ಕೆ ಮತ್ತು ಶ್ರೀಮತಿ ಶ್ರೇಯಸ್ವಿ .ವಿ ಯವರ ಮಾಲಿಕತ್ವದ ಪ್ರಸನ್ನ ಮೆಡಿಕಲ್ಸ್ ಡಿ.25 ರಂದು ಐವರ್ನಾಡು ಮುಖ್ಯ ರಸ್ತೆ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ನಿವೃತ್ತ ಪ್ರಾಂಶುಪಾಲರಾದ ವಿಘ್ನೇಶ್ವರ ವರ್ಮುಡಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಎಸ್.ವಿ.ಎಂ ಮೆಡಿಕಲ್ಸ್...
ಐವರ್ನಾಡು, ಪಾಂಬಾರು, ಅಮಲ, ರಸ್ತೆಯ ದುರಸ್ತಿಯಾಗಿರದೇ ಇರುವುದನ್ನು ವಿರೋಧಿಸಿ ಜ.3 ರಂದು ಐವರ್ನಾಡು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಡಿ. 25 ರಂದು ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಹಾಗೂ ಉಪಾಧ್ಯಕ್ಷರನ್ನಾಗಿ ಅಶೋಕ್ ಎಡಮಲೆ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ...
ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.24 ಶುಕ್ರವಾರದಂದು ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕೊರಗಜ್ಜ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ವರ್ಷಾವಧಿಯ ಶ್ರೀ ಕೊರಗಜ್ಜ ದೈವದ ನೇಮೋತ್ಸವ ಜರುಗಿತು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು...
ಕೆದಂಬಾಡಿ ಸನ್ಯಾಸಿ ಗುಡ್ಡೆ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶದಲ್ಲಿ ಇಂದು ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಭಜನಾ ಸೇವೆ ನಡೆಸಲಾಯಿತು. ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಹರಿಣಾಕ್ಷಿ ಮತ್ತು ತರಬೇತುದಾರರಾದ ಸದಾನಂದ ಆಚಾರ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಭಜನಾ ತಂಡದ ಸುಮಾರು 24 ಸದಸ್ಯರು...
ಕಳಂಜ ಬುಖಾರಿಯ ಜುಮಾ ಮಸೀದಿಯ ಬಳಿ ಬದ್ರೀಯಾ ಕಲ್ಚರಲ್ ಸೆಂಟರ್ ಕಳಂಜ ಇದರ ನೂತನ ಕಛೇರಿಯ ಉದ್ಘಾಟನೆ ಕಾರ್ಯಕ್ರಮವು ಡಿ.24ರಂದು ಮಧ್ಯಾಹ್ನ 2 ಗಂಟೆಗೆ ನಡೆಯಿತು. ಉದ್ಘಾಟನೆಯನ್ನು ಊರ ಗಣ್ಯರಾದ ಉದಯ ಚಿಕನ್ ಸೆಂಟರ್ ಮಾಲಕ ಮುಹಮ್ಮದ್ ಕೆ.ಎಂ ನೆರವೇರಿಸಿದರು. ಕಾರ್ಯಕ್ರಮಕ್ಕೆ ದುವಾಶೀರ್ವಾದವನ್ನು ಸಂಶುದ್ದೀನ್ ಪೈಝಿ ಮಾಪಳ್ ನೆರವೇರಿಸಿದರು. ಗಣ್ಯ ಉಪಸ್ಥಿತಿಯಲ್ಲಿ ಬದ್ರೀಯಾ ಕಲ್ಚರಲ್ ಸೆಂಟರ್...
ಹರಿಹರ ಪಲ್ಲತ್ತಡ್ಕದ ಶ್ರೀ ಸಂಗಮ ಕ್ಷೇತ್ರದಲ್ಲಿ ಡಿ.24 ರಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠೆ ನಡೆಯಿತು. 2 ವರ್ಷಗಳ ಹಿಂದೆ ಬಾಲಕೃಷ್ಣ ನಾಯರ್ ರವರ ಮುಖಾಂತರ ನಡೆದ ಪ್ರಶ್ನೆಯಲ್ಲಿ ಸಂಗಮ ಕ್ಷೇತ್ರದಲ್ಲಿ ಈಗ ಇರುವ ಅಯ್ಯಪ್ಪ ಸ್ವಾಮಿ ಮಂದಿರವನ್ನು ತೆಗೆದು ಹೊಸದಾಗಿ ಮಂದಿರ ನಿರ್ಮಾಣ ಮಾಡಬೇಕು ಎಂದು ಕಂಡುಬಂದಿದ್ದು, ಕೊರೊನಾದ ಕಾರಣದಿಂದ...
ಡಿ.22 ರಂದು ಕೊಲ್ಲಮೊಗ್ರ ಕಡೆಯಿಂದ ಗಡಿಕಲ್ಲಿನ ಜಯಪ್ರಕಾಶ್ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿಯೊಂದು ರಸ್ತೆಯಲ್ಲಿ ಹೋಗುತ್ತಿದ್ದ ಪುಟ್ಟಮ್ಮ ಎಂಬ ವೃದ್ಧ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಅವರ ಬಲ ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆಗೆ ಹಾಗೂ ಕೈಗೆ ಸ್ವಲ್ಪ ಗಾಯವಾಗಿದ್ದು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ...
ಬಳ್ಪ ಮತ್ತು ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತುಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳಪುನರ್ಪ್ರತಿಷ್ಠಾ ಮಹೋತ್ಸವ 2022 ಜನವರಿ 17 ಸೋಮವಾರದಂದು ಪೂರ್ವಾಹ್ನ 08-45ರ ಮೀನ ಲಗೃದ ಶುಭ ಮುಹೂರ್ತದಲ್ಲಿಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಜನವರಿ 16 ರಿಂದ ಆರಂಭಗೊಂಡು ಜ....
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು. ಸಂಘವು ರೂ.100 ಕೋಟಿ 42 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.43ಲಕ್ಷ 64,287.81 ನಿವ್ವಳ ಲಾಭ ಗಳಿಸಿದೆ. ರೂ.1,73,03,559.32 ವಿವಿಧ ನಿಧಿಗಳಿವೆ. ರೂ.13,65,59,169.95...
Loading posts...
All posts loaded
No more posts
