ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಶಾಲೆಗೆ ಆಟ ಸಾಮಗ್ರಿಗಳ ಕೊಡುಗೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇಂದು ಸುಳ್ಯ ತಾಲೂಕಿನ ಮಾವಿನಕಟ್ಟೆ ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ಎಂಬ ಉದ್ದೇಶದಡಿಯಲ್ಲಿ ನೀಡಲ್ಪಡುವ ಸರಕಾರಿ ಶಾಲೆಗಳ ಆಟೋಟ ಸಾಮಾಗ್ರಿಗಳ...

ಮಾ.14: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಅಗೇಲು ಸೇವೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.14(ನಾಳೆ) ಸೋಮವಾರದಂದು ರಾತ್ರಿ ಗಂಟೆ 8.00ಕ್ಕೆ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ. ಅಗೇಲು ಸೇವೆ ಮಾಡಿಸುವ ಭಕ್ತಾದಿಗಳು ಒಂದು ದಿನ ಮುಂಚಿತವಾಗಿ ತಿಳಿಸುವಂತೆ ವಿನಂತಿಸಲಾಗಿದೆ. ಅದೇ ದಿನ ಸಂಜೆ ಗಂಟೆ 5.00ಕ್ಕೆ ಶ್ರೀ ಉಳ್ಳಾಕುಲು, ಮೈಷಂತಾಯ ದೈವಗಳಿಗೆ ಪೇರಾರ್ಚನೆ ಹಾಗೂ ಶ್ರೀ ಪಿಲಿಭೂತ ದೈವಕ್ಕೆ ತಂಬಿಲ...
Ad Widget

ಸುಬ್ರಹ್ಮಣ್ಯ : ಭಕ್ತರೋರ್ವರು ನೀಡಿದ ದೂರು – ಆರೋಪಿತರ ದೋಷಮುಕ್ತಿ

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತರೋರ್ವರನ್ನು ಮಠಕ್ಕೆ ಕರೆದುಕೊಂಡು ಹೋಗುವ ವಿಚಾರದಲ್ಲಿ ತಕರಾರು ಉಂಟಾಗಿ ಈ ವಿಚಾರದಲ್ಲಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಒಡ್ಡಿದರೆಂಬ ಆರೋಪದ ಅಡಿಯ ಆರೋಪಿಗಳು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ . 2019 ಜೂನ್ 6 ರಂದು ಬಿ. ಎ ಕುಮಾರ್ ಎಂಬುವರು ಸುಳ್ಯ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಶ್ರೀ ಸುಬ್ರಹ್ಮಣ್ಯ...

ಮಹಿಳೆಯರೇ ಸವ್ಯಸಾಚಿಗಳು : ಡಾ || ಚೂಂತಾರು

ಮಾ.13 ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಮಹಿಳಾ ಗೃಹರಕ್ಷಕಿ ಅಶ್ವಿನಿ ಕುಂಟಿಕಾನ ಮೆಟಲ್ ಸಂಖ್ಯೆ 736, ಇವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಇವರು ಪ್ರಸ್ತುತ ಬೆಳ್ಳಾರೆ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ...

ಗೂನಡ್ಕ : ಮೀಸಲು ಅರಣ್ಯ ಜಾಗದಲ್ಲಿ ಕಟ್ಟಿದ ಮಸೀದಿ ತೆರವುಗೊಳಿಸಲು ಹಿಂಜಾವೇ ಒತ್ತಾಯ – ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

ಸುಳ್ಯ ತಾಲೂಕಿನ ಸಂಪಾಜೆ ಮೀಸಲು ಅರಣ್ಯ ಪ್ರದೇಶವಾದ ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಕ್ರಮ ಮದರಸ ಮತ್ತು ದಫನಭೂಮಿಯನ್ನು ನಿರ್ಮಿಸಿದ್ದು, ಅದನ್ನು ೧ ತಿಂಗಳ ಒಳಗೆ ತೆರವುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ...

ಕೊಲ್ಲಮೊಗ್ರು : ದೊಡ್ಡಣ್ಣ ಶೆಟ್ಟಿ ಕೆರೆ ಹಸ್ತಾಂತರ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್. (ರಿ) ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಸುಬ್ರಹ್ಮಣ್ಯ ವಲಯ, ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿ ಕೊಲ್ಲಮೊಗ್ರು ಹಾಗೂ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಇವುಗಳ ಸಂಯುಕ್ತಾಶ್ರಯದಲ್ಲಿ ಮಾ.12 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ದೊಡ್ಡಣ್ಣ...

ಎನ್ನೆಂಸಿ: ವಿದ್ಯಾರ್ಥಿ ಸಂಘ ಉದ್ಘಾಟನೆ : ಅವಕಾಶವನ್ನು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ – ಎಂ ಬಿ ಸದಾಶಿವ

ವಿದ್ಯಾರ್ಥಿ ಸಂಘ ಕಾಲೇಜಿನ ಏಳಿಗೆಯ ದೃಷ್ಟಿಯಿಂದಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆಪ್ರತಿಯೊಬ್ಬರು ಅವರವರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮಗೆ ಕೊಟ್ಟ ಜವಾಬ್ದಾರಿಯನ್ನುಸರಿಯಾಗಿ ನಿಭಾಯಿಸಿ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಎಲ್ಲರೂ ಜೊತೆಯಾಗಿ ಹೆಜ್ಜೆಯಿರಿಸಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಲಯನ್ ಎಂಬಿ ಸದಾಶಿವ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ 2021-...

ಕೇಸರಿ ಶಾಲು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರವಿರಲಿ, ರಾಜಕೀಯದಲ್ಲಿ ಬೇಡ – ಎನ್ ಜಯಪ್ರಕಾಶ್ ರೈ

ಚೊಕ್ಕಾಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾವಿ ಬಳಸಿ ಮತ ಕೇಳಿದ್ದ ವಿಚಾರದ ಕುರಿತು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರು ಮಾ.12 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಸರಿ ಶಾಲ್ ನ್ನು ಸ್ವಾರ್ಥಕ್ಕೆ ಬಳಸಬೇಡಿ. ಸಹಕಾರಿ ಸಂಘದ ಚುನಾವಣೆಯಲ್ಲಿ ಬಳಸಿದ್ದು ಸರಿಯಲ್ಲ. ಏಕೆಂದರೆ ಕಾವಿ ಮತ್ತು ಭಗವದ್ಗೀತೆ ಇವೆರಡು ಹಿಂದುತ್ವದಲ್ಲಿ ಪವಿತ್ರವಾದದ್ದು ಎಂದರು....

ರಾಜ್ಯ ಮಟ್ಟದ ಕಲಾಸಿರಿ ರತ್ನ ಬಿರುದು ಮುಡಿಗೇರಿಸಿಕೊಂಡ ಸುಳ್ಯದ ಶುಭದಾ ಆರ್ ಪ್ರಕಾಶ್

ಹುಟ್ಟೂರಲ್ಲಿ ತನ್ನ ಕೋಗಿಲೆಯ ಕಂಠದಿಂದ ಮೋಡಿ ಮಾಡಿದ ಗಾಯಕಿ ಶುಭದಾ ಸರಿಗಮಪ ವೇದಿಕೆಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವಾರು ಕಾರ್ಯಕ್ರಮದಲ್ಲಿ ತನ್ನ ಮಾಧುರ್ಯ ಭರಿತ ಸ್ವರದಲ್ಲಿ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಸುಳ್ಯದ ಶುಭದಾ ಆರ್ ಪ್ರಕಾಶ್ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಕರ್ನಾಟಕ ರಾಜ್ಯ ಸಂಸ್ಥೆ ಟೀ ದಾಸರ ಹಳ್ಳಿ ಬೆಂಗಳೂರು...

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸುಳ್ಯಕ್ಕೆ ಭೇಟಿ – ನೌಕರರೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಂದ ನೌಕರರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಮಾ.11 ರಂದು ನಡೆಯಿತು. ಕಾರ್ಯಕ್ರಮವನ್ನು ಸಿ ಎಸ್ ಷಡಾಕ್ಷರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರಕಾರಿ...
Loading posts...

All posts loaded

No more posts

error: Content is protected !!