- Wednesday
- July 1st, 2026
ಶ್ರೀ ಇರ್ವೆರ್ ಉಳ್ಳಾಕುಲು ಪಾಲೆಪ್ಪಾಡಿಯ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಮಾ.13ರಂದು ಶ್ರಮದಾನ ನಡೆಸಲಾಯಿತು. ಶ್ರಮದಾನದಲ್ಲಿ ಪಾಲೆಪ್ಪಾಡಿ ಬೈಲಿನ ಸಮಸ್ತರು ಭಾಗವಹಿಸಿದ್ದು ಚಾವಡಿಯ ಬಳಿಯಲ್ಲಿ ಶ್ರಮದಾನ ನಡೆಸಲಾಯಿತು.
ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾಬೋಧಿನೀ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಹೊರಸಂಚಾರ ಮತ್ತು ಒಂದು ದಿನದ ಅಹೋರಾತ್ರಿ ಶಿಬಿರವನ್ನು ಮಾರ್ಚ್ 11 ಮತ್ತು 12ರಂದು ಹಮ್ಮಿಕೊಳ್ಳಲಾಗಿತ್ತು. ಈ ಹೈಕಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ 73 ಸ್ಕೌಟ್ ಮತ್ತು 33 ಗೈಡ್ ವಿದ್ಯಾರ್ಥಿಗಳನ್ನು ನಾಲ್ಕು ಸ್ಕೌಟ್ ಪಟಾಲಂ ಹಾಗೂ 2 ಗೈಡ್ ಪಟಾಲಂಗಳಾಗಿ ವಿಂಗಡಿಸಿ, ಪ್ರತೀ...
ಮುಕ್ಕೂರು ಶಾಲಾ ವಠಾರದಲ್ಲಿ ಕ್ರಿಕೆಟ್ ಪಂದ್ಯಕೂಟ ಮತ್ತು ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರ್ ಅಭಿನಯಿಸಿರುವ "ಕೊಡೆ ಬುಡ್ಪಾಲೆ" ತುಳು ಹಾಸ್ಯಮಯ ನಾಟಕ ಕಾರ್ಯಕ್ರಮವು ಮಾ.27ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಇಂದು(ಮಾ.13) ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆಯನ್ನು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಕುಂಡಡ್ಕ ಕೊರಗಜ್ಜ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಪೆರುವೋಡಿ ದೇವಸ್ಥಾನದಲ್ಲಿ...
ಅಬ್ಬಾ ಅದೆಷ್ಟು ಪ್ರತಿಭೆಗಳಿಗೆ ಒಡತಿ ಈ ಒಂಭತ್ತರ ಹರೆಯದ ಪುಟ್ಟ ಪೋರಿ. ಈಕೆಯ ಪ್ರತಿಭೆಗಳಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಅದೆಷ್ಟೋ. ಬಾನಲ್ಲಿ ಮಿಂಚೋ ಚುಕ್ಕಿಯ ನಡುವಲ್ಲಿ ಮಿಂಚೋ ಧ್ರುವತಾರೆ ಈ ನಮ್ಮ ಚುಕ್ಕಿ. ತನ್ನ ಅದ್ಭುತ ಪ್ರತಿಭೆಗಳ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ 2022 ರಲ್ಲಿ ತನ್ನ ಹೆಸರನ್ನು ಅಚ್ಚು ಹೊತ್ತಿರುವ ಈ...
ಬೆಂಗಳೂರು ದಾಸರಹಳ್ಳಿಯ ಕರ್ನಾಟಕ ರಾಜ್ಯ ಸಂಸ್ಥೆ ಜನಸ್ಪಂದನ ಟ್ರಸ್ಟ್ ನ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತಪ್ಪ ಎಸ್ ಮೇಡೆಗಾರ ಅವರು ನಾಗೇಶ್ ಬೆಳ್ಳಾರೆ ಅವರ ಸೇವೆಗಳನ್ನ ಗುರುತಿಸಿ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಲಾಯಿತು. ನಾಗೇಶ್ ಬೆಳ್ಳಾರೆ ಅವರು ಕೆಲವು ವರ್ಷಗಳಿಂದ ಪುಟಾಣಿ ಮಕ್ಕಳ ಪ್ರತಿಭೆಗಳಿಗೆ ಬೆಂಬಲ ನೀಡುತ್ತಾ, ಮಕ್ಕಳಿಗೆ ಹಲವಾರು ವೇದಿಕೆಗಳ ಒದಗಿಸಿಕೊಡುವಂತ್ತ ಕಲಕೆಳಸವನ್ನ ಮಾಡಿದ್ದಾರೆ....
ಮಾಣಿ- ಮೈಸೂರು ಹೆದ್ದಾರಿಯ ಅರಂತೋಡು ಸಮೀಪ ಹರಿಶ್ಚಂದ್ರ ಹೊದ್ದೆಟ್ಟಿ ಹಾಗೂ ಡಾ.ಸವಿತಾ ಸಿ.ಕೆ. ಮಾಲಕತ್ವದ ರಾಮ್ ದೇವಿ ಪ್ಯೂಯಲ್ ಸ್ಟೇಷನ್ ಮಾ. 13ರಂದು ಲೋಕಾರ್ಪಣೆಗೊಂಡಿತು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕೆ.ಸಿ. ಸಂಸ್ಥೆಯನ್ನು ಉದ್ಘಾಟಿಸಿದರು. ಅರಂತೋಡು ಸೊಸೈಟಿ ಮಾಜಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ನಿವೃತ್ತ ಪೊಲೀಸ್ ಅಧಿಕಾರಿ ಕುಸುಮಾಧರ ಕುಂಬ್ಲಾಡಿ ಮತ್ತು...
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇಂದು ಸುಳ್ಯ ತಾಲೂಕಿನ ಮಾವಿನಕಟ್ಟೆ ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ಎಂಬ ಉದ್ದೇಶದಡಿಯಲ್ಲಿ ನೀಡಲ್ಪಡುವ ಸರಕಾರಿ ಶಾಲೆಗಳ ಆಟೋಟ ಸಾಮಾಗ್ರಿಗಳ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.14(ನಾಳೆ) ಸೋಮವಾರದಂದು ರಾತ್ರಿ ಗಂಟೆ 8.00ಕ್ಕೆ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ. ಅಗೇಲು ಸೇವೆ ಮಾಡಿಸುವ ಭಕ್ತಾದಿಗಳು ಒಂದು ದಿನ ಮುಂಚಿತವಾಗಿ ತಿಳಿಸುವಂತೆ ವಿನಂತಿಸಲಾಗಿದೆ. ಅದೇ ದಿನ ಸಂಜೆ ಗಂಟೆ 5.00ಕ್ಕೆ ಶ್ರೀ ಉಳ್ಳಾಕುಲು, ಮೈಷಂತಾಯ ದೈವಗಳಿಗೆ ಪೇರಾರ್ಚನೆ ಹಾಗೂ ಶ್ರೀ ಪಿಲಿಭೂತ ದೈವಕ್ಕೆ ತಂಬಿಲ...
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತರೋರ್ವರನ್ನು ಮಠಕ್ಕೆ ಕರೆದುಕೊಂಡು ಹೋಗುವ ವಿಚಾರದಲ್ಲಿ ತಕರಾರು ಉಂಟಾಗಿ ಈ ವಿಚಾರದಲ್ಲಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಒಡ್ಡಿದರೆಂಬ ಆರೋಪದ ಅಡಿಯ ಆರೋಪಿಗಳು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ . 2019 ಜೂನ್ 6 ರಂದು ಬಿ. ಎ ಕುಮಾರ್ ಎಂಬುವರು ಸುಳ್ಯ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಶ್ರೀ ಸುಬ್ರಹ್ಮಣ್ಯ...
ಮಾ.13 ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಮಹಿಳಾ ಗೃಹರಕ್ಷಕಿ ಅಶ್ವಿನಿ ಕುಂಟಿಕಾನ ಮೆಟಲ್ ಸಂಖ್ಯೆ 736, ಇವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಇವರು ಪ್ರಸ್ತುತ ಬೆಳ್ಳಾರೆ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ...
Loading posts...
All posts loaded
No more posts
