ಗೂನಡ್ಕ : ಮೀಸಲು ಅರಣ್ಯ ಜಾಗದಲ್ಲಿ ಕಟ್ಟಿದ ಮಸೀದಿ ತೆರವುಗೊಳಿಸಲು ಹಿಂಜಾವೇ ಒತ್ತಾಯ – ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

ಸುಳ್ಯ ತಾಲೂಕಿನ ಸಂಪಾಜೆ ಮೀಸಲು ಅರಣ್ಯ ಪ್ರದೇಶವಾದ ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಕ್ರಮ ಮದರಸ ಮತ್ತು ದಫನಭೂಮಿಯನ್ನು ನಿರ್ಮಿಸಿದ್ದು, ಅದನ್ನು ೧ ತಿಂಗಳ ಒಳಗೆ ತೆರವುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ...

ಕೊಲ್ಲಮೊಗ್ರು : ದೊಡ್ಡಣ್ಣ ಶೆಟ್ಟಿ ಕೆರೆ ಹಸ್ತಾಂತರ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್. (ರಿ) ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಸುಬ್ರಹ್ಮಣ್ಯ ವಲಯ, ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿ ಕೊಲ್ಲಮೊಗ್ರು ಹಾಗೂ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಇವುಗಳ ಸಂಯುಕ್ತಾಶ್ರಯದಲ್ಲಿ ಮಾ.12 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ದೊಡ್ಡಣ್ಣ...
Ad Widget

ಎನ್ನೆಂಸಿ: ವಿದ್ಯಾರ್ಥಿ ಸಂಘ ಉದ್ಘಾಟನೆ : ಅವಕಾಶವನ್ನು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ – ಎಂ ಬಿ ಸದಾಶಿವ

ವಿದ್ಯಾರ್ಥಿ ಸಂಘ ಕಾಲೇಜಿನ ಏಳಿಗೆಯ ದೃಷ್ಟಿಯಿಂದಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆಪ್ರತಿಯೊಬ್ಬರು ಅವರವರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮಗೆ ಕೊಟ್ಟ ಜವಾಬ್ದಾರಿಯನ್ನುಸರಿಯಾಗಿ ನಿಭಾಯಿಸಿ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಎಲ್ಲರೂ ಜೊತೆಯಾಗಿ ಹೆಜ್ಜೆಯಿರಿಸಿದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಲಯನ್ ಎಂಬಿ ಸದಾಶಿವ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ 2021-...

ಕೇಸರಿ ಶಾಲು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರವಿರಲಿ, ರಾಜಕೀಯದಲ್ಲಿ ಬೇಡ – ಎನ್ ಜಯಪ್ರಕಾಶ್ ರೈ

ಚೊಕ್ಕಾಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾವಿ ಬಳಸಿ ಮತ ಕೇಳಿದ್ದ ವಿಚಾರದ ಕುರಿತು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅವರು ಮಾ.12 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಸರಿ ಶಾಲ್ ನ್ನು ಸ್ವಾರ್ಥಕ್ಕೆ ಬಳಸಬೇಡಿ. ಸಹಕಾರಿ ಸಂಘದ ಚುನಾವಣೆಯಲ್ಲಿ ಬಳಸಿದ್ದು ಸರಿಯಲ್ಲ. ಏಕೆಂದರೆ ಕಾವಿ ಮತ್ತು ಭಗವದ್ಗೀತೆ ಇವೆರಡು ಹಿಂದುತ್ವದಲ್ಲಿ ಪವಿತ್ರವಾದದ್ದು ಎಂದರು....

ರಾಜ್ಯ ಮಟ್ಟದ ಕಲಾಸಿರಿ ರತ್ನ ಬಿರುದು ಮುಡಿಗೇರಿಸಿಕೊಂಡ ಸುಳ್ಯದ ಶುಭದಾ ಆರ್ ಪ್ರಕಾಶ್

ಹುಟ್ಟೂರಲ್ಲಿ ತನ್ನ ಕೋಗಿಲೆಯ ಕಂಠದಿಂದ ಮೋಡಿ ಮಾಡಿದ ಗಾಯಕಿ ಶುಭದಾ ಸರಿಗಮಪ ವೇದಿಕೆಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವಾರು ಕಾರ್ಯಕ್ರಮದಲ್ಲಿ ತನ್ನ ಮಾಧುರ್ಯ ಭರಿತ ಸ್ವರದಲ್ಲಿ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಸುಳ್ಯದ ಶುಭದಾ ಆರ್ ಪ್ರಕಾಶ್ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಕರ್ನಾಟಕ ರಾಜ್ಯ ಸಂಸ್ಥೆ ಟೀ ದಾಸರ ಹಳ್ಳಿ ಬೆಂಗಳೂರು...

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸುಳ್ಯಕ್ಕೆ ಭೇಟಿ – ನೌಕರರೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಂದ ನೌಕರರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಮಾ.11 ರಂದು ನಡೆಯಿತು. ಕಾರ್ಯಕ್ರಮವನ್ನು ಸಿ ಎಸ್ ಷಡಾಕ್ಷರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರಕಾರಿ...

ಕೊಲ್ಲಮೊಗ್ರ : ಶಾಲಾ ಮಕ್ಕಳಿಗೆ ವಾಟರ್ ಬಾಟಲ್ ಕೊಡುಗೆ

ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರುಕ್ಮಯ್ಯಗೌಡ ಡೊಡ್ಡಿಹಿತ್ಲು ಮತ್ತು ಅವರ ಪುತ್ರರಾದ ಪ್ರಸಾದ್ ಹಾಗೂ ಮಹೇಶ ರವರು ಸುಮಾರು ರೂ 17000 ಮೌಲ್ಯದ ವಾಟರ್ ಬಾಟಲ್ ಗಳನ್ನು ನೀಡಿರುತ್ತಾರೆ.

ಅಡ್ತಲೆಯಲ್ಲಿ ಬಿ.ಎಸ್. ಎನ್. ಎಲ್. ಟವರ್ ಕಾರ್ಯಾರಂಭ

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಿರ್ಮಿಸಲಾಗಿದ್ದ ಬಿ ಎಸ್ ಎನ್ ಎಲ್ ಟವರ್ ಮಾ.3 ರಂದು ಕಾರ್ಯಾರಂಭ ಮಾಡಿದೆ. ಗ್ರಾಮದ ಅತೀ ಎತ್ತರದ ಪ್ರದೇಶದಲ್ಲಿರುವ ಈ ಟವರ್ ನಿಂದ ಇದುವರೆಗೂ ಸಿಗ್ನಲ್ ದೊರೆಯದಿದ್ದ ಹಲವು ಸ್ಥಳಗಳಲ್ಲಿ ಅತ್ಯುತ್ತಮ ಮತ್ತು ಅತೀ ವೇಗದ 3ಜಿ ಸಿಗ್ನಲ್ ದೊರೆಯುತ್ತಿದ್ದು ಗ್ರಾಹಕರು ಸಂತುಷ್ಟರಾಗಿದ್ದಾರೆ.ಟವರ್ ನಿರ್ಮಾಣವಾಗಿ ಹಲವು ಸಮಯ ಕಳೆದರೂ ಕಾರ್ಯಾಚರಣೆ ಆರಂಭಿಸದೆ...

ಅವಿನಾ ಕಣ್ಕಲ್ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ

ಪುತ್ತೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕೇನ್ಯ ಗ್ರಾಮದ ಕಣ್ಮಲ್ ಮನೆತನದ ಆನಂದ ಗೌಡ ಚೆನ್ನಕಜೆ ಮತ್ತು ಸಾಮೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರು ಶ್ರೀಮತಿ ಮೀಣಾ ಕುಮಾರಿ ದಂಪತಿಯ ಪುತ್ರಿ ಕು. ಅವಿನಾ ಉನ್ನತ ಶಿಕ್ಷಣಕ್ಕಾಗಿ ಮಾ. 10ರಂದು ಇಂಗ್ಲೆಂಡಿಗೆ ತೆರಳಿದ್ದಾರೆ. ಇವಳು ಎಲ್.ಕೆಜಿ. ಯು.ಕೆ.ಜಿ. ಯನ್ನು ಪಂಜ ಸೈನಿಕ ಶಾಲೆ, 1 ರಿಂದ 4...

ದೇವರಹಳ್ಳಿ ಯೇನೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸುಬ್ರಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಾಜೆ ಎಂಬಲ್ಲಿ ದೇವರಹಳ್ಳಿ ಮಧುವನ-ಯೇನೆಕಲ್ಲು ರಸ್ತೆಗೆ ಪಂಚಾಯಿತ್ ಅನುದಾನದಲ್ಲಿ ನಡೆದ ರಸ್ತೆಯ ಕಾಂಕ್ರೀಟೀಕರಣವನ್ನು ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ರಿಬ್ಬನ್ ಕತ್ತರಿಸಿ ಚಿನ್ನಪ್ಪ ಗೌಡ ಮಾಣಿಬೈಲು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಸ್ಥಳೀಯರಾದ ನಾರಾಯಣ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಪಂಚಾಯತ್ ಸದಸ್ಯ ದಿಲೀಪ್ ಉಪ್ಪಳಿಕೆ ಸ್ವಾಗತಿಸಿ, ಶ್ರೀಮತಿ...
Loading posts...

All posts loaded

No more posts

error: Content is protected !!